ಅಕ್ಟೋಬರ್ ತಿಂಗಳ ಟಾಪ್ ಟ್ರೆಂಡಿಂಗ್ ವಿಡಿಯೋಗಳು
ಸುದ್ದಿ ಸ್ವಾರಸ್ಯಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ಒನ್ ಇಂಡಿಯಾ ಕನ್ನಡ ಮೈಗೂಡಿಸಿಕೊಂಡಿದೆ.
ದೃಶ್ಯ-ಶ್ರವ್ಯ ಪ್ರಪಂಚದಲ್ಲಿ ಇನ್ನೂ ಪುಟ್ಟ ಹೆಜ್ಜೆ ಇಡುತ್ತಿರುವ ಒನ್ಇಂಡಿಯಾ ಕನ್ನಡದ ಯೂಟ್ಯೂಬ್ ಚಾನೆಲ್/ಡೈಲಿ ಮೋಷನ್ ನಲ್ಲಿ ಅಕ್ಟೋಬರ್ 2017 ತಿಂಗಳಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳು ಇಲ್ಲಿವೆ
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡು ಸುದ್ದಿ ಹಾಗೂ ಸಿನಿಮಾ ಜಗತ್ತಿನ ಆಗು ಹೋಗುಗಳನ್ನು ನಿಮ್ಮ ಮುಂದಿಡುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ಒನ್ಇಂಡಿಯಾ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ.
ಒನ್ಇಂಡಿಯಾ
ಯೂಟ್ಯೂಬ್
ಚಾನೆಲ್
ಗೆ
ಚಂದಾದಾರರಾಗುವುದು
ಹೇಗೆ
*
ನಿಮ್ಮ
ಬ್ರೌಸರ್
ನಲ್ಲಿ(ಡೆಸ್ಕ್
ಟಾಪ್
ಅಥವಾ
ಮೊಬೈಲ್)
ಗೂಗಲ್
ಸರ್ಚ್
ಓಪನ್
ಮಾಡಿ
*
oneindia
kannada
youtube
channel
ಎಂದು
ಟೈಪಿಸಿ
*
ಮೊದಲಿಗೆ
ಬರುವ
oneindia
kannada-
youtube
ಲಿಂಕ್
ಕ್ಲಿಕ್
ಮಾಡಿ
*
ನಿಮ್ಮ
ಮುಂದೆ
ಕಾಣುವ
ಪುಟದ
ಬಲತುದಿಯಲ್ಲಿರುವ
ಕೆಂಪು
ಬಣ್ಣದ
Subscribe
ಬಟನ್
ಒತ್ತಿ.
ಅಂದ
ಹಾಗೆ,
ನೀವು
ಚಂದಾದಾರರಾಗಲು
ಯಾವುದೇ
ಒಂದು
ಜೀಮೇಲ್
ಐಡಿಯಿಂದ
ಲಾಗಿನ್
ಆಗಿದ್ದರೆ
ಸಾಕು.
ಒನ್ಇಂಡಿಯಾ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ (ಒನ್ ಇಂಡಿಯಾ ಸುದ್ದಿ) ಟಾಪ್ ಟ್ರೆಂಡಿಂಗ್ ವಿಡಿಯೋಗಳನ್ನು ಮುಂದೆ ನೋಡಿ...
ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯ
ವಿಡಿಯೋ
ನೋಡಲು
ಕ್ಲಿಕ್
ಮಾಡಿ"
/>ಇಲ್ಲಿ
ಓದಿ
ವಿಡಿಯೋ
ನೋಡಲು
ಕ್ಲಿಕ್
ಮಾಡಿ
ಸ್ವಾಮೀಜಿಯ ಪುತ್ರನ ರಾಸಲೀಲೆ ಬಯಲು
ಯಲಹಂಕದ ಮದ್ದೇವಣಾಪುರ ಮಠದ ಸ್ವಾಮೀಜಿಯ ಪುತ್ರನ ರಾಸಲೀಲೆಯ ವಿಡಿಯೋ ಬಯಲಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಮದ್ದೇವಣಾಪುರ ಮಠದ ಪೀಠಾಧಿಪತಿ ಶೀವಾಚರ್ಯ ಸ್ವಾಮೀಜಿ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮೀಜಿ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯ ವಿವಿಧ ಮಾಧ್ಯಮಗಳಲ್ಲಿ ಹರಿದಾಡಿದ್ದು, ಭಾರಿ ಸದ್ದು ಮಾಡಿತ್ತು. ವಿಡಿಯೋ ಕ್ಲಿಪ್ಪಿಂಗ್ ನೋಡಿ
ಸಿಲಿಕಾನ್ ಸಿಟಿಯಲ್ಲಿ ಅಂಬುಲೆನ್ಸ್ ದುರ್ಬಳಕೆ
ಬೆಂಗಳೂರಿನಲ್ಲಿ ಅಂಬುಲೆನ್ಸ್ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ..ಅಂಬುಲೆನ್ಸ್ ನಲ್ಲಿ ರೋಗಿ ಇರಲಿಲ್ಲದಿದ್ದರೂ ಸೈರನ್ ಹಾಕಿಕೊಂಡು ಹೋಗುತ್ತಾರೆ. ಖಾಸಗಿ ಆಸ್ಪತ್ರೆ ಅಂಬುಲೆನ್ಸ್ ಚಾಲಕನೊಬ್ಬ, ರೋಗಿಗಳ ಬದಲು ವಿದ್ಯಾರ್ಥಿಗಳ ಕರೆದೊಯುತ್ತಿರುವ ಅಂಬುಲೆನ್ಸ್ ಟ್ರಾಫಿಕ್ ನಲ್ಲಿ ಕಂಡು ಬಂದಿತ್ತು. ಪ್ರತ್ಯಕ್ಷದರ್ಶಿಯಿಂದ ಮೊಬೈಲ್ ನಲ್ಲಿ ಸೆರೆಹಿಡಿದ ದೃಶ್ಯಗಳು ಇಲ್ಲಿವೆ ನೋಡಿ
ತುಳಸಿ ವಿವಾಹದ ವಿಡಿಯೋ, ಹಬ್ಬದ ಮಹತ್ವ
ಪ್ರತಿವರ್ಷ ಉತ್ಥಾನ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಿಗ್ಗುವವರು ನಾವು!ನ.1, ಬುಧವಾರದಂದು ಉತ್ಥಾನ ದ್ವಾದಶಿ. ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ತುಳಸಿ ವಿವಾಹ ಮಾಡುವ ಪರಿಪಾಠ ನಮ್ಮಲ್ಲಿ ಎಂದಿನಿಂದಲೋ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತುಳಸಿ ವಿವಾಹದ ಕುರಿತ ಒಂದಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ
ಪೇದೆಯ ಕರ್ತವ್ಯ ನಿಷ್ಠೆ
ಮೈಸೂರು: ಸಿಎಂ ಆಗಮಿಸುತ್ತಿದ್ದರೂ ಆಂಬ್ಯೂಲೆನ್ಸ್ ಗೆ ದಾರಿ ಮಾಡಿಕೊಟ್ಟ ಪೇದೆ. ನಿಜಕ್ಕೂ ಪೇದೆಯ ಕರ್ತವ್ಯ ನಿಷ್ಠೆಯನ್ನು ಮೆಚ್ಚಲೇಬೇಕು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ತಿಳಿಯಲು ಈ ವೀಡಿಯೋ ನೋಡಿ.