ಮೇಟಿ ವಿಡಿಯೋ ಬೆಂಗ್ಳೂರು ದಾಟಿ ದೆಹಲಿಗೆ: ರಾಹುಲ್ ಗೆ ರಾಸಲೀಲೆ ದೂರು
ಬೆಂಗಳೂರು, ಡಿಸೆಂಬರ್ 14: ಸಚಿವ ಎಚ್.ವೈ.ಮೇಟಿ ಅವರು ಮಹಿಳೆಯೊಬ್ಬರ ಜತೆ ಆಪ್ತವಾಗಿರುವಂಥ ವಿಡಿಯೋ ಇದೆ ಎಂದಿದ್ದ ಬಳ್ಳಾರಿಯ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್, ಆ ವಿಡಿಯೋವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತೋರಿಸಲು ಬುಧವಾರ ದೆಹಲಿಗೆ ತೆರಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿರುವ ಐಎಎಸ್ ಸ್ನೇಹಿತರ ಮೂಲಕ ರಾಹುಲ್ ಗಾಂಧಿ ಭೇಟಿಗೆ ಪ್ರಯತ್ನಿಸಿರುವುದಾಗಿ ರಾಜಶೇಖರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದರು. ಗೃಹಸಚಿವ-ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಭೇಟಿಗೆ ಅವಕಾಶ ಕೇಳಿದೆ, ಆದರೆ ಅವರ ಬಳಿ ಇರುವವರು ಅವಕಾಶ ನೀಡಲಿಲ್ಲ. ಆದ್ದರಿಂದ ದೆಹಲಿಗೆ ಬರಬೇಕಾಯಿತು ಎಂದು ಅವರು ಹೇಳಿದರು.[ಸಿದ್ದು ಸರಕಾರದ ಕ್ಯಾಬಿನೆಟ್ ಸಚಿವರೊಬ್ಬರ ರಾಸಲೀಲೆ ಬಯಲು?]
ದೆಹಲಿಯಲ್ಲಿ ರಾಹುಲ್ ಭೇಟಿಯಾದ ನಂತರ ಅಥವಾ ಸಾಧ್ಯವಾಗದಿದ್ದರೂ ರಾಜಶೇಖರ್ ಅವರು ಸಚಿವ ಎಚ್.ವೈ.ಮೇಟಿ ಆಕ್ಷೇಪಾರ್ಹ ವಿಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸಚಿವರೊಂದಿಗೆ ಆಪ್ತವಾಗಿರುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ಅನಾರೋಗ್ಯ ಕಾರಣಕ್ಕೆ ಆಸ್ಪತ್ರೆಗೆ ಸೇರಿದ್ದವರು ಮಂಗಳವಾರ ರಾತ್ರೋರಾತ್ರಿ ಅಲ್ಲಿಂದ ತೆರಳಿದ್ದಾರೆ.[ರಾಸಲೀಲೆ ಪ್ರಕರಣ, ಸಿಡಿ ಬಹಿರಂಗ ಪಡಿಸಿದರೆ ತಕ್ಷಣ ಕ್ರಮ: ಸಿಎಂ]
ಇಂಥದ್ದೊಂದು ವಿಡಿಯೋ ಇಡೀ ರಾಜ್ಯ ನೋಡುವುದು ಬೇಡ ಎಂದು ನನ್ನ ಉದ್ದೇಶವಾಗಿತ್ತು. ಆದರೆ ಈಗ ಅದನ್ನು ಜನರು ನೋಡಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಪ್ರಕರಣದಲ್ಲಿ ನನ್ನ ಹೆಸರು ಚಾಲ್ತಿಗೆ ಬರಬೇಕು ಎಂಬ ಉದ್ದೇಶ ಇಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಅವರ ಬಂಡವಾಳ ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಅವರು ಹೇಳಿದರು.