ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಕುಡಿಯಲು ಹೋದ 3 ಬಾಲಕರು ಕೆರೆಗೆ ಬಿದ್ದು ಸಾವು

ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಇಳಿದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ಈ ಘಟನೆ ನಡೆದಿದೆ.

By Sachhidananda Acharya
|
Google Oneindia Kannada News

ಯಾದಗಿರಿ, ಏಪ್ರಿಲ್ 12: ಬಿರು ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಕುಡಿಯಲು ಹೋಗಿ ಮೂವರು ಬಾಲಕರು ನೀರು ಪಾಲಾದ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಐಬಿ ತಾಂಡಾದಲ್ಲಿ ನಡೆದಿದೆ.

ಬಿಸಿಲಿನಿಂದ ನೀರಿನ ದಾಹ ತಣಿಸಿಕೊಳ್ಳಲು ತಮ್ಮ ಅಜ್ಜನ ಜಮೀನಿನ ಬಾವಿಗೆ ಬಾಲಕರು ಇಳಿದಿದ್ದರು. ಈ ವೇಳೆ ಬಾಲಕರು ನೀರು ಪಾಲಾಗಿದ್ದಾರೆ. ಮೃತ ಬಾಲಕರನ್ನು ಅಜಯ್ (12 ವರ್ಷ), ವಿಜಯ್ (11 ವರ್ಷ), ಗಣೇಶ್ (13 ವರ್ಷ) ಎಂದು ಗುರುತಿಸಲಾಗಿದೆ. [ಅತ್ತ ಬಿರುಬಿಸಿಲು, ಇತ್ತ ಬರಸಿಡಿಲು: ಮೂವರ ಸಾವು]

Yadgir: 3 Children died after fell in to well

ತನ್ನ ಅಜ್ಜಿ ಯಮುನಾಬಾಯಿ ಜತೆ ಬಾಲಕರು ಹೊಲಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನಾರಾಯಣಪುರ ಪೊಲೀಸರ ಭೇಟಿ ನೀಡಿ ಮಕ್ಕಳ ಶವ ಮೇಲಕ್ಕೆತ್ತಿದ್ದಾರೆ. [ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]

English summary
Three children died after they fell in to well at Naranayanapur Tanda of Surpur talluk, Yadgir district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X