ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲೆಯತ್ನ; ಬಿಜೆಪಿ ಸರ್ಕಾರದ ಮೇಲೆ ತನ್ವೀರ್ ಸೇಠ್ ಅಸಮಾಧಾನ
ಬೆಂಗಳೂರು, ಮಾ. 06: ತಮ್ಮ ಮೇಲೆ ನಡೆದ ಕೊಲೆಯತ್ನ ಪ್ರಕರಣದ ಸೂಕ್ತ ತನಿಖೆ ನಡೆಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ. ಈ ಬಗ್ಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ತನ್ವೀರ್ ಸೇಠ್ ಅವರು ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಹತ್ಯಾಯತ್ನ ಪ್ರಕರಣದ ಹಿಂದಿನ ಪ್ರಮುಖರು ಯಾರು? ಸಂಘಟನೆ ಯಾವುದು ಅನ್ನೋದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರ ತನಿಖೆ ಸೂಕ್ತವಾಗಿ ನಡೆಯುತ್ತಿಲ್ಲ.
ಪ್ರಕರಣದ ಗಂಭೀರತೆಯನ್ನು ಮನಗಂಡು ಕೊಲೆಯತ್ನದ ಉದ್ದೇಶ, ಸಂಚನ್ನು ಬಹಿರಂಗಗೊಳಿಸಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿ, ನ್ಯಾಯ ಒದಗಿಸಿಕೊಡಬೇಕೆಂದು ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Comments
tanveer sait security letter basavaraj bommai home minister police investigation politics ಯು ಟಿ ಖಾದರ್ ತನ್ವೀರ್ ಸೇಠ್ ಪತ್ರ ಗೃಹ ಸಚಿವ ಪೊಲೀಸ್ ತನಿಖೆ ರಾಜಕೀಯ
English summary
Former minister Tanveer Sait has written letter to Home Minister Bommai saying that investigation on murder attempt against him is not going well. Tanveer Sait has demanded the arrest the accused.