ಎಚ್ಡಿಕೆಗೆ ವಾರದ ಹಿಂದೆ ಝೀರೋ ಟ್ರಾಫಿಕ್, ಈಗ ಟ್ರಾಫಿಕ್ ಜಾಮ್ ಬಿಸಿ
ಬೆಂಗಳೂರು, ಜುಲೈ 30: ಕೇವಲ ಒಂದು ವಾರದ ಹಿಂದೆ ಝೀರೋ ಟ್ರಾಫಿಕ್ ನಲ್ಲಿ ಓಡಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಇಂದು (ಜು 30) ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡರು.
ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ, ಅವರಿಗೆ ಧೈರ್ಯ ತುಂಬಲು, ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿದ್ದರು.
ಬಿಜೆಪಿ ಕೂಡ ಸಾಂದರ್ಭಿಕ ಶಿಶು: ಕುಮಾರಸ್ವಾಮಿ ಅಭಿಪ್ರಾಯ
ಅಲ್ಲಿಂದ, ತಾವು ತಂಗುವ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ವಾಪಸ್ ತೆರಳುತ್ತಿದ್ದ ವೇಳೆ, ಗೃಹ ಕಚೇರಿ ಕೃಷ್ಣ ಎದುರುಗಡೆ ಸುಮಾರು ಐದು ನಿಮಿಷ ಕುಮಾರಸ್ವಾಮಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡರು.
ಎಸ್ ಎಂ ಕೃಷ್ಣ ಅವರ ನಿವಾಸಕ್ಕೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಬೆಳಗ್ಗೆಯಿಂದಲೇ ಡಿ ಕೆ ಶಿವಕುಮಾರ್ ಅವರ ನಿವಾಸದಲ್ಲೇ ಇದ್ದಾರೆ. ಇದಲ್ಲದೇ, ರಾಜಕೀಯ ಮುಖಂಡರು, ಚಿತ್ರನಟ, ನಟಿಯರು ಅವರ ನಿವಾಸಕ್ಕೆ ಆಗಮಿಸುತ್ತಿರುವುದರಿಂದ, ನಿವಾಸದ ಸುತ್ತ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
ಕಳೆದ ಮಂಗಳವಾರ, ಜುಲೈ 23ರಂದು ವಿಶ್ವಾಸಮತಯಾಚಸಿ, ಅದರಲ್ಲಿ ಸೋಲಾದ ನಂತರ, ಎಚ್ ಡಿ ಕುಮಾರಾಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿಗೆ ಬಾಹ್ಯ ಬೆಂಬಲ: ಕುಮಾರಸ್ವಾಮಿ ಮಹತ್ವದ ಸ್ಪಷ್ಟನೆ
ಕಾಫೀ ಡೇ ಮಾಲೀಕ ಮತ್ತು ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ಧಾರ್ಥ, ಸೋಮವಾರ (ಜುಲೈ 29) ಸಂಜೆಯಿಂದ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆ ಸ್ಥಳದಿಂದ ಭಾಗದಿಂದ ನಾಪತ್ತೆಯಾಗಿದ್ದರು.