ನಿತ್ಯಾ ಪುರುಷತ್ವ ಪರೀಕ್ಷೆ ವರದಿ ಕೋರ್ಟ್ಗೆ ಸಲ್ಲಿಸಿಲ್ಲ
ರಾಮನಗರ, ಅ.15 : ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಧ್ಯಾನಪೀಠದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಪ್ರಕರಣದ ವಿಚಾರಣೆಯನ್ನು ರಾಮನಗರ ಜೆಎಂಎಫ್ಸಿ ಕೋರ್ಟ್ ಅ.27ಕ್ಕೆ ಮುಂದೂಡಿದೆ. ಪ್ರಕರಣದ ಆರೋಪಿಗಳಾದ ನಿತ್ಯಾನಂದ ಮತ್ತು ಆತನ ಐವರು ಶಿಷ್ಯರು ನ್ಯಾಯಾಲಯಕ್ಕೆ ಇಂದು ಹಾಜರಾಗಿದ್ದರು.
ಬುಧವಾರ
ರಾಮನಗರ
ಜೆಎಂಎಫ್ಸಿ
ನ್ಯಾಯಾಲಯಕ್ಕೆ
ನಿತ್ಯಾನಂದ
ಮತ್ತು
ಆತನ
ಐವರು
ಶಿಷ್ಯರು
ಹಾಜರಾಗಿದ್ದರು.
ಅತ್ಯಾಚಾರ
ಆರೋಪ
ಎದುರಿಸುತ್ತಿರುವ
ನಿತ್ಯಾನಂದ
ಸ್ವಾಮಿಯ
ಪುರುಷತ್ವ
ಪರೀಕ್ಷೆ
ವರದಿಯನ್ನು
ಸಿಐಡಿ
ಪೊಲೀಸರು
ಕೋರ್ಟ್ಗೆ
ಸಲ್ಲಿಸುವ
ಸಾಧ್ಯತೆ
ಇತ್ತು.
ಆದರೆ,
ವಿಚಾರಣೆಯನ್ನು
ಕೋರ್ಟ್
ಮುಂದೂಡಿದೆ.
[ಸಿಐಡಿ
ಕೈ
ಸೇರಿದ
ನಿತ್ಯಾ
ಧ್ವನಿ
ಪರೀಕ್ಷೆ
ವರದಿ]
ನಿತ್ಯಾನಂದ ಆಶ್ರಮವಾಸಿಯಾಗಿದ್ದ ಆರತಿ ಹಾಗೂ ಇನ್ನಿತರು ನೀಡಿದ್ದ ದೂರನ್ನು ಆಧಾರವಾಗಿಟ್ಟುಕೊಂಡು ಸಿಐಡಿ ಪೊಲೀಸರು ಸಿಆರ್ ಪಿಸಿ 53(ಎ) ಅಡಿಯಲ್ಲಿ ನಿತ್ಯಾನಂದ ಸ್ವಾಮಿ ಮತ್ತು ಇತರ ಐವರು ಶಿಷ್ಯಂದಿರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಪುರುಷತ್ವ ಪರೀಕ್ಷೆ ಮತ್ತು ಧ್ವನಿ ಪರೀಕ್ಷೆ ಮಾಡಲಾಗಿದ್ದು, ಅದರ ವರದಿ ಸಿಐಡಿ ಕೈಸೇರಿದೆ. [ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ]
ಸಿಐಡಿ ಪೊಲೀಸರು ಇಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪ್ರಕರಣದ ವಿಚಾರಣೆಯನ್ನು ಕೋರ್ಟ್ ಅ.27ಕ್ಕೆ ಮುಂದೂಡಿದೆ. ಅಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ನಿತ್ಯಾನಂದ ಸ್ವಾಮಿ ರಾಮನಗರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದ್ದರಿಂದ ಇಂದು ಕೋರ್ಟ್ಗೆ ಆಗಮಿಸಿದ್ದರು.