ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆಯ ಸುಲ್ತಾನ್ ಜ್ಯುವೆಲ್ಲರಿಗೆ ಬನ್ನಿ,ಎಆರ್ ರೆಹಮಾನ್ ಆಹ್ವಾನ

By Mahesh
|
Google Oneindia Kannada News

ದಾವಣಗೆರೆ, ಜು.30: ಭಾರತದ ಅತ್ಯಂತ ನಂಬುಗೆಯ ಚಿನ್ನಾಭರಣ ವ್ಯಾಪಾರ ಸಂಸ್ಥೆ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಈಗ ಕರ್ನಾಟಕದ ವಾಣಿಜ್ಯ ರಾಜಧಾನಿ ದಾವಣಗೆರೆಗೆ ಕಾಲಿಡುತ್ತಿದೆ. ಸುಲ್ತಾನ್ ಸಂಸ್ಥೆ ರಾಯಭಾರಿಯಾದ ಆಸ್ಕರ್ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಅವರು ಸಾರ್ವಜನಿಕರಿಗೆ ಆತ್ಮೀಯ ಆಹ್ವಾನ ಕಳಿಸಿದ್ದಾರೆ.

ದಾವಣಗೆರೆಯ ಈ ಮಳಿಗೆಯನ್ನು ಆ. 2ರಂದು ಬೆಳಗ್ಗೆ 11 ಗಂಟೆಗೆ ಸಚಿವ ಶಾಮನೂರು ಶಿವಶಂಕರಪ್ಪ ಉದ್ಘಾಟನೆ ಮಾಡಲಿದ್ದಾರೆ.ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಚಿನ್ನಾಭರಣ ವ್ಯಾಪಾರದಲ್ಲಿ 45 ವರ್ಷಗಳ ಪರಂಪರೆಯಿದ್ದು ಶುದ್ಧತೆ, ಆಯ್ಕೆ, ಸೇವೆ ಹಾಗೂ ಅತಿ ಕಡಿಮೆ ತಯಾರಿಕಾ ವೆಚ್ಚ ಮುಂತಾದ ವಿಷಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]

ಸುಲ್ತಾನ್ ಡೈಮಂಡ್ಸ್ ಗೋಲ್ಡ್ 916 ಶುದ್ಧತೆಯ ಹಾಲ್‌ಮಾರ್ಕ್ ಆಭರಣಗಳನ್ನು ಹಾಗೂ ಇಂಟರ್‌ನ್ಯಾಶನಲ್ ಜೆಮೋಲಜಿಕಲ್ ಇನ್ಸ್‌ಟಿಟ್ಯೂಟ್‌ನಿಂದ ಮಾನ್ಯತೆ ಪಡೆದ ಡೈಮಂಡ್ ಆಭರಣಗಳನ್ನೂ, ಪ್ಲಾಟಿನಂ ಗಿಲ್ಡ್ ಇಂಟರ್‌ನ್ಯಾಶನಲ್ ಸಂಸ್ಥೆಯಿಂದ ಮಾನ್ಯತೆ ಪಡೆದ ಪ್ಲಾಟಿನಂ ಆಭರಣಗಳನ್ನೂ ನೀಡುತ್ತದೆ.

ವಿಶ್ವವಿಖ್ಯಾತ ಸಂಗೀತಗಾರ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರಹ್ಮಾನ್ ಸಂಸ್ಥೆಯ ಅಂತಾರಾಷ್ಟ್ರೀಯ ರಾಯಭಾರಿಯಾಗಿದ್ದು, ಫೇಸ್ ಬುಕ್ ನಲ್ಲಿ ಈ ಏಳನೇ ಮಳಿಗೆ ಆರಂಭೋತ್ಸವಕ್ಕೆ ಬನ್ನಿ ಎಂದು ಕರೆ ನೀಡಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು

ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು

ಕೇಂದ್ರ ಘನ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಶಾಮನೂರು ಮಲ್ಲಿಕಾರ್ಜುನ, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಎಚ್.ಬಿ. ಗೊನ್ನೆಪ್ಪ, ದುಡಾ ಅಧ್ಯಕ್ಷ ಅಯ್ಯೂಬ್ ಪೈಲ್‌ವಾನ್, ಕಾರ್ಪೊರೇಟರ್ ಸುರೇಂದ್ರ ಮಯುಲಿ, ನಗರ ಸಭೆ ಸದಸ್ಯ ಬಿ.ಕೆ. ಸೈಯದ್ ರಹ್ಮಾನ್, ಸೈಯದ್ ಸೈಫುಲ್ಲ, ಸ್ಟೀವನ್ ಡಿಸೋಜ ಹಾಗೂ ನಗರಾಭಿವೃದ್ದಿ ಬ್ಯಾಂಕ್‌ನ ಅಧ್ಯಕ್ಷ ಬಿ.ಎಸ್. ಉಮಾಪತಿ ಭಾಗವಹಿಸಲಿದ್ದಾರೆ.

