ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 27: ವೀರಶೈವ ಲಿಂಗಾಯತ ಯುವ ವೇದಿಕೆಯಿಂದ 2018-2019 ಸಾಲಿನ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ 'ಬಸವಜ್ಯೋತಿ' ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ (ನೊ.)ಯು ಕಳೆದ ಏಳೆಂಟು ವರ್ಷದಿಂದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರೀಯರಾಗಿದ್ದು, ಕಳೆದ 4 ವರ್ಷಗಳಲ್ಲಿ 1300 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿರುವ ಹಿರಿಮೆ ವೇದಿಕೆಯದ್ದಾಗಿದೆ. ಪ್ರತೀ ವರ್ಷದಂತೆಯೇ ಈ ವರ್ಷವೂ ಸಹ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ.
ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಸಾಧಕರ ಸಾಧನೆಯನ್ನು ಸ್ಮರಿಸಿ ಎಸ್. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಎಸ್.ಆರ್ ಕಂಠಿ, ಎಸ್. ಆರ್ ಬೊಮ್ಮಾಯಿ, ಬಿ.ಡಿ ಜತ್ತಿ, ಜೆ.ಹೆಚ್ ಪಟೇಲ್, ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ವಿಜಯ ಸಂಕೇಶ್ವರ್ , ಜಿ.ಎಂ ಸಿದ್ದೇಶ್, ಎಸ್. ಆರ್ ಕಾಶಪ್ಪನವರ್, ಪ್ರಭಾಕರ್ ಕೋರೆ, ಗುರುಪಾದಪ್ಪ ನಾಗಮಾರಪಲ್ಲಿ ಸಮಾಜದ ಗಣ್ಯರುಗಳಾಗಿರುವ ಇವರ ಸಾಧನೆ ಅತ್ಯಮೂಲ್ಯವಾದ ಕಾರಣ ಇವರುಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರತಿಷ್ಠಿತ "ಬಸವ ಜ್ಯೋತಿ" ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 27/09/2018 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು vlyvedike ವೆಬ್ ಸೈಟಿನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಶಾಂತ್ ಕಲ್ಲೂರ್, ರಾಜ್ಯಾಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.)ಹೇಳಿದ್ದಾರೆ.