ಸಾರಿಗೆ ಮುಷ್ಕರ: ಆಗಸ್ಟ್ 7ಕ್ಕೆ ಬಸ್, ಆಟೋ, ಟ್ಯಾಕ್ಸಿ ಯಾವುದೂ ಇರಲ್ಲ
ಬೆಂಗಳೂರು, ಜು.30: ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಅಸೋಸಿಯೇಷನ್ ಆ.7ರಂದು ದೇಶಾದ್ಯಂತ ಸಾರಿಗೆ ಮುಷ್ಕರಕ್ಕೆ ಕರೆ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಖಾಸಗಿ ಬಸ್ಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಕಾನೂನು ವಿರುದ್ಧ ಹೋರಾಟ ಪ್ರಾರಂಭವಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಫೆಡರೇಷನ್ ಅಧ್ಯಕ್ಷ ಎಚ್.ಡಿ. ರೇವಪ್ಪ ತಿಳಿಸಿದ್ದಾರೆ.
ವಾಹನ ಚಾಲನೆ ಮುನ್ನ ಈ ತಿದ್ದುಪಡಿ ನಿಯಮ ಓದಿ
ಆಗಸ್ಟ್ 7ರಂದು ಬಸ್ ಆಟೋ, ಟ್ಯಾಕ್ಸಿ ಯಾವುದೂ ದೊರೆಯುವುದಿಲ್ಲ, ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು, ಖಾಸಗಿ ಬಸ್ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತರಲು ಹೊರಟಿರುವ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ತರಲೇಬೇಕು ಎನ್ನುವ ಕಾನೂನು ಹೋರಾಟ ಇದಾಗಿದೆ.
ಕೇಂದ್ರದ ಉದ್ದೇಶಿತ ನಿಯಮದಿಂದ ಸರ್ಕಾರಿ ಸಾರಿಗೆ ಇಲಾಖೆಗಳಿಗೆ ಹಾಗೂ ಕಾರ್ಮಿಕ ವರ್ಗಕ್ಕೆ ಕುಣಿಕೆ ಬೀಳಲಿದೆ ಎಂಬ ಕಾರಣಕ್ಕೆ ನೂತನ ಮಸೂದೆಗೆ ದೇಶವ್ಯಾಪ್ತಿ ವಿರೋಧ ವ್ಯಕ್ತವಾಗಿದೆ
ದೇಶಾದ್ಯಂತ ಸುಮಾರು 54 ಸಾರಿಗೆ ನಿಗಮಗಳು ಬಂದ್ಗೆ ಬೆಂಬಲ ಸೂಚಿಸಿದ್ದು, ರಾಜ್ಯ ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ವಿಭಾಗ ಸೇರಿದಂತೆ ರಾಜ್ಯದ 4 ನಿಗಮಗಳ ಬಸ್ಗಳ ಸಂಚಾರ ಇರುವುದಿಲ್ಲ.
ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು
ಕೆಎಸ್ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್, ಎಐಟಿಯುಸಿ ಬಂದ್ಗೆ ಕರೆ ನೀಡಿದ್ದು, ಆಟೋ ಸಂಘಟನೆಗಳು ಸಹ ಮುಷ್ಕರಕ್ಕೆ ಸಹಕಾರ ನೀಡಲಿವೆ. ತಾವು ನೈತಿಕ ಬೆಂಬಲ ಸೂಚಿಸುವುದಾಗಿ ಪ್ರವಾಸಿ ವಾಹನ ಮಾಲೀಕರ ಸಂಘ ತಿಳಿಸಿದೆ.