ಭಾಗಮಂಡಲದ ಭುವನೇಂದ್ರ ವೃಕ್ಷ ವಾಟಿಕೆಗೊಮ್ಮೆ ಭೇಟಿ ಕೊಡಿ
ಮಂಗಳೂರು,
ಜೂ
20:
ಕಾಶೀಮಠ
ಸಂಸ್ಥಾನದ
ಆರಾಧ್ಯ
ದೇವರುಗಳಾದ
ವ್ಯಾಸ
ರಘುಪತಿ
ನರಸಿಂಹ
ದೇವರ
ಸಿಂಹಾಸನಾರೋಹಣ
ಕಾರ್ಯಕ್ರಮ
ನಡೆದು
ಐದು
ವರ್ಷ
ಸಂದ
ಸಂದರ್ಭದಲ್ಲಿ
ಕಾಶೀಮಠ
ವಿಶೇಷ
ಕಾರ್ಯಕ್ರಮವನ್ನು
ಹಮ್ಮಿಕೊಂಡಿತ್ತು.
ಕಾಶೀ
ಮಠಾಧೀಶರಾದ
ಸಂಯಮಿಂದ್ರ
ತೀರ್ಥ
ಸ್ವಾಮೀಜಿಯವರ
ದಿವ್ಯ
ಹಸ್ತಗಳಿಂದ
ಭಾಗಮಂಡಲದಲ್ಲಿರುವ
ಭುವನೇಂದ್ರ
ವೃಕ್ಷ
ವಾಟಿಕೆಯಲ್ಲಿ
ಸುಮಾರು
400ಕ್ಕೂ
ಅಧಿಕ
ವಿವಿಧ
ಅಳಿವಿನಂಚಿರುವ
ಔಷಧಿಯ
ಗಿಡ
ಮರಗಳನ್ನು
ನೆಡುವ
ಮೂಲಕ
ಕಾಶೀಮಠ
ಗಿಡಮರಗಳ
ಮಹತ್ವ
ಸಾರುವ
ಕೆಲಸವನ್ನು
ಮಾಡಿದೆ.
ಸುಧೀಂದ್ರ
ತೀರ್ಥ
ಸ್ವಾಮೀಜಿಯವರ
ಬಹು
ಕಾಲದ
ಕನಸಾಗಿದ್ದ
ಈ
ಯೋಜನೆಯನ್ನು,
ಕೊಡಗಿನ
ಪ್ರಕೃತಿ
ರಮಣೀಯ
ತಾಣ,
ಕರ್ನಾಟಕದ
ಜೀವನದಿ
ಕಾವೇರಿ
ಉಗಮಿಸುವ
ಭಾಗಮಂಡಲದಲ್ಲಿ
ಆಯೋಜಿಸಲಾಗಿತ್ತು.
ಹಾಲೀ
ಮಠದ
ಪೀಠಾಧಿಪತಿಗಳಾದ
ಸಂಯಮಿಂದ್ರ
ತೀರ್ಥ
ಸ್ವಾಮೀಜಿಯವರು
ತಮ್ಮ
ಗುರುಗಳು,
ಗೌಡ
ಸಾರಸ್ವತ
ಬ್ರಾಹ್ಮಣ
ಸಮಾಜದ
ಸ್ವರೂಪೂದ್ದಾರಕರಾದ
ಸುಧೀಂದ್ರ
ತೀರ್ಥ
ಸ್ವಾಮೀಜಿಯವರ
ಬಹು
ಕಾಲದ
ಕನಸು
'ಶ್ರೀ
ಭುವನೇಂದ್ರ
ಆಯುರ್ವೇದ
ವೃಕ್ಷ
ವಾಟಿಕ'
ಯೋಜನೆ
ಸಾಕಾರ
ಮಾಡುವತ್ತ
ಸುಂದರ
ಹಾಗೂ
ಕ್ರಮಬದ್ಧವಾದ
ಯೋಜನೆಯನ್ನು
ಈ
ಮೂಲಕ
ಕಾರ್ಯಗತಗೊಳಿಸಿದ್ದಾರೆ.
ಈ
ಯೋಜನೆಯ
ಸಂಪೂರ್ಣ
ಉಸ್ತುವಾರಿಯನ್ನು
ಹಾಲೀ
ಮಠಾಧೀಶರು
ವಹಿಸಿಕೊಂಡಿದ್ದಾರೆ.
ಈ
ವೃಕ್ಷ
ವಾಟಿಕದಲ್ಲಿ
400ಕ್ಕೂ
ಅಧಿಕ
ವಿವಿಧ
ಅಳಿವಿನಂಚಿರುವ
ಔಷಧಿಯ
ಗಿಡ
ಮರ
ಹಾಗೂ
ಆಯುರ್ವೇದದಲ್ಲಿ
ಉಲ್ಲೇಖಗೊಂಡಿರುವ
ಔಷಧೀಯ
ಗುಣಗಳನ್ನು
ಹೊಂದಿರುವ
ಅನೇಕ
ಸಸ್ಯಗಳನ್ನು
ನೆಟ್ಟು
ಶ್ರೀ
ಸಂಸ್ಥಾನದ
ವತಿಯಿಂದ
ಸಂರಕ್ಷಣೆಯನ್ನು
ಮಾಡಲಾಗುತ್ತಿದೆ.
ಭವಿಷ್ಯದಲ್ಲಿ
ಈ
ಸುಂದರ
ಆಯುರ್ವೇದ
ವೃಕ್ಷ
ವಾಟಿಕೆಯು
ಭಾರತದ
ಅತೀ
ದೊಡ್ಡ
ಧಾರ್ಮಿಕ,
ಅಮೂಲ್ಯ
ಹಾಗೂ
ಅತೀ
ಸುಂದರವಾದ
ಆಯುರ್ವೇದ
ಸಸ್ಯಕಾಶಿಯಾಗಿ
ನಿರ್ಮಾಣಗೊಂಡು
ಈ
ಸಸ್ಯ
ಸೇವೆಯಿಂದ
ಪ್ರಸನ್ನಗೊಂಡು
ಆಯುರ್ವೇದದ
ಅಭಿಮಾನಿ
ರೂಪ
ಶ್ರೀ
ವೇದವ್ಯಾಸ
ಅಭಿನ್ನ
ಶ್ರೀ
ಧನ್ವಂತರಿ
ದೇವರು
ಪೂರ್ಣ
ಪ್ರಮಾಣದಲ್ಲಿ
ನೆಲಸುವ
ಬಗ್ಗೆ
ಯಾವುದೇ
ಸಂಶಯವಿಲ್ಲ
ಎನ್ನುವುದು
ಮಠದ
ವಿಶ್ವಾಸದ
ಮಾತು.