ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರ ಗಮನಕ್ಕೆ
ಬೆಂಗಳೂರು, ಮೇ 28 : ನೈಋತ್ಯ ರೈಲ್ವೆಯ ಬೆಂಗಳೂರು-ಮೈಸೂರು ಮಾರ್ಗದ ಕೆಲವು ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ರೈಲು ಸೇವೆ ಆರಂಭವಾದ ಬಳಿಕ ಇದು ಜಾರಿಗೆ ಬರಲಿದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಈ ಕುರಿತು ಆದೇಶ ಹೊರಡಿಸಿದೆ. ಶ್ರೀರಂಗಪಟ್ಟಣ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳು ನಿಲ್ಲುವುದಿಲ್ಲ. ಕೆಲವು ರೈಲುಗಳಿಗೆ ಮಾತ್ರ ನಿಲುಗಡೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು
ಹೊಸ ಆದೇಶದ ಪ್ರಕಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ರೈಲು ನಿಲ್ದಾಣದಲ್ಲಿ 4 ರೈಲುಗಳು ಮಾತ್ರ ನಿಲುಗಡೆಗೊಳ್ಳಲಿವೆ. 6 ರೈಲುಗಳ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ. ಲಾಕ್ ಡೌನ್ ಪರಿಣಾಮ ಸದ್ಯ ರೈಲು ಸಂಚಾರವಿಲ್ಲ. ಸಂಚಾರ ಆರಂಭವಾದ ಬಳಿಕ ಹೊಸ ಆದೇಶ ಜಾರಿಗೆ ಬರಲಿದೆ.
ಕರ್ನಾಟಕ; ಅಂತರ ಜಿಲ್ಲಾ ರೈಲು, ವೇಳಾಪಟ್ಟಿ
ಯಾವ-ಯಾವ ನಿಲ್ದಾಣ: ಯಡಿಯೂರು, ಪಾಂಡವಪುರ, ಮದ್ದೂರು, ಚಾಮರಾಜಪುರಂ, ಕೊಡಕೋಳ, ನಾಗೇನಹಳ್ಳಿ ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳು ಇನ್ನು ಮುಂದೆ ನಿಲುಗಡೆಗೊಳ್ಳುವುದಿಲ್ಲ.
ರೈಲು ಸಂಚಾರ; ಟಿಕೆಟ್ ಬುಕ್ ಮಾಡಲು ಕೌಂಟರ್ ಆರಂಭ
ಹೊಸ ಆದೇಶದ ಪ್ರಕಾರ ಮಂಡ್ಯದ ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ಮೂರು ಮೆಮು ರೈಲು ಸೇರಿದಂತೆ ಬೆಂಗಳೂರು-ಚಾಮರಾಜನರ ರೈಲು ಮಾತ್ರ ನಿಲುಗಡೆಗೊಳ್ಳಲಿದೆ.
ಬೆಂಗಳೂರು-ಮೈಸೂರು ರೈಲ್ವೆ ಪ್ರಯಾಣಿಕರ ವೇದಿಕೆ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದೆ. ಹಲವಾರು ಜನರು ಪಾಸು ಪಡೆದಿರುತ್ತಾರೆ. ಪ್ರತಿದಿನ ಸಂಚಾರ ನಡೆಸುವವರು ಇರುತ್ತಾರೆ. ರೈಲು ನಿಲ್ಲುವುದನ್ನು ರದ್ದುಪಡಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಹೇಳಿದೆ.