ಕೊರ್ಗಿ ಜಯಪ್ರಕಾಶ್ ಹೆಗ್ಡೆ ವ್ಯಕ್ತಿ ಪರಿಚಯ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2012ರ ಉಪಚುನಾವಣೆಯ ಮೂಲಕ ಆಯ್ಕೆಯಾದ ಸಂಸತ್ ಸದಸ್ಯ ಕೊರ್ಗಿ ಜಯಪ್ರಕಾಶ್ ಹೆಗ್ಡೆಯವರು ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಯುವ ಮನಸ್ಸಿನ ಅನುಭವಿ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರು ಲೋಕಸಭೆ ಚುನಾವಣೆ 2014ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೊಮ್ಮೆ ಸಂಸತ್ ಪ್ರವೇಶ ಬಯಸಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಕಣದಲ್ಲಿರುವುದರಿಂದ ಬಿರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಭಾರತ್ ನಿರ್ಮಾಣ್ ಯಾತ್ರೆ ಪಾದಯಾತ್ರೆಗಳ ಬಗ್ಗೆ ಅಭಿಮಾನಿಗಳಿಗೆ ಮತದಾರರಿಗೆ ಕಾಲ ಕಾಲಕ್ಕೆ ಸೂಚನೆ ನೀಡುವ ಮೂಲಕ ಜೆಪಿ ಹೆಗ್ಡೆ ಅವರು ಜನಪ್ರಿಯತೆ ಗಳಿಸಿದ್ದಾರೆ. ಯುವ ಸಮುದಾಯ ಹಾಗೂ ಕ್ಷೇತ್ರದಲ್ಲಿ ಹೆಚ್ಚಿರುವ ಮಹಿಳಾ ಮತದಾರರ ಮೆಚ್ಚುಗೆ ಪಡೆದಿರುವ ಜೆಪಿ ಹೆಗ್ಡೆ ಅವರು ಮತ್ತೊಮ್ಮೆ ಜನ ಮನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. [ಸಂಸದ ಜೆಪಿ ಹೆಗ್ಡೆ ಪಾದಯಾತ್ರೆ ವರದಿ]
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಂಟ ಸಮುದಾಯದ ಚಂದ್ರಶೇಖರ್ ಹೆಗ್ಡೆ ದಂಪತಿಗಳಿಗೆ ಜಯಪ್ರಕಾಶ್ ಅವರು ಜನಿಸಿದರು. ಯುವ ನಾಯಕರಾಗಿ ಬೆಳೆದ ಹೆಗ್ಡೆ, ಚಿಕ್ಕ ವಯಸ್ಸಿನಲ್ಲೇ ರಾಜಕೀಯದತ್ತ ಆಕರ್ಷಿತರಾಗಿದ್ದರು. ಹೆಗ್ಡೆ ಅವರ ಕುಟುಂಬದಲ್ಲಿ ಪತ್ನಿ ಶೋಭಾ ಹೆಗ್ಡೆ ಹಾಗೂ ಪುತ್ರ ನಿಶಾಂತ್ ಮತ್ತು ಪುತ್ರಿ ದಿವ್ಯಾ ಇದ್ದಾರೆ. ಜೆಪಿ ಹೆಗ್ಡೆ ಅವರ ವ್ಯಕ್ತಿ ಚಿತ್ರದ ಪರಿಚಯ ಮುಂದೆ ಓದಿ... [ಬಿರುಸಿನ ಮತಯಾಚನೆ ಚಿತ್ರಗಳು]
ಬ್ಯಾಂಕ್ ವೃತ್ತಿ, ಯುವಜನೋತ್ಸವ ನೇತೃತ್ವ
*
1972-78ರ
ಅವಧಿಯಲ್ಲಿ
ವಿಜಯ
ಬ್ಯಾಂಕ್
ನೌಕರರ
ಯೂನಿಯನ್
ನ
ಉಪಾಧ್ಯಕ್ಷರಾಗಿ
ನಂತರ
ಅಧ್ಯಕ್ಷರಾಗಿ
ದುಡಿದರು.
*
ಅಖಿಲ
ಭಾರತ
ಯುವ
ಜನತಾದಳದ
ಪ್ರಧಾನ
ಕಾರ್ಯದರ್ಶಿಯಾಗಿ
ರಾಜಕೀಯ
ಪ್ರವೇಶಿಸಿದರು.
