ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅನಂತಕುಮಾರ್ ಭೇಟಿ ಮಾಡಿಲ್ಲ; ಬಿಜೆಪಿ ಸೇರೊಲ್ಲ'

By Srinath
|
Google Oneindia Kannada News

Wont rejoin BJP again BSR Congress chief Sreeramulu Bellary
ಬಳ್ಳಾರಿ, ಅ.18: 'ನಾನು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿಲ್ಲ. ಅನಂತಕುಮಾರ್ ಅವರನ್ನೂ ಭೇಟಿ ಮಾಡಿಲ್ಲ. ಅಸಲಿಗೆ ಬಿಜೆಪಿ ಸೇರೋ ಪ್ರೋಗ್ರಾಮೇ ನನಗಿಲ್ಲಲ್ಲಾರೀ' ಎಂದು ಸುಗ್ಗಲಮ್ಮ ದೇವಿ ಮೇಲೆ ಆಣೆ ಮಾಡಿದಂತೆ ಬಿಎಸ್‌ಆರ್ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಳ್ಳಾರಿ ಗ್ರಾಮಾಂತರ ಸ್ವತಂತ್ರ ಶಾಸಕ ಶ್ರೀರಾಮುಲು ಅವರು ಬಿಜೆಪಿಗೆ ಹಿಂದಿರುಗಲಿದ್ದೇನೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರವಾದ ವಿಷಯ. ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ ಎಂದು ಇಂದು ತಿಳಿಸಿದ್ದಾರೆ.

ಅನಂತಕುಮಾರ್ ಜತೆ ಚರ್ಚೆ ನಡೆಸಿಲ್ಲ. ಅದೆಲ್ಲಾ ಕೇವಲ ವದಂತಿ. ಬಿಎಸ್‌ಆರ್ ಪಕ್ಷಕ್ಕೆ ಏನೂತೊಂದರೆಯಿಲ್ಲ. ಆ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದೂ ರಾಮು ಮಾರ್ಮಿಕವಾಗಿ ನುಡಿದಿದ್ದಾರೆ.

ಬಿಜೆಪಿ ಪಕ್ಷ ಸೇರಲು ಯಾವುದೇ ಷರತ್ತು ಹಾಕಿಲ್ಲ. ಪಕ್ಷಕ್ಕೆ ಸೇರುವುದಿಲ್ಲ ಎಂದ ಮೇಲೆ ಷರತ್ತಿನ ಅಗತ್ಯವೇನು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉತ್ತರಿಸಿದ್ದಾರೆ. ಈ ವದಂತಿಗಳಿಗೆ ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದೂ ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.

English summary
I Wont rejoin BJP again clarified BSR Congress chief Sreeramulu in Bellary today. Earlier it was rumored that Sreeramulu has met BJP general Secreatary in Bangalore and spoke about him joining BJP again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X