ಆ.21ರಂದು ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ
ಬೆಂಗಳೂರು, ಜು. 19 : ಲೋಕಸಭೆ ಚುನಾವಣೆ ಫಲಿತಾಂಶದ ಗುಂಗಿನಿಂದ ರಾಜಕೀಯ ಪಕ್ಷಗಳು ಇನ್ನು ಹೊರಬಂದಿಲ್ಲ ಆಗಲೇ ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಶಾಸಕರಾಗಿದ್ದ ಮೂವರು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದ್ದು, ಆ.21ರಂದು ಮತದಾನ ನಡೆಯಲಿದೆ.
ಚುನಾವಣಾ
ಆಯೋಗ
ಶನಿವಾರ
ಮೂರು
ಕ್ಷೇತ್ರಗಳ
ಉಪ
ಚುನಾವಣೆ
ವೇಳಾಪಟ್ಟಿಯನ್ನು
ಘೋಷಿಸಿದೆ.
ಆ.21ರಂದು
ಮತದಾನ
ನಡೆಯಲಿದ್ದು,
ಆ.25ರಂದು
ಫಲಿತಾಂಶ
ಪ್ರಕಟಗೊಳ್ಳಲಿದೆ.
ಶಿಕಾರಿಪುರ,
ಬಳ್ಳಾರಿ
ಗ್ರಾಮಾಂತರ
ಮತ್ತು
ಚಿಕ್ಕೋಡಿ-ಸದಲಗಾ
ವಿಧಾನಸಭಾ
ಕ್ಷೇತ್ರಗಳಲ್ಲಿ
ಉಪ
ಚುನಾವಣೆ
ನಡೆಯಲಿದೆ.
ಜು.26ರಿಂದ
ನಾಮಪತ್ರ
ಸಲ್ಲಿಕೆ
ಕಾರ್ಯ
ಆರಂಭವಾಗಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಚುನಾವಣೆ
ಎಲ್ಲೆಲ್ಲಿ
ಶಿಕಾರಿಪುರ
-
ಬಿ.ಎಸ್.ಯಡಿಯೂರಪ್ಪ
ಬಳ್ಳಾರಿ
ಗ್ರಾಮಾಂತರ
-
ಬಿ.ಶ್ರೀರಾಮುಲು
ಚಿಕ್ಕೋಡಿ-ಸದಲಗಾ
-
ಪ್ರಕಾಶ್
ಹುಕ್ಕೇರಿ
ರಾಜೀನಾಮೆಯಿಂದ
ತೆರವಾದ
ಕ್ಷೇತ್ರಗಳು
ಯಾರ ಮಡಿಲಿಗೆ ಕ್ಷೇತ್ರಗಳು ? : ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ಬಿಜೆಪಿಯ ಕೈಯಲಿದ್ದರೆ, ಒಂದು ಕ್ಷೇತ್ರ ಕಾಂಗ್ರೆಸ್ ವಶದಲ್ಲಿತ್ತು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರ ಉಪ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆಯಲಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದ ಕೌರವ ಖ್ಯಾತಿಯ ಬಿ.ಸಿ.ಪಾಟೀಲ್ ಶಿಕಾರಿಪುರ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಮತ್ತು ಶಿವಮೊಗ್ಗದ ಮಾಜಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. [ಶಿಕಾರಿಪುರದಿಂದ ಚುನಾವಣಾ ಕಣಕ್ಕೆ ಬಿ.ಸಿ.ಪಾಟೀಲ್?]
ಉಳಿದಂತೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸಂಸದ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ ಸ್ಪರ್ಧಿಸುವ ಸಾಧ್ಯತೆ ಇದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿವೆ. [ವಿಧಾನಸಭೆ ಚುನಾವಣಾ ಫಲಿತಾಂಶ ಇಲ್ಲಿ ನೋಡಿ]