*
1987ರಲ್ಲಿ
ಸ್ಪೈನ್
ನ
ವೆಲೆನ್ಸಿಯಾದಲ್ಲಿ
ನಡೆದ
ಇಂಟರ್
ನ್ಯಾಷನಲ್
ಯೂನಿಯನ್
ಆಫ್
ಸೋಷಿಯಲಿಸ್ಟ್
ಯೂತ್
ನ
'ಯುವಜನೋತ್ಸವ"ದಲ್ಲಿ
ಭಾರತೀಯ
ನಿಯೋಗದ
ನೇತೃತ್ವ
ವಹಿಸಿದ್ದರು.
*
ಯುವ
ರಾಜಕೀಯ
ನೇತಾರರ
ಅಮೆರಿಕನ್
ಕೌನ್ಸಿಲ್
ಏರ್ಪಡಿಸಿದ
ಪ್ರಜಾಪ್ರಭುತ್ವ
ಸಮ್ಮೇಳನದಲ್ಲಿ
ಹೆಗ್ಡೆ
ಅವರು
ಎರಡು
ಬಾರಿ(1986,
1989)
ಭಾರತವನ್ನು
ಪ್ರತಿನಿಧಿಸಿದ್ದರು.
*
1991ರಲ್ಲಿ
ಬೆಂಗಳೂರಿನಲ್ಲಿ
ನಡೆದ
ಕಾಮನ್ವೆಲ್ತ್
ಯುವ
ಕಾರ್ಯಕ್ರಮದಲ್ಲೂ
ಅವರು
ಭಾರತದ
ಪ್ರತಿನಿಧಿಯಾಗಿದ್ದರು.
ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡರು
*
ಜನತಾದಳದ
ಮೂಲಕ
ರಾಜ್ಯದ
ರಾಜಕೀಯ
ರಂಗಕ್ಕೆ
ಪ್ರವೇಶ
ಪಡೆದ
ಜಯಪ್ರಕಾಶ್
ಹೆಗ್ಡೆ,
1985ರ
ಮೊದಲ
ಪ್ರಯತ್ನದಲ್ಲೇ
ಸೋಲುಂಡಿದ್ದರು.
*
1994ರಲ್ಲಿ
ಬ್ರಹ್ಮಾವರ
ಕ್ಷೇತ್ರದಲ್ಲೇ
ಮೊದಲ
ಬಾರಿ
ಜಯಗಳಿಸುವ
ಮೂಲಕ
ರಾಜ್ಯ
ವಿಧಾನಸಭೆಯನ್ನು
ಪ್ರವೇಶಿಸಿದ್ದರು.
ನಂತರ
ಬ್ರಹ್ಮಾವರ
ಕ್ಷೇತ್ರ
ಪುನರ್ವಿಂಗಡಣೆಯಲ್ಲಿ
ತನ್ನ
ಅಸ್ತಿತ್ವವನ್ನು
ಕಳೆದುಕೊಳ್ಳುವವರೆಗೆ
ಸತತ
11
ವರ್ಷ
ಈ
ಕ್ಷೇತ್ರವನ್ನು
ಪ್ರತಿನಿಧಿಸಿದ್ದರು.
*
1994-99ರ
ಅವಧಿಯಲ್ಲಿ
ಅವರು
ಜೆ.ಎಚ್.
ಪಟೇಲ್
ಮುಖ್ಯಮಂತ್ರಿಯಾಗಿದ್ದಾಗ
ಬಂದರು
ಮತ್ತು
ಮೀನುಗಾರಿಕಾ
ಸಚಿವರಾಗಿ
ಜನ
ಮೆಚ್ಚುಗೆ
ಕಾರ್ಯಗಳನ್ನು
ಮಾಡಿದರು.
*
1999ರಲ್ಲಿ
ಅವರು
ಮತ್ತೆ
ಇದೇ
ಕ್ಷೇತ್ರದಲ್ಲಿ
ಪಕ್ಷೇತರರಾಗಿ
ಸ್ಪರ್ಧಿಸಿ
ಜಯಗಳಿಸಿದರು.
*
2004
ರಲ್ಲಿ
ನಡೆದ
12ನೇ
ವಿಧಾನಸಭಾ
ಚುನಾವಣೆಯಲ್ಲೂ
ಗೆಲುವು
ಸಾಧಿಸಿ
ಹ್ಯಾಟ್ರಿಕ್
ಸಾಧಿಸಿದರು.
ಸೋಲುಂಡರೂ ಕ್ಷೇತ್ರದ ಜನತೆ ಪರ ದುಡಿದರು
*
2008
ವಿಧಾನಸಭಾ
ಚುನಾವಣೆಯಲ್ಲಿ
ಕಾಂಗ್ರೆಸ್
ಅಭ್ಯರ್ಥಿಯಾಗಿ
ಕುಂದಾಪುರ
ಕ್ಷೇತ್ರದಿಂದ
ಚುನಾವಣೆಗೆ
ಸ್ಪರ್ಧಿಸಿ
ಹಾಲಾಡಿ
ಶ್ರೀನಿವಾಸ
ಶೆಟ್ಟರ
ವಿರುದ್ಧ
ಸೋಲನುಭವಿಸಿದರು.
