ಅವಿಶ್ವಾಸ ನಿರ್ಣಯ: ವಿಧಾನಸಭೆ ಅಜೆಂಡಾದಲ್ಲಿ ಇಲ್ಲ; ಇದು ಭಂಡ ಸರ್ಕಾರ
ಬೆಂಗಳೂರು, ಸೆ. 25: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ನಿನ್ನೆ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕೊರೊನಾ ಸಂಕಷ್ಟದ ಕಾಲದಲ್ಲಿ ಖರೀಯಲ್ಲಿಯೂ ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಅವಿಶ್ವಾಸ ನಿರ್ಣಯ ಮಂಡಿಸುವಾದ ವಿಪಕ್ಷ ನಾಐಕ ಸಿದ್ದರಾಮಯ್ಯ ಹೇಳಿದ್ದರು.
Recommended Video
ಅವಿಶ್ವಾಸ ನಿರ್ಣಯ ಮಂಡಿಸಿರುವ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರದ ವಿರುದ್ಧ ನಿನ್ನೆಯೇ ಅವಿಶ್ವಾಸ ನಿರ್ಣಯ ಮಂಡಿಸಿದ್ದೇನೆ. ಚರ್ಚೆಗೆ ಅವಕಾಶವನ್ನೂ ಕೇಳಿದ್ದೇವೆ. ಆದರೆ ಇಂದಿನ ಕಲಾಪದ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯದ ವಿಷಯ ಹಾಕಿಲ್ಲ. ಅದು ಚರ್ಚೆಗೆ ನಾಳೆ ಬರಬಹುದು, ಅಥವಾ ಇವತ್ತೇ ತೆಗೆದುಕೊಳ್ಳಲೂ ಬಹುದು.
ರಾತ್ರೋರಾತ್ರಿ ಬದಲಾದ ತಂತ್ರಗಾರಿಕೆ: ಅವಿಶ್ವಾಸ ನಿರ್ಣಯದ ಹಿಂದೆ ಕಾಂಗ್ರೆಸ್ಸಿನ ಅಸಲಿಯತ್ತೇ ಬೇರೆ
ಅವಿಶ್ವಾಸ ಮೇಲೆ ನಾವು ಚರ್ಚೆ ಮಾಡಲು ಸಿದ್ಧರಾಗಿದ್ದೇವೆ. ಜವಾಬ್ದಾರಿ ವಿರೋಧ ಪಕ್ಷವಾಗಿ ನಾವೂ ಸುಮ್ಮನಿದ್ದರೆ ಜನ ಏನಂತಾರೆ? ಸುಮ್ಮನೆ ಇರಬೇಕಾ? ಭಂಡ ಸರ್ಕಾರ ಏನೂ ಮಾಡೋಕೆ ಆಗಲ್ಲ. ನೋಡೋಣ ಚರ್ಚೆಗೆ ಯಾವಾಗ ಕೊಡುತ್ತಾರೊ ಎಂದು ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದಾರೆ.