ತ್ವರಿತ ಅಲರ್ಟ್ ಗಳಿಗಾಗಿ
For Daily Alerts
20 ದಿನಗಳಲ್ಲಿ ಕಬ್ಬು ಖರೀದಿ ದರ ನಿಗದಿ : ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 22: ಸೋಮವಾರ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು 20 ದಿನಗಳಲ್ಲಿ ಕಬ್ಬು ಖರೀದಿ ದರ ನಿಗದಿಪಡಿಸುವುದಾಗಿ ಹೇಳಿದ್ದಾರೆ.
ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013 ಮತ್ತು ತಿದ್ದುಪಡಿ ಅಧಿನಿಯಮ 2014ರ ಅನ್ವಯ 2015-16ನೇ ಸಾಲಿನ ಕಬ್ಬು ನಿಯಂತ್ರಣ ಮಂಡಳಿಯ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದಲ್ಲಿ ನಡೆಸಿದರು. ಸಭೆಯಲ್ಲಿ ರೈತ ಸಂಘದ ಶಾಸಕ ಪುಟ್ಟಣ್ಣಯ್ಯ, ರೈತ ಮುಖಂಡರು, ಸಕ್ಕರೆ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ನಂತರ ಮಾತನಾಡಿದ ಸಿದ್ದರಾಮಯ್ಯ, "ಕೇಂದ್ರ ಸರಕಾರ ಪ್ರತಿಟನ್ ಕಬ್ಬಿಗೆ 2,550ರೂಪಾಯಿ ಎಫ್ಆರ್'ಪಿ ನಿಗದಿ ಮಾಡಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿನ ಪರಿಸ್ಥಿತಿಯನ್ನೂ ಅಧ್ಯಯನ ಮಾಡಿ 20 ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಇದರಲ್ಲಿ ರಾಜ್ಯ ಸರಕಾರ ಕಬ್ಬು ಖರೀದಿ ದರ ನಿಗದಿ ಮಾಡಲಿದೆ," ಎಂದು ಹೇಳಿದ್ದಾರೆ.
Comments
English summary
Chief Minister Siddaramaiah held a meeting of the sugarcane control board on Monday. Later the meeting, he said that sugarcane price will be set up in 20 days.
Story first published: Tuesday, August 22, 2017, 9:10 [IST]