ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದ ವೀರಪ್ಪ ಮೊಯ್ಲಿ ಟ್ವೀಟ್!
Recommended Video
ಬೆಂಗಳೂರು, ಮಾರ್ಚ್ 16: ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಹಣಬಲ ಬಳಸಲಾಗುತ್ತಿದೆ ಎಂದು ಮಾಡಿರುವ ಟ್ವೀಟ್ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
INC needs to solve money in politics. We can’t afford to have road contractors and their nexus with the state PWD minister determine how candidates are selected for the upcoming assembly elections. @OfficeOfRG @INCIndia @INCKarnataka @HarshaMoilyINC
— Dr. M. Veerappa Moily (@moilyv) March 15, 2018
"ರಾಜಕೀಯದಲ್ಲಿ ಹಣಬಲ ಬಳಕೆಯಾಗುತ್ತಿರುವುದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಿದೆ" ಎಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಮೊಯ್ಲಿ, ತಮ್ಮ ಟ್ವೀಟ್ ಅನ್ನು ರಾಹುಲ್ ಗಾಂಧಿ, ಐಎನ್ ಸಿ ಇಂಡಿಯಾ, ಐಎನ್ ಸಿ ಕರ್ನಾಟಕ ಟ್ವಿಟ್ಟರ್ ಖಾತೆಗಳಿಗೂ ಟ್ಯಾಗ್ ಮಾಡಿದ್ದಾರೆ.
ರಾಜ್ಯದಲ್ಲಿ ಲೋಕೋಪಯೋಗಿ ಸಚಿವ(ಎಚ್ ಸಿ ಮಹದೇವಪ್ಪ)ರು ಮತ್ತು ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿರುವ ಮೊಯ್ಲಿ, ಈ ಕುರಿತು ಗಮನ ಹರಿಸುವಂತೆ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಟಿ.ನರಸಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ. ಮಹದೇವಪ್ಪ ಈ ಬಾರಿ ತಮ್ಮ ಕ್ಷೇತ್ರವನ್ನು ಮಗ ಸುನಿಲ್ ಬೋಸ್ ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಇತ್ತ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರೂ ಟಿಕೇಟ್ ಆಕಾಂಕ್ಷಿ. ಆದರೆ ಹೈಕಮಾಂಡ್ ಮೊಯ್ಲಿ ಅವರ ಪುತ್ರನಿಗೆ ಟಿಕೇಟ್ ನೀಡಲು ಹಿಂದೇಟು ಹಾಕುತ್ತಿದೆ ಎಂಬ ವದಂತಿಯೂ ಇರುವುದರಿಂದ ಮೊಯ್ಲಿ ಮುನಿಸಿಕೊಂಡಂತಿದೆ.
INC needs to solve money in politics. We can’t afford to have road contractors and their nexus with the state PWD minister determine how candidates are selected for the upcoming assembly elections. @OfficeOfRG @moilyv @INCKarnataka @INCIndia @CMofKarnataka
— Harsha.Moily.INC (@HarshaMoilyINC) March 15, 2018
ಯಥಾವತ್ ಟ್ವೀಟ್ ಅನ್ನು ಅವರ ಪುತ್ರ ಹರ್ಷ ಮೋಯ್ಲಿ ಸಹ ಮಾಡಿದ್ದರು.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮೋಯ್ಲಿ, 'ನನಗೂ ಆ ಟ್ವೀಟ್ ಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗನೂ ಆ ರೀತಿ ಟ್ವೀಟ್ ಮಾಡಿಲ್ಲ. ಆ ಟ್ವೀಟ್ ಅನ್ನು ತಕ್ಷಣವೇ ತೆಗೆದುಹಾಕಲಾಗುವುದು' ಎಂದಿದ್ದಾರೆ.