ವಿದ್ಯಾರ್ಥಿಗಳೆ, ಸಸಿ ಬೆಳೆಸಿ 10ನೇ ತರಗತಿಯಲ್ಲಿ ಹೆಚ್ಚುವರಿ ಅಂಕ ಗಳಿಸಿ!
ಬೆಂಗಳೂರು,
ಅಕ್ಟೋಬರ್
16:
ಹಸಿರು
ಹೆಚ್ಚಿಸಲು
ಅರಣ್ಯ
ಇಲಾಖೆ
ಅದ್ಬುತ
ಐಡಿಯಾ
ಒಂದನ್ನು
ಪ್ರಯೋಗಿಸಲು
ಮುಂದಾಗಿದೆ.
ರಾಜ್ಯದಲ್ಲಿ
ಮರ-ಗಿಡಗಳ
ಸಂಖ್ಯೆ
ಹೆಚ್ಚು
ಮಾಡಲು
ಅದು
ವಿದ್ಯಾರ್ಥಿಗಳನ್ನು
ರಚನಾತ್ಮಕವಾಗಿ
ಬಳಸಿಕೊಳ್ಳಲು
ಯೋಜನೆ
ರೂಪಿಸಿದೆ.
ಮೆಟ್ರೋಗೆ ಸಾವಿರ ಮರಗಳ ಆಪೋಶನ ಬದಲು ಸ್ಥಳಾಂತರಕ್ಕೆ ನಿರ್ಧಾರ
ಎಂಟನೇ ತರಗತಿಗೆ ಶಾಲೆಗೆ ಸೇರುವ ವಿದ್ಯಾರ್ಥಿಗೆ 10 ಸಸಿಗಳನ್ನು ಅರಣ್ಯ ಇಲಾಖೆ ನೀಡಲಿದೆ. ಆ ವಿದ್ಯಾರ್ಥಿ ಅಷ್ಟೂ ಸಸಿಗಳನ್ನು ಮೂರು ವರ್ಷ ಚೆನ್ನಾಗಿ ಆರೈಕೆ ಮಾಡಿದರೆ ವಿದ್ಯಾರ್ಥಿಗೆ 10 ನೇ ತರಗತಿಯಲ್ಲಿ 10 ಅಂಕ ಹೆಚ್ಚುವರಿಯಾಗಿ ಸಿಗಲಿದೆ.
ಈ ಅದ್ಬುತ ಯೋಜನೆ ಈಗಿನ್ನೂ ಪ್ರಸ್ತಾವದ ಹಂತದಲ್ಲಿದೆ. ಅರಣ್ಯ ಇಲಾಖೆಯು ಈ ಯೋಜನೆಯ ಪ್ರಸ್ತಾವವನ್ನು ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಸ್ವತಃ ಅರಣ್ಯ ಸಚಿವ ಆರ್.ಶಂಕರ್ ಅವರು ಮಾಹಿತಿ ನೀಡಿದ್ದಾರೆ.
130 ಎಕರೆ ಸರ್ಕಾರಿ ಜಮೀನು ಉಳಿಸಿದ ಅರಣ್ಯ ಅಧಿಕಾರಿಗೆ ಸಿಕ್ಕಿದ್ದೇನು?
ಈ ಬಗ್ಗೆ ಉತ್ಸುಕತೆ ಹೊಂದಿರುವ ಅರಣ್ಯ ಸಚಿವ ಶಂಕರ್ ಅವರು, ವಿದ್ಯಾರ್ಥಿಗಳನ್ನು ರಚನಾತ್ಮಕವಾಗಿ ಬಳಸುವ ಮೂಲಕ ರಾಜ್ಯದಲ್ಲಿ ಅರಣ್ಯ ಹೆಚ್ಚಿಸುವ ಕಾರ್ಯ ಮಾಡಲಾಗುವುದು, ನಮ್ಮ ಯೋಜನೆಗೆ ಶಿಕ್ಷಣ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.