ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ:ತರೀಕೆರೆ ಉದ್ವಿಗ್ನ
Recommended Video
ಗಣೇಶ
ವಿಸರ್ಜನೆ
ವೇಳೆ
ಕಲ್ಲುತೂರಾಟ
:
ಚಿಕ್ಕಮಗಳೂರಿನ
ತರೀಕೆರೆಯಲ್ಲಿ
ಉದ್ವಿಗ್ನ
ಪರಿಸ್ಥಿತಿ
|
Oneindia
Kannada
ಚಿಕ್ಕಮಗಳೂರು, ಸೆಪ್ಟೆಂಬರ್ 18: ತರೀಕೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದೂ ಮಹಾಸಭಾ ಸಂಘಟನೆ ಸದಸ್ಯರು ಗಣಪತಿ ಮೆರವಣಿಗೆ ಮಾಡುವಾಗ ಯಾರೋ ಕಿಡಿಗೇಡಿಗಳು ಕಲ್ಲೆಎಸೆದಿದ್ದಾರೆ. ಗಣಪತಿ ವಿಸರ್ಜನೆ ಮಾಡುತ್ತಿದ್ದ ಗುಂಪೂ ಸಹ ಪ್ರತಿಯಾಗಿ ಕಲ್ಲೆಸೆತ ಆರಂಭಿಸಿದೆ.
ಪರಸ್ಪರ ಕಲ್ಲೆಸೆತ ಹೆಚ್ಚಾದಾಗ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಆಗಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಮತ್ತೆ ಲಾಠಿ ಪ್ರಹಾರ ಮಾಡಿದ್ದಾರೆ.
ಕಲ್ಲು ತೂರಾಟದಿಂದ ಹಲವರಿಗೆ ಗಂಭೀರ ಗಾಯಗಳಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ತರಿಕೆರಿಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಕೋಮುಗಲಭೆ ಉಂಟಾಗಬಹುದು ಎಂಬ ಭೀತಿ ಇದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ತುಕಡಿಯನ್ನು ಕರೆಸಿಕೊಳ್ಳಲಾಗಿದ್ದು, ಆಯಕಟ್ಟಿನ ಜಾಗಗಳಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.
Comments
English summary
Stone pelting happen in Chikkamagaluru's Tarikere while Hindu Mahasabha doing Ganesha procession. Police deployed in the Tarikere to prevent communal riot.
Story first published: Tuesday, September 18, 2018, 22:40 [IST]