ಬಿಎಸ್ವೈ ಸರಕಾರವನ್ನು 'ಕಲಿಯುಗದ ಕೌರವರು'ಎಂದ ಡಿ.ಕೆ.ಶಿವಕುಮಾರ್
ಬೆಂಗಳೂರು, ಜುಲೈ 23: ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು, ಯಡಿಯೂರಪ್ಪ ನೇತೃತ್ವದ ಸರಕಾರದ ವಿರುದ್ದ ಕಾಂಗ್ರೆಸ್, ದಾಖಲೆಗಳ ಮೇಲೆ ದಾಖಲೆಯನ್ನು ಬಿಡುಗಡೆ ಮಾಡುತ್ತಿದೆ.
Recommended Video
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, "ಮಹಾಭಾರತ ಯುದ್ದ ಮುಗಿಯಲು ಹದಿನೆಂಟು ದಿನಬೇಕಾಯಿತು. ಕೊರೂನಾ ವಿರುದ್ದ ಜಯಸಾಧಿಸಲು 21ದಿನಗಳು ಸಾಕು ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಈಗ 121 ದಿನವಾದರೂ, ಕೊರೊನಾದಿಂದ ಮುಕ್ತಿಸಿಗಲಿಲ್ಲ"ಎಂದು ಡಿಕೆಶಿ ಹೇಳಿದರು.
ಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ
"ಯಾವುದೇ ದೂರದೃಷ್ಟಿಯಿಲ್ಲದ, ಬರೀ ಭ್ರಷ್ಟಾಚಾರದಲ್ಲೇ ತೊಡಗಿರುವ ಯಡಿಯೂರಪ್ಪನವರ ಸರಕಾರ ಕಲಿಯುಗದ ಕೌರವರು ಇದ್ದಂತೆ"ಎಂದು ಡಿ.ಕೆ.ಶಿವಕುಮಾರ್, ಸರಕಾರದ ವಿರುದ್ದ ಕಿಡಿಕಾರಿದರು.
"ನಮ್ಮ ನಾಯಕರಾದ ಸಿದ್ದರಾಮಯ್ಯನವರು ಸರಕಾರದ ಎರಡು ಸಾವಿರ ಕೋಟಿ ಭ್ರಷ್ಟಾಚಾರವನ್ನು ಹೊರಗೆಳೆದಿದ್ದಾರೆ. ಕೊರೊನಾಗಿಂತಲೂ ದೊಡ್ಡ ಸಮಸ್ಯೆಯಲ್ಲಿ ಬಿಜೆಪಿ ತಗಲಾಕಿಕೊಂಡಿದೆ"ಎಂದು ಡಿಕೆಶಿ ಈ ಸಂದರ್ಭದಲ್ಲಿ ಹೇಳಿದರು.
"ಸರಕಾರದ ಮೂಲ ಧ್ಯೇಯ ಲೂಟಿ ಹೊಡೆಯುವುದು. ರಾಜ್ಯದಲ್ಲಿನ ಆಡಳಿತಯಂತ್ರ ದಾರಿತಪ್ಪಿ ಹೋಗಿದೆ. ಹಾಲೀ ನ್ಯಾಯಧೀಶರ ನೇತೃತ್ವದಲ್ಲಿ ಕೊರೊನಾ ಅಕ್ರಮದ ಬಗ್ಗೆ ತನಿಖೆ ನಡೆಯಬೇಕೆಂದು ನಾವು ಒತ್ತಾಯ ಮಾಡುತ್ತಿದ್ದೇವೆ"ಎಂದು ಡಿಕೆಶಿ ಹೇಳಿದರು.
BJP had said they need 21 days to win the war against Corona just like Mahabharata war took 18 days. It's been 121 days now!
— DK Shivakumar (@DKShivakumar) July 23, 2020
This is a govt of 'Kaliyugada Kauravas' with no Vision & only Corruption.
With CLP @siddaramaiah, exposed BJP's ₹2,000+ cr scams today#ಉತ್ತರಕೊಡಿಬಿಜೆಪಿ pic.twitter.com/TMPHHR1vDP
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೊರೊನಾ ಭ್ರಷ್ಟಾಚಾರದ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುತ್ತಿದ್ದಂತೆಯೇ, 'ಉತ್ತರಕೊಡಿ ಬಿಜೆಪಿ' ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.