ಕನ್ನಡ ಸವಿನುಡಿಯ ಜೊತೆ ಶಾಲಾ ಮಕ್ಕಳಿಗಿನ್ನು ಹಾಲು ಜೇನಿನ ಸವಿ
Recommended Video
ಬೆಂಗಳೂರು, ಸೆ.25: ಸರ್ಕಾರಿ ಶಾಲಾ ಮಕ್ಕಳು ಇಷ್ಟು ದಿನ ಬಿಸಿಯೂಟ ಮತ್ತು ಹಾಲು ಸೇವಿಸುತ್ತಿದ್ದರು, ಆದರೆ ಇನ್ನುಮುಂದೆ ಹಾಲಿನ ಜತೆಗೆ ಜೇನುತುಪ್ಪವನ್ನು ಕೂಡ ಸವಿಯಲಿದ್ದಾರೆ.
ಬಿಸಿಯೂಟ ನೌಕರರ ಪ್ರತಿಭಟನೆಯ ಫಲ: ವೇತನ 500ರೂ ಹೆಚ್ಚಳ
ಹೌದು ರಾಜ್ಯ ಸರ್ಕಾರ ಹೊಸ ಯೋಜನೆಗೆ ಕೈಹಾಕಿದೆ. ಕೇಂದ್ರ ಮನವ ಸಂಪನ್ಮೂಲ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಈ ಸೂಚನೆಯನ್ನು ನೀಡಿದೆ.
ಯಾದಗಿರಿ: ಜಾತಿ ಭೂತಕ್ಕೆ ದಶಕಗಳಿಂದ ಈ ಶಾಲೆ ಮಕ್ಕಳಿಗಿಲ್ಲ ಬಿಸಿಯೂಟ
ಮಧ್ಯಾಹ್ನದ ಬಿಸಿಯೂಟ, ಹಾಲಿನ ಜತೆ ಇದೀಗ ಜೇನುತುಪ್ಪವೂ ಸಿಗಲಿದೆ. ಉತ್ತಮ ಪೌಷ್ಠಿಕಾಂಶವುಳ್ಳ ಆಹಾರವನ್ನು ಮಕ್ಕಳಿಗೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಾಗಲೇ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ.
ಅನುದಾನ ಕಡಿತ: ಕೇಂದ್ರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಗರಂ
ಮಕ್ಕಳಿಗೆ ಜೇನು ನೀಡುವ ಉದ್ದೇಶವೇನು: ಜೇನಿನಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟುವ ಶಕ್ತಿ ಇದೆ. ಜೇನು ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಆಂಟಿ ಬಯೋಟಿಕ್ ಗುಣಗಳನ್ನು ಹೊಂದಿದೆ. ಕೆಮ್ಮು, ಗಂಟಲು ಕೆರೆತ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣ ಜೇನುತುಪ್ಪಕ್ಕಿದೆ.ಕೊಬ್ಬಿನಂತಹ ಅಂಶಗಳು ಕರಗಲಿವೆ.