ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನೀರಸ: ಎಎಪಿ
ಬೆಂಗಳೂರು, ಫೆಬ್ರವರಿ 01: ನಿರ್ಮಲಾ ಸೀತಾರಾಮನ್ ಅವರಿಂದ ಎರಡೂವರೆ ಗಂಟೆಯ ಸುದೀರ್ಘವಾದ ಬಜೆಟ್ ಭಾಷಣದಲ್ಲಿ ಭಾರತದ ಕುಂಠಿತಗೊಂಡಿರುವ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆಯಾಗುವಂತಹ ಯಾವುದೇ ಅಂಶ ಕಂಡು ಬರಲಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಪಕ್ಷದ ಕರ್ನಾಟಕದ ರಾಜ್ಯ ಸಹ ಸಂಚಾಲಕರಾದ ಶಾಂತಲಾ ದಾಮ್ಲೆ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸ್ವಾಗತಾರ್ಹ ವಿಷಯಗಳು ಇದ್ದರೂ ಸಹ, ಮುಖ್ಯವಾಗಿ ಜಿಡಿಪಿ ದರ ವೃದ್ಧಿ ಮುಂದಿನ ವರ್ಷ 10% ಏರುವಂತಹ ಸೂಚನೆ ಕಂಡು ಬರಲಿಲ್ಲ ಎಂದು ಹೇಳಿದ್ದಾರೆ.
ಬಜೆಟ್ 2020: ಗೃಹ ಸಾಲದ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ಮತ್ತೊಂದು ವರ್ಷ ವಿಸ್ತರಣೆ
ಷೇರು ಮಾರುಕಟ್ಟೆ 1% ಕುಸಿತ ತನ್ನದೇ ಕತೆ ಹೇಳುತ್ತದೆ. ಸ್ವಾಗತಾರ್ಹ ಅಂಶಗಳೆಂದರೆ ಚೆನ್ನೈ- ಬೆಂಗಳೂರು ದ್ರೂತಗತಿ ಮಾರ್ಗ, 100 ಹೊಸ ವಿಮಾನ ನಿಲ್ದಾಣ, ರೇಲ್ವೆ ಮಾರ್ಗ ವಿದ್ಯುತೀಕರಣ, ಬ್ಯಾಂಕ್ ಡಿಪಾಸಿಟ್ ವಿಮೆ ಮಿತಿ ಒಂದರಿಂದ 5 ಲಕ್ಷಕ್ಕೆ ಏರಿಕೆಯಾಗಿರುವುದು ಎಂದು ತಿಳಿಸಿದ್ದಾರೆ.
ದೇಶದ ಪ್ರಗತಿಗೆ ಅತ್ಯಂತ ಮಾರಕ ಕೇಂದ್ರ ಬಜೆಟ್
ವೈಯುಕ್ತಿಕ ತೆರಿಗೆ ಸರಳೀಕರಣ ಮತ್ತು ಅದರ ಲಾಭ ಯಾರಿಗೆ? ಎನ್ನುವುದಕ್ಕೆ ಸಂಪೂರ್ಣ ವಿವರದ ಅಧ್ಯಯನ ಮಾಡಬೇಕಿದೆ. ತೆರಿಗೆ ಕಳ್ಳತನವನ್ನು ಅಪರಾಧ ಕಾನೂನಿನ ವ್ಯಾಪ್ತಿಯಿಂದ ಹೊರಹಾಕಿದ್ದು ಸರಿಯಿಲ್ಲ, ಇದರಿಂದ ಇನ್ನಷ್ಟು ಜನ ಹೆದರಿಕೆ ಇಲ್ಲದೆ ಕಳ್ಳತನ ಮಾಡಲು ಪರೋಕ್ಷವಾಗಿ ಸೂಚಿಸಿದಂತಿದೆ ಎಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?
ಆರ್ಥಿಕ ಖೋತಾ ನಿರೀಕ್ಷೆಗಿಂತ ಜಾಸ್ತಿಯಾಗಿದೆ. ಕಂದಾಯ ವಸೂಲಿಯೂ ಗುರಿ ಮುಟ್ಟಿಲ್ಲ. ಕಳೆದ ಬಜೆಟ್ನಲ್ಲಿ ಮಂಡಿಸಿದ ಅನೇಕ ಅಂಶಗಳು ಜಾರಿಗೆ ಬಂದಿಲ್ಲ. ಹಾಗಾಗಿ ಕಳೆದ ಆರು ವರ್ಷದಲ್ಲಿ ಮಂಡನೆಯಾದ ಅತ್ಯುತ್ತಮ ಬಜೆಟ್ ಇದೆಂದು ಅವರು ತಮಗೆ ತಾವೇ ಹೇಳಿಕೊಳ್ಳಬೇಕು ಎಂದು ಹೇಳಿದ್ದಾರೆ.