ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 25 : ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು 2016-17ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದರು. ಹೊಸ ಮಾರ್ಗಗಳ ಘೋಷಣೆಗೆ ಕಡಿವಾಣ ಹಾಕಿಕೊಂಡ ಸಚಿವರು, ಹಳೆಯ ಯೋಜನೆಗಳ ಮುಕ್ತಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಿದ್ದಾರೆ. [ರೈಲ್ವೆ ಬಜೆಟ್ ಪ್ರಮುಖ ಅಂಶಗಳು]

ಹಿಂದೆ ರೈಲ್ವೆ ಸಚಿವರಾಗಿದ್ದ ಕನ್ನಡಿಗರಾದ ಡಿ.ವಿ.ಸದಾನಂದ ಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯಕ್ಕೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದರು. ಅವುಗಳಿಗೆ ಸುರೇಶ್ ಪ್ರಭು ಅವರು ಸೂಕ್ತ ಅನುದಾನ ನೀಡಲಿದ್ದಾರೆ ಎಂಬ ಭರವಸೆ ಇತ್ತು. ಆದರೆ ಹಾಗಾಗಲಿಲ್ಲ. [ರೈಲ್ವೆ ಬಜೆಟ್ : ಕರ್ನಾಟಕದ ನಿರೀಕ್ಷೆ ಏನು?]

railway

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿ ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡಿರುವ ಸುರೇಶ್ ಪ್ರಭು ಅವರು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಇಲ್ಲಿವೆ ವಿವರಗಳು....

* ಬೆಂಗಳೂರು ನಗರದ ಉಪ ನಗರ ರೈಲು (ಸಬ್ ಅರ್ಬನ್ ) ಸೇವೆ ಆರಂಭಿಸುವ ಘೋಷಣೆ ಮಾಡಲಾಗಿದೆ. [ಸಬ್ ಅರ್ಬನ್ ರೈಲ್ವೆಗೆ ಗ್ರೀನ್ ಸಿಗ್ನಲ್]

ಸಮೀಕ್ಷೆಗಳು

* ಲೋಕಾಪುರ-ರಾಮದುರ್ಗ-ಶಿರಸಂಗಿ-ಸದವತ್ತಿ ಮಾರ್ಗ
* ಧಾರವಾಡ- ಬೆಳಗಾವಿ ಮಾರ್ಗ 91 ಕಿ.ಮೀ ಮಾರ್ಗ

ಹೊಸ ಯೋಜನೆಗಳು
* ನೇತ್ರಾವತಿ-ಮಂಗಳೂರು ಸೆಂಟ್ರಲ್ - ಜೋಡಿ ಮಾರ್ಗ ನಿರ್ಮಾಣ 1.5 ಕಿಮೀ
* ಬೀರೂರು-ಶಿವಮೊಗ್ಗ ಜೋಡಿ ಮಾರ್ಗ - 60 ಕಿ.ಮೀ.ಮಾರ್ಗ
* ನಂಜನಗೂಡು - ನೀಲಂಬೂರು - ಹೊಸ ಮಾರ್ಗ 236 ಕಿ.ಮೀ
* ಮೈಸೂರು-ಕುಶಾಲನಗರ - ಹೊಸ ಮಾರ್ಗ 85 ಕಿ.ಮೀ
* ತಾಳಗುಪ್ಪ ಸಿದ್ದಾಪುರ - ಹೊಸ ಮಾರ್ಗ -16 ಕಿ.ಮೀ
* ಬಂಗಾರಪೇಟೆ - ಮುಳುಬಾಗಲು - ಹೊಸ ಮಾರ್ಗ - 40 ಕಿ.ಮೀ
* ಸಕಲೇಶಪುರ - ಸುಬ್ರಮಣ್ಯ - ಜೋಡಿ ಮಾರ್ಗ 60 ಕಿ.ಮೀ
* ತಾಳಗುಪ್ಪ -ಹೊನ್ನಾವರ -ಹೊಸ ಮಾರ್ಗ 82 ಕಿ.ಮೀ
* ಧಾರವಾಡ - ಬೆಳಗಾವಿ - ಹೊಸ ಮಾರ್ಗ

English summary
Railway Minister Suresh Prabhakar Prabhu presented the Railway Budget 2016-17 on Feb 25, 2016. What will be the Karnataka's share in the budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X