ವಾರದ ವಾರ್ತಾ ಚಿತ್ರ: ಒನ್ಇಂಡಿಯಾದ ಟ್ರೆಂಡಿಂಗ್ ಸುದ್ದಿಚಿತ್ರ
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಅಕ್ಟೋಬರ್ 30- ನವೆಂಬರ್ 05 ರ ತನಕದ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ.
ಕರ್ನಾಟಕ ಜಿಲ್ಲಾಸುದ್ದಿ, ಜ್ಯೋತಿಷ್ಯ, ರಾಜಕೀಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳು ಇದರಲ್ಲಿ ಸೇರಿವೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.
ತಿಂಗಳ ಸುದ್ದಿ ಚಿತ್ರ: ಒನ್ಇಂಡಿಯಾದ ಟ್ರೆಂಡಿಂಗ್ ಸ್ಟೋರಿಗಳು
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ).
ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ನೋಡಬಹುದು.
ಉಪೇಂದ್ರ- ಕೆಪಿಜೆಪಿ -ಉಳಿದವರು ಕಂಡಂತೆ
ನಟ, ನಿರ್ದೇಶಕ ಉಪೇಂದ್ರ ಅವರ ವಿರುದ್ಧ ದೂರು
'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' (ಕೆಪಿಜೆಪಿ) ದ ಮುಖಂಡ ನಟ, ನಿರ್ದೇಶಕ ಉಪೇಂದ್ರ ಅವರ ವಿರುದ್ಧ ದೂರು ದಾಖಲಾಗಿದೆ. ಜೆಡಿಯು ಮುಖಂಡ ನಾಗೇಶ್ ಎಂಬುವರು ಉಪೇಂದ್ರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಯಾವ ಕಾರಣಕ್ಕೆ? ಉಪೇಂದ್ರ ಹೇಳಿದ್ದರಲ್ಲಿ ತಪ್ಪೇನಿತ್ತು? ವಿವರ ಇಲ್ಲಿ ಓದಿ...
ಬಿಬಿಎಂಪಿಗೆ ಪಾಠ ಕಲಿಸುವಂತಿರುವ ತೀರ್ಥಹಳ್ಳಿ
ಹೆಲ್ಮೆಟ್ ಗಳನ್ನು ಒಡೆದು ಹಾಕಿದ್ದು ಏಕೆ?
ಮೈಸೂರಿನ ರಾಜಕಮಲ್ ರಸ್ತೆಯಲ್ಲಿರುವ ಕಚೇರಿಯ ಹೊರಗೆ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಗಳನ್ನು ಒಡೆದು ಹಾಕಿದ್ದು ಏಕೆ? ತಿಳಿದುಕೊಳ್ಳಿ
ಶರಣಬಸಪ್ಪ ಅಪ್ಪಾ ಅವರು 82ನೇ ವಯಸ್ಸಿನಲ್ಲಿ
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶ್ರೀ ಶರಣಬಸಪ್ಪ ಅಪ್ಪಾ ಅವರು 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದು, ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ.
ಟ್ವಿಟ್ಟಿಗರಿಂದ ಸರಿಯಾಗಿ ಕಾಲೆಳೆಸಿಕೊಂಡ ಕಾಂಗ್ರೆಸ್
ಟ್ವಿಟ್ಟರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ಮುಖಂಡರ ಫೋಟೋ ಹಾಕಿ, ಬಿಜೆಪಿಯ ಕಾಲೆಳೆಯಲು ಹೋದ ಕಾಂಗ್ರೆಸ್ ಅನ್ನು ಟ್ವಿಟ್ಟಿಗರು ಸರಿಯಾಗಿ ಲೇವಡಿ ಮಾಡಿದ್ದರು. ಕಾರಣ ಏನು? ಮುಂದೆ ಓದಿ...
ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ?
ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರಲಿದ್ದಾರೆ?. ಹೌದು, ಇಂತಹ ಒಂದು ಸುದ್ದಿ ಜೆಡಿಎಸ್ ಪಾಳಯದಲ್ಲಿ ಹರಿದಾಡುತ್ತಿದೆ. ಕಳೆದ ವಾರ ಸಿ.ಎಂ.ಇಬ್ರಾಹಿಂ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಸರಸ ಸಲ್ಲಾಪದಲ್ಲಿದ್ದ ನಟಿ ಆತ್ಮಹತ್ಯೆಗೆ ಯತ್ನ
ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ದಯಾನಂದ ಸ್ವಾಮಿಯೊಂದಿಗೆ ಅಂದು ಸರಸ ಸಲ್ಲಾಪದಲ್ಲಿ ತೊಡಗಿದ್ದ ನಟಿ ಇದೀಗ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಸದ್ದು ಮಾಡಿತ್ತು.
ಪ್ರಳಯಕ್ಕೆ ಹೊಸ ದಿನಾಂಕ ನಿಗದಿ, ನವೆಂಬರ್ 19!
ವಾರಭವಿಷ್ಯ : ಅಕ್ಟೋಬರ್ 30ರಿಂದ ನವೆಂಬರ್ 5ರವರೆಗೆ