ಕೆಎಸ್ಆರ್ಟಿಸಿ ಪಾರ್ಸೆಲ್ ಸೇವೆಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಿ
ಬೆಂಗಳೂರು, ಆಗಸ್ಟ್ 12 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೂತನ ಪಾರ್ಸೆಲ್ ಸೇವೆಯನ್ನು ಆರಂಭಿಸುತ್ತಿದೆ. ಜನರು ಹೊಸ ಸೇವೆಗೆ ಹೆಸರು ಸೂಚಿಸಿ ಬಹುಮಾನ ಗೆಲ್ಲಬಹುದು. ಹೆಸರು ಸೂಚಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ.
Recommended Video
ಕೆಎಸ್ಆರ್ಟಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜೊತೆ ಸೇರಿ ಹೊಸ ಪಾರ್ಸೆಲ್ ಸೇವೆ ಆರಂಭಿಸುತ್ತಿದೆ. ಕರ್ನಾಟಕ ಮತ್ತು ಅಂತರರಾಜ್ಯಕ್ಕೆ ಪಾರ್ಸೆಲ್ ತಲುಪಿಸಲಾಗುತ್ತದೆ.
ಬಸ್ ಸಂಚಾರ ಆರಂಭ; ಚೇತರಿಕೆ ಕಂಡ ಸಾರಿಗೆ ಇಲಾಖೆ ಆದಾಯ
ಈ ಹೊಸ ಕೋರಿಯರ್ ಮತ್ತು ಪಾರ್ಸೆಲ್ ಸೇವೆ ಹೆಸರು ಸೂಚಿಸುವಂತೆ ಜನರಲ್ಲಿ ಮನವಿ ಮಾಡಲಾಗಿದೆ. ಉತ್ತಮ ಹೆಸರನ್ನು ಸೂಚಿಸಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್ಟಿಸಿ
ಜನರು
ಆಗಸ್ಟ್
15ರ
ಸಂಜೆ
5ಗಂಟೆಯೊಳಗೆ
ನೂತನ
ಪಾರ್ಸೆಲ್
ಸೇವೆಗೆ
ಹೆಸರನ್ನು
ಸೂಚಿಸಬಹುದಾಗಿದೆ.
KSRTC_Journeys
ಟ್ವಿಟರ್
ಹ್ಯಾಂಡಲ್,
KSRTC.Karnataka
ಫೇಸ್
ಬುಕ್
ಪುಟ,
[email protected]
ಇ
ಮೇಲ್ಗೆ
ಹೆಸರುಗಳನ್ನು
ಕಳಿಸಬಹುದಾಗಿದೆ.
ಹಿರಿಯೂರು; ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ: ಮಗು ಸೇರಿ ಐವರ ದುರ್ಮರಣ
ನೀವು ಸೂಚಿಸಿದ ಹೆಸರು ಆಯ್ಕೆಯಾದರೆ ಬಹುಮಾನವನ್ನು ನೀಡಲಾಗುತ್ತದೆ ಮತ್ತು ನೀವು ಆಯ್ಕೆ ಮಾಡಿದ ಒಂದು ಸ್ಥಳಕ್ಕೆ ಉಚಿತವಾಗಿ ಸಂಚಾರ ನಡೆಸಬಹುದಾಗಿದೆ.