ದಾವಣಗೆರೆ ಮಳಿಗೆ ವಿಶೇಷತೆಗಳು

ದಾವಣಗೆರೆ ಮಳಿಗೆ ವಿಶೇಷತೆಗಳು

* 15,000 ರೂ. ಮೇಲ್ಪಟ್ಟು ಖರೀದಿಸುವ ಪ್ರಥಮ 500 ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ.
* ಡೈಮಂಡ್ ಕ್ಯಾರೆಟ್ ಮೇಲೆ 6,789 ರೂ. ರಿಯಾಯಿತಿ
* 10 ಗ್ರಾಂ ಚಿನ್ನದ ಮೇಲೆ 1,000 ರೂ. ತಯಾರಿಕಾ ವೆಚ್ಚ ಕಡಿತ.
* ಬ್ರಾಂಡೆಡ್ ವಾಚ್‌ಗಳ ಮೇಲೆ ಶೇ.10 ಡಿಸ್ಕೌಂಟ್.
* ಆಗಸ್ಟ್ 2ರಿಂದ ಅಕ್ಟೋಬರ್ 31ರ ವರೆಗೆ ಪ್ರತೀ ಗ್ರಾಹಕರು ಲಕ್ಕೀ ಡ್ರಾ ಕೂಪನ್ ಪಡೆಯಲಿದ್ದಾರೆ.
* ವಾರಾಂತ್ಯದ ಲಕ್ಕೀ ಡ್ರಾ ವಿಜೇತರು ಎಲ್‌ಸಿಡಿ ಟಿವಿ ಹಾಗೂ ದಿನಂಪ್ರತಿ ವಿಜೇತರು ಮನೆ ಬಳಕೆಯ ಉಡುಗೊರೆಗಳನ್ನು ಪಡೆಯಲಿದ್ದಾರೆ.

ದಾವಣಗೆರೆಯ ಈ ಭವ್ಯ ಮಳಿಗೆ

ದಾವಣಗೆರೆಯ ಈ ಭವ್ಯ ಮಳಿಗೆ

ಈ ಭವ್ಯ ಮಳಿಗೆಯು ಶ್ರಮ ಜೀವಿ ಕಾಂಪ್ಲೆಕ್ಸ್, ಆರ್.ಎಂ.ಸಿ. ಲಿಂಕ್ ರಸ್ತೆ, ಪಿ.ಬಿ. ರೋಡ್ ಮುಂಭಾಗದಲ್ಲಿದೆ. ಈ ಭವ್ಯ ಮಳಿಗೆಯು 6,000 ಚದರ ವಿಸ್ತೀರ್ಣ ಹೊಂದಿದೆ. ಚಿತ್ರದಲ್ಲಿ : ಶಿವಮೊಗ್ಗ ಮಳಿಗೆ ಉದ್ಘಾಟನೆ ಚಿತ್ರ.

ಅಮೋಘ ಕಲೆಕ್ಷನ್ ಗಳು ನಿಮಗಾಗಿ

ಅಮೋಘ ಕಲೆಕ್ಷನ್ ಗಳು ನಿಮಗಾಗಿ

ಅಮೋಘ ಪ್ಲಾಟಿನಂ ಕಲೆಕ್ಷನ್, ಆಕರ್ಷಕ ಅನ್‌ಕಟ್ ಡೈಮಂಡ್, ಅಮೂಲ್ಯ ಪ್ರೀಷಿಯಸ್ ಕಲೆಕ್ಷನ್ಸ್, ಪವಿತ್ರ ಬಂಧನ ಬ್ರೈಡಲ್ ಕಲೆಕ್ಷನ್ಸ್, ಸನಾಕ ಅಂಟಿಕ್ಕ್ ಕಲೆಕ್ಷನ್ಸ್, ಮೋತಿ ಪಾರ್ಟಿ ವೇರ್ ಕಲೆಕ್ಷನ್ಸ್, ತಾರಾಕ ಕಿಡ್ಸ್ ಕಲೆಕ್ಷನ್ಸ್, ಶ್ರೇಷ್ಠ ಟ್ರೆಡಿಷನಲ್ ಕಲೆಕ್ಷನ್ಸ್, ದಿ ಮ್ಯಾನ್ ಮೆನ್ಸ್ ಕಲೆಕ್ಷನ್ಸ್ ಮುಂತಾದ ಅಭೂತಪೂರ್ವ ಕಲೆಕ್ಷನ್ಸ್‌ಗಳನ್ನು ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಹೊಂದಿದೆ.

ಆಡಳಿತ ನಿರ್ದೇಶಕ ಡಾ.ಟಿ.ಎಂ. ಅಬ್ದುರ್ ಹೇಳಿಕೆ

ಆಡಳಿತ ನಿರ್ದೇಶಕ ಡಾ.ಟಿ.ಎಂ. ಅಬ್ದುರ್ ಹೇಳಿಕೆ

ಪರಂಪರೆ, ಶುದ್ಧತೆ, ಆಯ್ಕೆ ಹಾಗೂ ಸೇವಾ ಚಟುವಟಿಕೆಗಳನ್ನು ದಾವಣಗೆರೆಗೆ ವಿಸ್ತರಿಸುವುದರಲ್ಲಿ ಅತೀ ಸಂತೋಷವಾಗುತ್ತಿದೆ. ದಾವಣಗೆರೆಯ ಈ ಭವ್ಯ ಮಳಿಗೆಯು ದಾವಣಗೆರೆಯ 110 ಸಿಬ್ಬಂದಿಗೆ ಉದ್ಯೋಗಾವಕಾಶವನ್ನು ದೊರಕಿಸಿಕೊಟ್ಟಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಟಿ.ಎಂ. ಅಬ್ದುರ್ ಅಶ್ರವೂಫ್ ಹೇಳಿದರು.

English summary
Oscar award winner AR Rahman invites one and all to Sulthan Diamonds and Gold Jewellery showroom inauguration at Karnataka's Commercial capital Davangere. Sultan jewels is opening its new showroom at the city on Aug 2, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X