ಕೋವಿಡ್ ಪರೀಕ್ಷೆಗೆ ಹೋಗುವ ಜನರಿಗೆ ಸಲಹೆಗಳು
ಬೆಂಗಳೂರು, ಜುಲೈ 16 : ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಗುರುವಾರ ಒಂದೇ ದಿನ 4169 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದೆ.
Recommended Video
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ -19 ಪರೀಕ್ಷೆಗೆ ಹೋಗುವ ಜನರಿಗೆ ಹಲವು ಸಲಹೆಗಳನ್ನು ನೀಡಿದೆ. ಯಾವುದೇ ಕಾರಣಕ್ಕೂ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಇಲಾಖೆ ಹೇಳಿದೆ.
ಅಂಚೆ ಮೂಲಕ ಕೊವಿಡ್ 19 ಪ್ರತಿರೋಧಕ ಕಷಾಯ ಮನೆ ಮನೆಗೆ
ಕೋವಿಡ್ - 19 ಪರೀಕ್ಷೆ ಮಾಡಿಸಿಕೊಂಡ ಬಳಿಕ ಜನರು ಏನು ಮಾಡಬೇಕು?, ಸೋಂಕು ಇಲ್ಲವೆಂದು ವರದಿ ಬಂದರೆ ಏನು ಮಾಡಬೇಕು? ಎಂದು ಇಲಾಖೆ ಜನರಿಗೆ ಮಾಹಿತಿ ನೀಡಿದೆ.
ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ
ಸೋಂಕು ಇಲ್ಲದ ವ್ಯಕ್ತಿಗಳು
* ಜ್ವರ, ಕೆಮ್ಮುಅಥವ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಆಪ್ತಮಿತ್ರ 14410 ನಂಬರ್ಗೆ ಕರೆ ಮಾಡುವುದು.
* ಅತ್ಯಾವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಹೊರ ಹೋಗುವುದನ್ನು ನಿಲ್ಲಿಸಿ
* ಹೊರ ಹೋಗುವಾಗ ಮಾಸ್ಕ್ ಧರಿಸಿರಿ
* ಸುರಕ್ಷಿತವಾಗಿರಿ, ಆರೋಗ್ಯವಾಗಿರಿ
ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಕೋವಿಡ್ ಸೋಂಕು
ಸೋಂಕಿತ ವ್ಯಕ್ತಿಗಳು
* ಉಸಿರಾಟದ ತೊಂದರೆ ಲಕ್ಷಣಗಳು ಇದ್ದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಉಚಿತ ಅಂಬ್ಯುಲೆನ್ಸ್ ಸೇವೆಗಾಗಿ 108ಕ್ಕೆ ಕರೆ ಮಾಡಿ.
* ಯಾವುದೇ ಲಕ್ಷಣಗಳು ಇಲ್ಲವಾದಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಿ. ತಮ್ಮ ವೈದ್ಯಕೀಯ ಸ್ಥಿತಿಯನ್ನು ಪರಿಶೀಲಿಸಲು ಆದ್ಯತೆಯ ಮೇರೆಗೆ ಸರ್ಕಾರಿ ಅಧಿಕಾರಿಗಳು ಶೀಘ್ರದಲ್ಲೇ ತಮ್ಮನ್ನು ಸಂಪರ್ಕಿಸಲಿದ್ದಾರೆ.
* ಭಯ ಪಡಬೇಡಿ, ಸಮಾಧಾನದಿಂದ ಇರಿ
* ಶೇ 95ರಷ್ಟು ಕ್ಕಿಂತಲೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.
* ಅಗತ್ಯವಿದ್ದಾಗ ಸಹಾಯವನ್ನು ಪಡೆಯಿರಿ. ನೀವು ಒತ್ತಡದಲ್ಲಿದ್ದರೆ, ಆತಂಕಕ್ಕೆ ಒಳಗಾಗಿದ್ದರೆ ನಿದ್ರೆ ಹಾಗೂ ಹೊಟ್ಟೆಯಲ್ಲಿ ತೊಂದರೆಯಿದ್ದರೆ 104ಕ್ಕೆ ಕರೆ ಮಾಡಿ 4 ಅನ್ನು ಒತ್ತಿ.