ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಮಪತ್ರ ಸಲ್ಲಿಕೆಗೆ ನೀವೂ ಬನ್ನಿ: ಸುಮಲತಾ ಅಂಬರೀಷ್ ಆಹ್ವಾನ

|
Google Oneindia Kannada News

Recommended Video

ನಾಮಪತ್ರ ಸಲ್ಲಿಕೆಗೆ ನೀವೂ ಬನ್ನಿ ಅಂತ ಸುಮಲತಾ ಕರೆದಿದ್ದು ಯಾರಿಗೆ ಗೊತ್ತಾ..? | Oneindia Kannada

ಬೆಂಗಳೂರು, ಮಾರ್ಚ್ 19: ತಾವು ನಾಮಪತ್ರ ಸಲ್ಲಿಸುವ ವೇಳೆ ತನ್ನೊಂದಿಗೆ ನೀವೂ ಬನ್ನಿ ಎಂದು ಸುಮಲತಾ ಅಂಬರೀಷ್ ಜನರಿಗೆ ಆಹ್ವಾನ ನೀಡಿದ್ದಾರೆ.

ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸುಮಲತಾ ಘೋಷಣೆಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸುಮಲತಾ ಘೋಷಣೆ

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಣೆ ಮಾಡಿರುವ ಸುಮಲತಾ ಅಂಬರೀಷ್, ಬುಧವಾರ (ಮಾರ್ಚ್ 20) ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದರು. ಈ ಸಂದರ್ಭದಲ್ಲಿ ನೀವೆಲ್ಲರೂ ಇರಬೇಕು ಎಂದು ಅವರು ಫೇಸ್‌ಬುಕ್ ಪುಟದಲ್ಲಿ ಮನವಿ ಮಾಡಿದ್ದಾರೆ.

ನಾವು ಸುಮಲತಾ ಅಂಬರೀಷ್ ಮನೆಮಕ್ಕಳು: ಯಶ್, ದರ್ಶನ್ ಹೇಳಿಕೆನಾವು ಸುಮಲತಾ ಅಂಬರೀಷ್ ಮನೆಮಕ್ಕಳು: ಯಶ್, ದರ್ಶನ್ ಹೇಳಿಕೆ

ತಮ್ಮ ಚುನಾವಣಾ ಸ್ಪರ್ಧೆಯನ್ನು ಅವರು 'ನನ್ನ ಜನರಿಗಾಗಿ ನನ್ನ ಹೆಜ್ಜೆ' ಎಂದು ಹೇಳಿಕೊಂಡಿದ್ದಾರೆ.

sumalatha ambareesh invited people to join on nomination filing

'ನನ್ನ ಪ್ರೀತಿಯ ಮಂಡ್ಯದ ಜನತೆಯ ನಿರ್ಧಾರದಂತೆ ಮಂಡ್ಯ ಲೋಕಸಭೆ ಚುನಾವಣೆಗೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನನಗೆ ಇನ್ನಷ್ಟು ಧೈರ್ಯ ತುಂಬಲು ನೀವೆಲ್ಲಾ ಆ ದಿನ ಆಗಮಿಸಬೇಕೆಂದು ನನ್ನ ಪ್ರೀತಿಯ ಮನವಿ' ಎಂದು ಅವರು ಬರೆದುಕೊಂಡಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿರುವ ಸುಮಲತಾ, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?ಸುಮಲತಾ ವರ್ಸಸ್ ನಿಖಿಲ್ ಕುಮಾರಸ್ವಾಮಿ; ಯಾರಿಗುಂಟು ಗ್ರಹ ಬಲ?

ವಿಶ್ವೇಶ್ವರಯ್ಯ ಪ್ರತಿಮೆ ಮಂಡ್ಯ ನಗರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮೆರವಣಿಗೆ ಹೊರಡಲಿದೆ. ಸಿಲ್ವರಿ ಜ್ಯುಬಿಲಿ ಪಾರ್ಕ್ ಮುಂಭಾಗ ಸಮಾವೇಶ ನಡೆಯಲಿದೆ ಎಂದು ಸುಮಲತಾ ಮಾಹಿತಿ ನೀಡಿದ್ದಾರೆ.

English summary
Lok sabha elections 2019: Mandya Lok sabha independent candidate Sumalatha Ambareesh invited Mandya people to join her for nomination filing on March 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X