ಟಿಪ್ಪು ಜಯಂತಿ ರದ್ದು : ಬಿಎಸ್ವೈ ವಚನ ಭ್ರಷ್ಟ ಎಂದು ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಜುಲೈ 30 : ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕೆಪಿಸಿಸಿ ಸರ್ಕಾರದ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದೆ.
ಮಂಗಳವಾರ ಕರ್ನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದುಗೊಳಿಸುವುದಾಗಿ ಬಿಜೆಪಿ ನಾಯಕರು ಹೇಳಿದ್ದರು.
ಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯ
ಕೆಪಿಸಿಸಿ ಕರ್ನಾಟಕ ಸರ್ಕಾರದ ನಡೆಯನ್ನು ಖಂಡಿಸಿದೆ. "ಬಿ. ಎಸ್. ಯಡಿಯೂರಪ್ಪ ವಚನ ಭ್ರಷ್ಟ" ಎಂದು ಟ್ವೀಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. "ಸರ್ಕಾರದ ದ್ವಿಮುಖ ನೀತಿ ಬಹಿರಂಗವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಟಿಪ್ಪು ಜಯಂತಿ ಪ್ರತಿ ವರ್ಷ ನಡೆಯುತ್ತೆ: ಕುಮಾರಸ್ವಾಮಿ ಸ್ಪಷ್ಟನೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಟಿಪ್ಪು ಜಯಂತಿ ರದ್ದು ಮಾಡಿದ ಬಿಜೆಪಿ ಸರ್ಕಾರ ದೊಡ್ಡ ಅಪರಾಧ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರ ಎಂಬ ಕಾರಣಕ್ಕೆ ಜಯಂತಿ ಆಚರಿಸಲು ಆದೇಶಿದ್ದೆವು. ದ್ವೇಷದ ಕಾರಣಕ್ಕೆ ಬಿಜೆಪಿ ಈ ರೀತಿ ಮಾಡಿದೆ" ಎಂದು ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಟ್ವೀಟ್
"ದ್ವೇಷ
ರಾಜಕಾರಣ
ಮಾಡುವುದಿಲ್ಲವೆಂದು
ಹೇಳಿ
24
ಗಂಟೆಯೊಳಗೆ
ದ್ವೇಷ
ರಾಜಕಾರಣ
ಮಾಡಿದ
ವಚನ
ಭ್ರಷ್ಟ
@BSYBJP.
ಕೇವಲ
ಕೋಮುವಾದ
ದೃಷ್ಟಿಕೋನದಿಂದಲೇ
ಇತಿಹಾಸವನ್ನು
ನೋಡುವ
ಬಿಜೆಪಿ/ಆರೆಸ್ಸೆಸ್
ಇತಿಹಾಸವನ್ನು,
ಟಿಪ್ಪುವಿನ
ಕೊಡುಗೆಯನ್ನು
ಓದಿ
ತಿಳಿದುಕೊಳ್ಳಬೇಕಿದೆ.
ಟಿಪ್ಪು
ಜಯಂತಿ
ರದ್ದತಿಯಿಂದ
@BJP4Karnatakaದ
ದ್ವಿಮುಖ
ನೀತಿ
ಬಹಿರಂಗವಾಗಿದೆ"