ಸರ್ಕಾರಿ ನೌಕರರೆಂಬ ಮಾನ್ಯತೆಗೆ ಆಗ್ರಹಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಬೆಂಗಳೂರು, ಡಿಸೆಂಬರ್ 11: ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸಂಘಟನೆ ನಿರ್ಧರಿಸಿವೆ.
Recommended Video
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ವಿಧಾನಸೌಧ ಮುತ್ತಿಗೆ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಪ್ರತಿಭಟನೆ, ಬೇಡಿಕೆಗಳೇನು?
ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯಲ್ಲಿ ಶುಕ್ರವಾರ ಬಸ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಬಸ್ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬಸ್
ನಿಲ್ದಾಣಗಳಲ್ಲೇ
ಬಸ್ಸಿಗಾಗಿ
ಕಾದು
ಕುಳಿತಿದ್ದಾರೆ.
ಸರ್ಕಾರ
ಮತ್ತು
ಸಾರಿಗೆ
ನೌಕರರ
ಮಧ್ಯೆ
ಪ್ರಯಾಣಿಕರ
ನೋವನ್ನು
ಕೇಳೋರಿಲ್ಲ
ಎಂದು
ಪ್ರಯಾಣಿಕರು
ದೂರುತ್ತಿದ್ದಾರೆ.
ಹಾಗೆಯೇ
ಬಿಎಂಟಿಸಿ
ಬಸ್
ಇಲ್ಲದ
ಕಾರಣ
ಆಟೋ
ಚಾಲಕರು
ದಂಧೆಗಿಳಿದಿದ್ದಾರೆ,
ಜನರಿಂದ
ದುಪ್ಪಟ್ಟು
ಹಣ
ವಸೂಲಿ
ಮಾಡುತ್ತಿದ್ದಾರೆ.
ಹೀಗಾಗಿ
ಬ್ಯಾಟರಾಯನಪುರ
ಪೊಲೀಸರು
ವಾರ್ನಿಂಗ್
ಕೊಟ್ಟಿದ್ದು,
ಹೆಚ್ಚು
ಹಣ
ವಸೂಲಿ
ಮಾಡಿದರೆ
ಪ್ರಕರಣ
ದಾಖಲಿಸುವುದಾಗಿ
ಹೇಳಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ಗಳ ಸೇವೆಯನ್ನು ಇಂದು ಮುಂಜಾನೆಯಿಂದಲೇ ಸ್ಥಗಿತಗೊಳಿಸಲಾಗಿದೆ. ಈ ನಾಲ್ಕು ನಿಗಮಗಳಿಂದ 1.30 ಲಕ್ಷ ನೌಕರರಿದ್ದು, ಅವರಲ್ಲಿ ಬಹುತೇಕರು ಇಂದು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಅಪ್ಪಿತಪ್ಪಿಯೂ ಇಂದು ಬಿಎಂಟಿಸಿ ಬಸ್ಗಳನ್ನು ನಂಬಿ ನೀವು ಮನೆಯಿಂದ ಹೊರಡಬೇಡಿ. ಇಂದು ಮುಷ್ಕರಕ್ಕೆ ಬೆಂಬಲ ಸೂಚಿಸಿ, ಬೆಂಗಳೂರಿನ ಯಾವ ಡಿಪೋಗಳಿಂದಲೂ ಬಸ್ಗಳು ಹೊರಟಿಲ್ಲ.
ಸ್ಕೈ ವಿಲ್ಲಾ ಮಾದರಿ ನಿಮ್ಮ ಕನಸಿನ ಅಪಾರ್ಟ್ಮೆಂಟ್ ಇಲ್ಲಿದೆ. ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