ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರದಲ್ಲಿ ಪವರ್‌ ಸ್ಟಾರ್ ಪವನ್ ಕಲ್ಯಾಣ್

By Manjunatha
|
Google Oneindia Kannada News

ಚಿಕ್ಕಬಳ್ಳಾಪುರ, ಜನವರಿ 29: ತೆಲುಗಿನ ಸ್ಟಾರ್ ನಟ ಪವರ್‌ ಸ್ಟಾರ್ ಪವನ್ ಕಲ್ಯಾಣ್ ಅವರು ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು.

ನಗರದ ಸಮಾಜ ಸೇವಕ ಕೆ.ವಿ.ನವೀನ್ ಕಿರಣ್ ಅವರ ಭೇಟಿಗೆಂದು ಆಗಮಿಸಿದ್ದ ಪವನ್ ಕಲ್ಯಾಣ್ ಅವರನ್ನು ನೋಡಲು ಕೆವಿ ಕ್ಯಾಂಪಸ್‌ನಲ್ಲಿ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಆಂಧ್ರ ಪ್ರದೇಶದ ಗಡಿಗೆ ಅಂಟಿಕೊಂಡೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಸಿನಿ ಪ್ರೇಮಿಗಳು ಹೆಚ್ಚಿಗಿದ್ದು, ಹಾಗಾಗಿ ಪವನ್ ಅವರನ್ನು ನೋಡಲು ಹಳ್ಳಿಗಳಿಂದಲೂ ಜನ ಬಂದಿದ್ದರು.

ಮೋದಿಯಿಂದ ಪ್ರೇರಿತ, 2019ರ ಚುನಾವಣೆಗೆ ಪವನ್ ಎಂಟ್ರಿ!ಮೋದಿಯಿಂದ ಪ್ರೇರಿತ, 2019ರ ಚುನಾವಣೆಗೆ ಪವನ್ ಎಂಟ್ರಿ!

ಪವನ್ ಕಲ್ಯಾಣ್ ಅವರ ಮೇಲೆ ಹೂ ಎರಚಿ, ಶಿಳ್ಳೆ, ಚಪ್ಪಾಳೆ, ಜಯಘೋಷಣೆಗಳನ್ನು ಹಾಕಿ ಅಭಿಮಾನಿಗಳು ಸಂತಸ ಪಟ್ಟರು. ಸೆಲ್ಫಿ, ವಿಡಿಯೋಗಳನ್ನು ತೆಗೆದುಕೊಂಡು ಖುಷಿ ಪಟ್ಟರು. ಆದರೆ ನೂಕುನುಗ್ಗಲು ಹೆಚ್ಚಾದಾಗ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

Telugu movie star actor Pawan kalyan came to Chikkaballapura

ಕೆ.ವಿ.ನವೀನ್‌ಕುಮಾರ್‌ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷೇತರವಾಗಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯಾಗಿದ್ದು ಅವರ ಪ್ರಚಾರ ಹೆಚ್ಚಿಸಿಕೊಳ್ಳಲೆಂದು ಪವನ್‌ ಕಲ್ಯಾಣ್ ಅವರನ್ನು ಕರೆಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಅವರು ಈ ಮುಂಚೆ ಲೋಕಸಭಾ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಬಿಜೆಪಿ ಪರ ಪ್ರಚಾರಕ್ಕೆಂದು ಆಗಮಿಸಿದ್ದರು.

English summary
Telugu movie industry star actor Pawan Kalyan came to Chikkaballapur to meet K.V.Naveen Kiran. Naveen is going to contest in coming elections so he using Pawan to build his popularity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X