ಗುರುವಾರ ಯಡಿಯೂರಪ್ಪ ಟೀಂ ಬಿಜೆಪಿ ಕಚೇರಿಗೆ
ಬೆಂಗಳೂರು, ಜ.8 : ಮಾಜಿ ಸಿಎಂ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಅಧಿಕೃತವಾಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಪಕ್ಷಕ್ಕೆ ಮರಳಲಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಪ್ರಾಥಮಿಕ ಸದಸ್ವತ್ವ ಪಡೆಯಲಿದ್ದು, ಜ.15ರ ನಂತರ ನಡೆಯವ ಸಮಾವೇಶದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಕೆಜೆಪಿಯನ್ನು
ಬಿಜೆಪಿಯಲ್ಲಿ
ವಿಲೀನಗೊಳಿಸಿ
ಬಿಜೆಪಿಗೆ
ಮರಳುತ್ತೇನೆ
ಎಂದು
ಬಿ.ಎಸ್.ಯಡಿಯೂರಪ್ಪ
ಈಗಾಗಲೇ
ಘೋಷಿಸಿದ್ದಾರೆ.
ಗುರುವಾರ
ಈ
ಕುರಿತ
ಕಾರ್ಯಗಳು
ಆರಂಭವಾಗಲಿದ್ದು,
ಬೆಂಬಲಿಗರೊಂದಿಗೆ
ಯಡಿಯೂರಪ್ಪ
ಬಿಜೆಪಿಯ
ಪ್ರಾರ್ಥಮಿಕ
ಸದಸ್ಯತ್ವ
ಪಡೆಯಲಿದ್ದಾರೆ.
ನಂತರ
ಸಮಾವೇಶದಲ್ಲಿ
ಪಕ್ಷ
ಸೇರ್ಪಡೆಗೊಳ್ಳಲಿದ್ದಾರೆ.
[ಕೆಜೆಪಿ-ಬಿಜೆಪಿ
ವಿಲೀನಕ್ಕೆ
ಸ್ಪೀಕರ್
ಗೆ
ಮನವಿ]
ಗುರುವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸುವ ಬಿ.ಎಸ್.ಯಡಿಯೂರಪ್ಪ, ಸಿ.ಎಂ.ಉದಾಸಿ, ಶೋಭಾ ಕರಂದ್ಲಾಜೆ, ಎಂ.ಪಿ.ರೇಣುಕಾಚಾರ್ಯ, ಹರತಾಳು ಹಾಲಪ್ಪ, ಸುನೀಲ್ ವಲ್ಯಾಪುರೆ, ಬಿ.ಪಿ.ಹರೀಶ್, ಸುರೇಶ್ ಅವರೊಂದಿಗೆ ಪಕ್ಷದ ಪ್ರಾಥಮಿಕ ಸದಸ್ವತ್ವ ಪಡೆಯಲಿದ್ದಾರೆ. ಆದರೆ, ಯಡಿಯೂರಪ್ಪ ಅವರ ಆಪ್ತರಾಗಿದ್ದ ಧನಂಜಯ್ ಕುಮಾರ್ ಬಿಜೆಪಿಗೆ ಮರಳಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. [ಶಿವಮೊಗ್ಗ ಕ್ಷೇತ್ರದಿಂದ ಯಡಿಯೂರಪ್ಪ ಸ್ಪರ್ಧೆ]
ಗುರುವಾರ ಮೊದಲು ಯಡಿಯೂರಪ್ಪ ಕೆಜೆಪಿ ಕಚೇರಿಯಲ್ಲಿ ಪಕ್ಷದ ನಾಯಕರ ಸಭೆ ನಡೆಸಲಿದ್ದು, ನಂತರ ಬಿಜೆಪಿ ಕಚೇರಿಗೆ ಆಗಮಿಸಲಿದ್ದಾರೆ. ಈಗಾಗಲೇ ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಯಡಿಯೂರಪ್ಪ ಅವರು ಮನವಿ ಸಲ್ಲಿಸಿದ್ದಾರೆ. ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.
ಯಡಿಯೂರಪ್ಪ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆನಂತ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮುಂತಾದವರು ಉಪಸ್ಥಿತರಿರುವರು ಎಂದು ತಿಳಿದು ಬಂದಿದೆ.