ಹಂಗಾಮಿ ಸ್ಪೀಕರ್ ಆಯ್ಕೆ ವಿರುದ್ಧ ಕಾಂಗ್ರೆಸ್ ಅರ್ಜಿ: ಶನಿವಾರ ವಿಚಾರಣೆ
ನವ ದೆಹಲಿ, ಮೇ 18: ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಕೆ.ಜಿ,ಬೋಪಯ್ಯ ಅರವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ಆಯ್ಕೆ ಮಾಡಿರುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದ ಕಾಂಗ್ರೆಸ್ಗೆ ಅಲ್ಪ ಹಿನ್ನಡೆ ಆಗಿದೆ.
ಶುಕ್ರವಾರ ರಾತ್ರಿ ಸುಪ್ರಿಂ ಕೋರ್ಟ್ ರಿಜಿಸ್ಟ್ರಾರ್ಗೆ ದೂರು ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ರಾಜ್ಯಪಾಲರ ನಿರ್ಣಯ ಕುರಿತಂತೆ ಶೀಘ್ರವೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿತ್ತು. ಆದರೆ ಅರ್ಜಿಯನ್ನು ಶನಿವಾರ ಬೆಳಿಗ್ಗೆ ವಿಚಾರಣೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ನಿರ್ಣಯದ ವಿರದ್ಧ ಸುಪ್ರೀಂ ಮೊರೆ ಹೋಗಿತ್ತು, ಗುರುವಾರ ಮಧ್ಯ ರಾತ್ರಿ ಅರ್ಜಿ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ ಶುಕ್ರವಾರ ಮುಂಜಾನೆ ವೇಳೆಗೆ ಶನಿವಾರವೇ ಬಹುಮತ ಸಾಬೀತು ಪಡಿಸುವಂತೆ ತೀರ್ಪು ನೀಡಿತ್ತು. ಇದನ್ನು ಐತಿಹಾಸಿಕ ಎಂದೇ ಬಣ್ಣಿಸಲಾಗಿತ್ತು.
ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೇಮಕ ಪ್ರಶ್ನಿಸಿ ಸುಪ್ರೀಂಗೆ ಕಾಂಗ್ರೆಸ್
ಅದೇ ಉದ್ದೇಶದಿಂದೂ ಇಂದೂ ಸುಪ್ರೀಂ ಕೋರ್ಟ್ ಮೊರೆ ಹೊಗಿದ್ದ ಕಾಂಗ್ರೆಸ್ಗೆ ಅಲ್ಪ ಹಿನ್ನಡೆ ಆಗಿದ್ದು, ತುರ್ತು ವಿಚಾರಣೆ ಅಗತ್ಯ ಇಲ್ಲದ ಕಾರಣ ಶನಿವಾರ ಬೆಳಿಗ್ಗೆ ಕೋರ್ಟ್ ಕಲಾಪ ಪ್ರಾರಂಭ ಆಗುತ್ತಿದ್ದಂತೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.