ಯಡಿಯೂರಪ್ಪ ಡೈರಿ ವಿಚಾರ : ಕಾಂಗ್ರೆಸ್ಗೆ ಸಿ.ಟಿ.ರವಿ 10 ಪ್ರಶ್ನೆಗಳು
ಬೆಂಗಳೂರು, ಮಾರ್ಚ್ 24 : ಕಾಂಗ್ರೆಸ್ ಬಿಡುಗಡೆ ಮಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡೈರಿ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಚಿವ ಸಿ.ಟಿ.ರವಿ ಅವರು ಡೈರಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, 'ನಿಮ್ಮ ಪಕ್ಷದ ರಾಷ್ಟ್ರೀಯ ಮುಖಂಡರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ1800 ಕೋಟಿ ರೂಪಾಯಿಗಳ ಪಾವತಿ ಕುರಿತಾದ ಡೈರಿಯ ಪ್ರಸ್ತಾಪ ಮಾಡಿದ್ದಾರೆ. ನಿಮ್ಮ ಆರೋಪದಲ್ಲಿ ಸಾಚಾತನ ಇದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಿ' ಎಂದು ಹೇಳಿದ್ದಾರೆ.
ಯಡಿಯೂರಪ್ಪ ಕಪ್ಪದ ಡೈರಿ 'ನಕಲಿ': ಕಾಂಗ್ರೆಸ್ಸಿಗೆ ತೀವ್ರ ಮುಖಭಂಗ
ಡೈರಿ ಬರೆಯುವವರು ಯಾರೂ ಪ್ರತಿ ಪುಟಗಳಲ್ಲಿ ಸಹಿ ಮಾಡುವುದಿಲ್ಲ. ಒಂದು ವೇಳೆ ಡೈರಿ ಬರೆಯುವವರು ಯಾರಿಗೆ ಕೊಟ್ಟಿದ್ದೇವೆ ಎಂದು ಮಾತ್ರ ಬರೆಯುವುದಿಲ್ಲ. ಯಾರಿಂದ ಬಂದಿದೆ ಎನ್ನುವುದನ್ನೂ ಬರೆಯುತ್ತಾರೆ. ಆದರೆ ಕಾಂಗ್ರೆಸ್ ಪ್ರಕಟಿಸಿರುವ ಡೈರಿಯಲ್ಲಿ ಇದಾವುದೂ ಇಲ್ಲ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಕಪ್ಪ : ಡೈರಿ ಬರಹವನ್ನು ಕೋರ್ಟ್ ಸಾಕ್ಷ್ಯವೆಂದು ಪರಿಗಣಿಸದು
2010ರ ಪೂರ್ವದಲ್ಲಿ ಯಡಿಯೂರಪ್ಪ ಅವರು ತಮ್ಮ ಸಹಿಯನ್ನು ಸಂಖ್ಯಾಶಾಸ್ತ್ರದ ಪ್ರಕಾರ ಯಡ್ಯೂರಪ್ಪ ಎಂದು ಮಾಡುತ್ತಿದ್ದರು. ದೇಶದ ಮತದಾರರು ಕೂಡ ತಾವೂ ಚೌಕೀದಾರ (ಮೈ ಭೀ ಚೌಕೀದಾರ್) ಎಂದು ಎಚ್ಚರವಾಗಿದ್ದಾರೆ. ನಿಮ್ಮ ನಕಲಿ ಆಟ ನಡೆಯುವುದಿಲ್ಲ ಎಂದು ಹೇಳಿದ್ದಾರೆ...
ನಕಲಿ Vs ಮತ್ತೊಂದು ತಿದ್ದಿದ ನಕಲಿ ಡೈರಿ: ಕಾಂಗ್ರೆಸ್ಗೆ ಬಿಎಸ್ವೈ ಟಾಂಗ್
ಕಾಂಗ್ರೆಸ್ಗೆ ಪ್ರಶ್ನೆಗಳು
ಪ್ರಶ್ನೆ
1
:
ಈ
ಡೈರಿ
ನಿಮಗೆ
ಸಿಕ್ಕಿದ್ದು
ಯಾವಾಗ?
