ಸಚಿವ ಎಂ.ಕೃಷ್ಣಪ್ಪ ಸಂಕ್ಷಿಪ್ತ ಪರಿಚಯ
ಬೆಂಗಳೂರು, ಸೆಪ್ಟೆಂಬರ್ 06 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಮಾಡಿದ್ದಾರೆ. ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಸಂಪುಟ ದರ್ಜೆ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಹಿಂದಿನ ಬಾರಿ ಸಂಪುಟ ಪುನಾರಚನೆಗೊಂಡಾಗ ಎಂ.ಕೃಷ್ಣಪ್ಪ ಅವರು ಸಂಪುಟ ಸೇರಬೇಕಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಸಚಿವರಾಗುವ ಅವಕಾಶ ಕೈತಪ್ಪಿತ್ತು. ಆದರೆ, ಈ ಬಾರಿ ಯಾವ ಸುಳಿವೂ ನೀಡದೆ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.[ಸಚಿವರಾಗಿ ವಿಜಯನಗರದ ಶಾಸಕ ಎಂ ಕೃಷ್ಣಪ್ಪ ಪ್ರಮಾಣ]
ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಂ.ಕೃಷ್ಣಪ್ಪ ಅವರು ರಿಯಲ್ ಎಸ್ಟೇಟ್ ಉದ್ಯಮಿ. ನಗರದ ಹಲವು ಬಡಾವಣೆಗಳನ್ನು ನಿರ್ಮಾಣ ಮಾಡಿರುವ ಅವರು ಲೇಔಟ್ ಕೃಷ್ಣಪ್ಪ ಎಂದೂ ಕರೆಯಲಾಗುತ್ತದೆ. ಒಂದು ಬಾರಿ ವಿಧಾನಪರಿಷತ್ ಸದಸ್ಯ ಹಾಗೂ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೃಷ್ಣಪ್ಪ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಎಂ.ಕೃಷ್ಣಪ್ಪ ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ...
*
ಎಂ.ಕೃಷ್ಣಪ್ಪ
ಅವರು
ಬಿಎಸ್ಸಿ
ಪದವೀಧರರು
*
2000
ದಿಂದ
2006ರ
ತನಕ
ವಿಧಾನಪರಿಷತ್
ಸದಸ್ಯರಾಗಿದ್ದರು
*
2008ರಲ್ಲಿ
ವಿಜಯನಗರ
ಕ್ಷೇತ್ರದಿಂದ
ಸ್ಪರ್ಧಿಸಿ
ಅವರು
ಶಾಸಕರಾಗಿ
ಆಯ್ಕೆಯಾಗಿದ್ದರು
*
2013ರಲ್ಲಿ
ಪುನಃ
ಅದೇ
ಕ್ಷೇತ್ರದಿಂದ
ಸ್ಪರ್ಧಿಸಿ
ಜಯಗಳಿಸಿದ್ದಾರೆ
*
2008ರಿಂದ
2013ರ
ತನಕ
ಕೃಷ್ಣಪ್ಪ
ಅವರು
ಕಾಂಗ್ರೆಸ್
ಪಕ್ಷದ
ಖಜಾಂಚಿಯಾಗಿದ್ದರು
*
2004ರಲ್ಲಿ
ಬೆಂಗಳೂರು
ದಕ್ಷಿಣ
ಲೋಕಸಭಾ
ಕ್ಷೇತ್ರದಿಂದ
ಚುನಾವಣೆಗೆ
ಸ್ಪರ್ಧಿಸಿದ್ದರು
*
ಎಂ.ಕೃಷ್ಣಪ್ಪ
ಅವರ
ಪುತ್ರ
ಪ್ರಿಯಕೃಷ್ಣ
ಅವರು
ಗೋವಿಂದರಾಜನಗರ
ಕ್ಷೇತ್ರದ
ಶಾಸಕರು