*
2009ರ
ಸಂಸತ್
ಚುನಾವಣೆಯಲ್ಲಿ
ಕಾಂಗ್ರೆಸ್ನ
ಅಭ್ಯರ್ಥಿಯಾಗಿದ್ದ
ಅವರು
ಡಿ.ವಿ.ಸದಾನಂದ
ಗೌಡರಿಂದ
ಕೇವಲ
27,018
ಮತಗಳಿಂದ
ಸೋತರು.
*
ಡಿವಿ
ಸದಾನಂದ
ಗೌಡ
ಅವರ
ರಾಜೀನಾಮೆಯಿಂದ
2012ರಲ್ಲಿ
ನಡೆದ
ಉಪ
ಚುನಾವಣೆಯಲ್ಲಿ
ಬಿಜೆಪಿ
ಸ್ಪರ್ಧಿ
ಸುನಿಲ್
ಕುಮಾರ್
ಕಟೀಲ್
ಅವರನ್ನು
45,000
ಮತಗಳ
ಅಂತರದಿಂದ
ಸೋಲಿಸಿದರು.
ಕ್ರೀಡಾಪ್ರೇಮಿ ಜಯಪ್ರಕಾಶ್ ಹೆಗ್ಡೆ:
ಕ್ರೀಡಾಪ್ರೇಮಿ ಜಯಪ್ರಕಾಶ್ ಹೆಗ್ಡೆ: ಉಡುಪಿಯ ಬ್ರಹ್ಮಾವರದಲ್ಲಿ ಹಲವು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕ್ರಿಕೆಟ್ ಪ್ರೇಮಿಯಾಗಿ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಿವಮೊಗ್ಗ ತಂಡ (ಮಲ್ನಾಡ್ ಗ್ಲ್ಯಾಡಿಯೇಟರ್ಸ್)ದ ಮಾಲೀಕರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮತ್ತೊಮ್ಮೆ ಕೆಪಿಲ್ ಟೂರ್ನಿ ನಡೆಸುವ ವಿಶ್ವಾಸ ವ್ಯಕ್ತಪಡಿಸಿರುವ ಕೆಎಸ್ ಸಿಎಗೆ ಜೆಪಿ ಹೆಗ್ಡೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜನನಾಯಕರಾಗಿ ಬೆಳೆದ ಜಯಪ್ರಕಾಶ್
ಜಡ್ಜ್ ಚಂದ್ರಶೇಖರ್ ಹೆಗ್ದೆ ಅವರ ಪುತ್ರರಾಗಿ ವಕೀಲ ವೃತ್ತಿಯನ್ನು ಮೊದಲಿಗೆ ಅಪ್ಪಿಕೊಂಡ ಜಯಪ್ರಕಾಶ್ ಅವರು ನಂತರದ ದಿನಗಳಲ್ಲಿ ಜನನಾಯಕರಾಗಿ ಬೆಳೆದರು. ಸುಮಾರು 25 ವರ್ಷಗಳ ಕಾಲದಿಂದ ರಾಜಕೀಯದಲ್ಲಿ ಉತ್ತಮ ಹೆಸರು ಪಡೆದಿರುವ ಹೆಗ್ಡೆ ಅವರಿಗೆ ಈ ಬಾರಿ ಅಗ್ನಿಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸವಿದೆ.
ಜೆಪಿ ಸಾಧನೆಗಳ ಬಗ್ಗೆ ವಿಭಿನ್ನ ಪ್ರಚಾರ
ಜೆಪಿ ಹೆಗ್ಡೆ ಅವರು ತಮ್ಮ ಸಂಸತ್ ಸದಸ್ಯತ್ವದ ಅವಧಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಹಾಗೂ ಈ ಬಾರಿ ಚುನಾವಣೆ ಪ್ರಚಾರ ಕಾರ್ಯದ ಬಗ್ಗೆ ಮಾಹಿತಿಯನ್ನು ತಮ್ಮ ಯುವ ಮತದಾರರಿಗೆ ಫೇಸ್ ಬುಕ್, ಟ್ವಿಟ್ಟರ್ ಮೂಲಕ ತಲುಪಿಸುತ್ತಿದ್ದಾರೆ. ಜೆಪಿ ಹೆಗ್ಡೆ ಅವರ ಅಧಿಕೃತ ಖಾತೆಗಳ ವಿವರ ಚಿತ್ರದಲ್ಲಿದೆ ನೋಡಿ