ಪ್ರಶ್ನೆ
2
:
ಯಾರು
ಈ
ಡೈರಿಯನ್ನು
ತಂದುಕೊಟ್ಟರು?
ಪ್ರಶ್ನೆ
3
:
ಎಲ್ಲಿ
ಕೊಟ್ಟರು?
ದೂರು ಏಕೆ ಕೊಡಲಿಲ್ಲ?
ಪ್ರಶ್ನೆ
4
:
ಒರಿಜನಲ್
ಡೈರಿ
ಎಲ್ಲಿ?
ಪ್ರಶ್ನೆ
5
:
ಯಾಕೆ
ಇದುವರೆಗೂ
ಈ
ಡೈರಿ
ಆಧರಿಸಿ
ಲೋಕಾಯುಕ್ತ
ಅಥವಾ
ಎಸಿಬಿಗೆ
ದೂರು
ಕೊಡಲಿಲ್ಲ?
ತನಿಖೆ ಏಕೆ ನಡೆಯಲಿಲ್ಲ?
ಪ್ರಶ್ನೆ
6:
2013ರ
ಮೇ
ತಿಂಗಳಿನಿಂದ
ನಿಮ್ಮದೇ
ಪಕ್ಷದ
ಆಡಳಿತ
ಇದ್ದರೂ
ಯಾವುದೇ
ತನಿಖೆ
ನಡೆಸದೇ
ಇರಲು
ಕಾರಣವೇನು?
ಪ್ರಶ್ನೆ
7
:
ಯಡಿಯೂರಪ್ಪನವರದ್ದೆಂದು
ಹೇಳಲಾದ
ಡೈರಿಯು
ಡಿ.ಕೆ.ಶಿವಕುಮಾರ್
ಅವರ
ಮನೆಯಲ್ಲಿ
ಪತ್ತೆಯಾಗಿದ್ದು
ಹೇಗೆ?
ಇದಕ್ಕೆ
ಡಿ.ಕೆ.ಶಿವಕುಮಾರ್
ಉತ್ತರಿಸಬೇಕಾಗಿದೆ.
ಹಿಂದೆಯೂ ಡೈರಿ ಬಂದಿತ್ತು
ಪ್ರಶ್ನೆ 8 : ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಮುಖಂಡರು ಈಗ ಯಾವುದೇ ದೂರು ನೀಡದೇ ಇರಲು ಕಾರಣವೇನು?
ಪ್ರಶ್ನೆ 9 : ಎಂ.ಎಲ್.ಸಿ ಗೋವಿಂದಾರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ಸಿನ ಯಾವ್ಯಾವ ನಾಯಕರಿಗೆ ಹಣ ಸಂದಾಯವಾಗಿದೆ ಎನ್ನುವುದು ನಮೂದಾಗಿತ್ತು.ಆಗ ಕಾಂಗ್ರೆಸ್ ಮುಖಂಡರು ಮುಜಗರಕ್ಕೆ ಸಿಲುಕಿದ್ದಾಗಲೇ ಯಡಿಯೂರಪ್ಪ ಅವರ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
ಪ್ರಶ್ನೆ 10 : ಬಿಜೆಪಿ ನಾಯಕರದ್ದೆನ್ನಲಾದ ಡೈರಿ ಪ್ರಕರಣವು ಜನಲೋಕಪಾಲ್ ತನಿಖೆ ನಡೆಸಲು ಯೋಗ್ಯವಾಗಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ. ಆದರೆ, ಆರೋಪ ಮಾಡಿದವರು ದೂರು ನೀಡಬೇಕೇ ಅಥವಾ ದೂರಿಗೊಳಗಾದವರೇ?