ಬಿಎಸ್ವೈ ದತ್ತು ತೆಗೆದುಕೊಳ್ಳುವ ಗ್ರಾಮ ಯಾವುದು ಗೊತ್ತೆ?
ಉಡುಪಿ, ಸೆ.9 : ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಗಂಗೊಳ್ಳಿ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಬೈಂದೂರು ಸಮೀಪದ ಗಂಗೊಳ್ಳಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.
ಬೈಂದೂರಿನಲ್ಲಿ
ಸೋಮವಾರ
ಮಾತನಾಡಿದ
ಯಡಿಯೂರಪ್ಪ
ಅವರು,
ಪ್ರಧಾನಿ
ನರೇಂದ್ರ
ಮೋದಿ
ಅವರು
ಸ್ವಾತಂತ್ರ್ಯೋತ್ಸವ
ಭಾಷಣದಲ್ಲಿ
ಸಂಸದರು
ತಮ್ಮ
ಇಷ್ಟದ
ಗ್ರಾಮವನ್ನು
ದತ್ತು
ತೆಗೆದುಕೊಂಡು
ಅಭಿವೃದ್ಧಿ
ಮಾಡಬೇಕು
ಎಂದು
ಕರೆ
ನೀಡಿದ್ದರು.
ಅದರಂತೆ
ಗಂಗೊಳ್ಳಿ
ಗ್ರಾಮವನ್ನು
ದತ್ತು
ತೆಗೆದುಕೊಳ್ಳಲು
ನಿರ್ಧರಿಸಿದ್ದು,
ಈ
ಬಗ್ಗೆ
ಪ್ರಧಾನಿಗೆ
ಪತ್ರ
ಬರೆಯಲಾಗುವುದು
ಎಂದು
ಹೇಳಿದರು.
ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ಗಂಗೊಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. 166.5 ಕೋಟಿ ವೆಚ್ಚದಲ್ಲಿ ಕಡಲ ತೀರದ ಗ್ರಾಮಗಳಾದ ಶಿರೂರು, ಮರವಂತೆ, ಗಂಗೊಳ್ಳಿ ಮತ್ತು ಬೈಂದೂರನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು. [ಮಳೆ ಹಾನಿ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ : ಸಿಎಂ]
ಸರ್ಕಾರಕ್ಕೆ ಏನಾಗಿದೆ : ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಅವರು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಮಳೆಹಾನಿಯಿಂದ ಆಗಿರುವ ಅಂದಾಜಿನ ಬಗ್ಗೆ ಕೇಂದ್ರಕ್ಕೆ ವರದಿ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ದೂರಿದರು.[ಕೆಂಪುಕೋಟೆ ಮೇಲಿಂದ ಮೋದಿ ಹೇಳಿದ್ದೇನು?]
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಾನು ಭೇಟಿ ನೀಡುತ್ತೇನೆ ಎಂದು ಘೋಷಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಕೈಗೊಂಡರು. ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನರ ಹಿತವನ್ನು ಮರೆತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.