ಸರಕಾರದ ಪ್ರಮುಖ ಘೋಷಣೆ: 8 ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಬೇಕಿಲ್ಲ
ಬೆಂಗಳೂರು, ಮೇ 13: ಎಂಟು ಜಿಲ್ಲೆಗಳನ್ನು ಎರಡು ಘಟಕಗಳನ್ನಾಗಿ ಪರಿಗಣಿಸಿ ರಾಜ್ಯ ಸರಕಾರ ಮಹತ್ವದ ಘೋಷಣೆಯನ್ನು ಮಾಡಿದೆ. ಹಾಗಾಗಿ, ಈ ಜಿಲ್ಲೆಗಳ ಸಾರ್ವಜನಿಕರು, ಹತ್ತಿರದ ಜಿಲ್ಲೆಗಳಿಗೆ ಪ್ರಯಾಣಿಸಲು ಇನ್ನು ಮುಂದೆ ಪಾಸ್ ಅವಶ್ಯಕತೆ ಇರುವುದಿಲ್ಲ.
Recommended Video
ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಬೆಂಗಳೂರು ನಗರಕ್ಕೆ ಅಕ್ಕಪಕ್ಕದ ಜಿಲ್ಲೆಗಳಿಂದ ಉದ್ಯೋಗದ ಕಾರಣಕ್ಕಾಗಿ ಜನರು ಬರುವುದರಿಂದ, ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಮೇ 17 ರಿಂದ ಬಿಎಂಟಿಸಿ ಸಂಚಾರ ಆರಂಭ ಸಾಧ್ಯತೆ!
ಆದರೆ, ಅಂತರ್ ಜಿಲ್ಲಾ ಪ್ರಯಾಣ ಮಾಡುವವರು ತಮ್ಮ ಸಂಸ್ಥೆಗಳ ಗುರುತಿನ ಚೀಟಿಯನ್ನು ಚೆಕ್ ಪೋಸ್ಟ್ ಗಳಲ್ಲಿ ತೋರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಬೆಳಗ್ಗೆ ಏಳರಿಂದ, ಸಂಜೆ ಏಳರವರೆಗೆ ಪಾಸ್ ಇಲ್ಲದೇ ಪ್ರಯಾಣಿಸಬಹುದಾಗಿದೆ.
ಉದ್ಯೋಗಿಗಳ ಹೊರತಾಗಿ, ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುವವರು ಯಾವ ನಿಯಮ ಪಾಲಿಸಬೇಕು ಎನ್ನುವ ವಿಚಾರದಲ್ಲಿ ಇನ್ನೂ ಸ್ಪಷ್ಟನೆಯಿಲ್ಲ. ಎರಡು ಘಟಕಗಳ ಅಡಿಯಲ್ಲಿ ಬರುವ ಜಿಲ್ಲೆಗಳು ಹೀಗಿವೆ:
1. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆ : ಒಂದು ಘಟಕ
2. ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ : ಇನ್ನೊಂದು ಘಟಕ