ವಿವೇಕಾನಂದ ಜಯಂತಿ; ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಆಕರ್ಷಕ ಬಹುಮಾನ
ಬೆಂಗಳೂರು, ಜನವರಿ 6: ಸ್ವಾಮಿ ವಿವೇಕಾನಂದರ 159ನೇ ಜಯಂತಿ ಅಂಗವಾಗಿ ಸಮರ್ಥ ಭಾರತದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
'ಬಿ ಗುಡ್, ಡು ಗುಡ್ ಅಭಿಯಾನ- 2022' ರಾಷ್ಟ್ರೀಯ ಯುವ ದಿನದ ನಿಮಿತ್ತ ಏರ್ಪಡಿಸಿರುವ 'ಸ್ವಾತಂತ್ರ್ಯ ಸಂಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಭಾವ'ದ ವಿಷಯ ಕುರಿತು ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಗಮನಿಸಬೇಕಾದ
ಅಂಶಗಳು
*
ಪದವಿ
ಯಾ
ತತ್ಸಮಾನ,
ಸ್ನಾತಕೋತ್ತರ
ವಿದ್ಯಾರ್ಥಿಗಳು
ಪ್ರಬಂಧ
ಸ್ಪರ್ಧೆಯಲ್ಲಿ
ಭಾಗವಹಿಸಬಹುದು.
ಬಹುಮಾನಗಳು
*
ಪ್ರಥಮ
ಸ್ಥಾನ:
10,000
ರೂ.
ಮತ್ತು
ಪ್ರಮಾಣ
ಪತ್ರ
*
ದ್ವಿತೀಯ
ಸ್ಥಾನ:
7,500
ರೂ.
ಮತ್ತು
ಪ್ರಮಾಣ
ಪತ್ರ
*
ತೃತೀಯ
ಸ್ಥಾನ:
5,000
ರೂ.
ಮತ್ತು
ಪ್ರಮಾಣ
ಪತ್ರ
ಇದೇ ವೇಳೆ ತಲಾ 1000 ರೂ.ನಂತೆ 20 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
* ಮೇಲೆ ತಿಳಿಸಿದ ವಿಷಯದ ಕುರಿತು, ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಕನವರಿ 31, 2022ರ ಒಳಗಾಗಿ ಕಳುಹಿಸಿ ಕೊಡಬೇಕು.
* ಕಾಲೇಜಿನ ಪಾಂಶುಪಾಲರಿಂದ ಅಥವಾ ವಿಭಾಗದ ಮುಖ್ಯಸ್ಥರಿಂದ ದೃಢೀಕರಿಸಲ್ಪಟ್ಟ ವ್ಯಾಸಂಗ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪ್ರಬಂಧದ ಜೊತೆ ಕಳುಹಿಸಬೇಕು.
* ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ ನೃಪತುಂಗ ರಸ್ತೆ, ಕೆ.ಆರ್. ವೃತ್ತ ಬಳಿ, ಬೆಂಗಳೂರು- 560001.