ಮಳೆಯಿಂದ ಹಾನಿ: ತುರ್ತು ಪರಿಹಾರಕ್ಕೆ 200 ಕೋಟಿ ಬಿಡುಗಡೆ
ಬೆಂಗಳೂರು, ಆಗಸ್ಟ್ 28: ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳು ತೊಂದರೆಗೀಡಾಗಿದ್ದು, ತುರ್ತು ಪರಿಹಾರ ಕಾಮಗಾರಿಗಾಗಿ ರಾಜ್ಯ ಸರ್ಕಾರವು 82 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಇದು ತುರ್ತು ಕಾಮಗಾರಿಗೆಂದು ಬಿಡುಗಡೆ ಮಾಡಿರುವ ಮೊತ್ತವಾಗಿದ್ದು, ಹಾನಿ ಸಮೀಕ್ಷೆ ಅಂತಿಮವಾದ ಬಳಿಕ ಒಟ್ಟು ಪರಿಹಾರ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.
ಮಳೆಯಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ಕೊಡಗಿಗೆ ಹೆಚ್ಚಿನ ಮೊತ್ತ ನೀಡಲಾಗಿದ್ದು, ಕೊಡಗಿಗೆ 85 ಕೋಟಿ ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 20.88 ಕೋಟಿ, ಉಡುಪಿಗೆ 14.54 ಕೋಟಿ, ಚಿಕ್ಕಮಗಳೂರಿಗೆ 25.13 ಕೋಟಿ, ಹಾಸನಕ್ಕೆ 27.13 ಕೋಟಿ, ಉತ್ತರ ಕನ್ನಡಕ್ಕೆ 11.51 ಕೋಟಿ, ಶಿವಮೊಗ್ಗಕ್ಕೆ 15 ಕೋಟಿ ನೀಡಲಾಗಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಕೊಡಗಿನಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಭಾರಿ ಹಾನಿ ಸಂಭವಿಸಿದೆ. ಗುರುವಾರದಿಂದ ನಷ್ಟದ ಸಮೀಕ್ಷೆ ನಡೆಯಲಿದ್ದು, ಗುರುವಾರ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ನೆರವಿಗೆ ಮನವಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕೊಡಗಿಗೆ ನೆರವು ಕೇಳಲು ಆಗಸ್ಟ್ 30ಕ್ಕೆ ದೆಹಲಿಗೆ ಹಾರಲಿದ್ದಾರೆ ಎಚ್ಡಿಕೆ
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಈ ಮೊತ್ತವು ಕೇವಲ ತುರ್ತು ಪರಿಹಾರ ಕಾರ್ಯಕ್ಕೆ ಮಾತ್ರವೇ ಆಗಿದ್ದು, ನಷ್ಟ ಪರಿಹಾರ ಅಲ್ಲ. ಮನೆ ಹಾನಿ, ಬೆಳೆ ಹಾನಿ, ಜೀವ ಹಾನಿ ಆದವರಿಗೆ ಇನ್ನಷ್ಟೆ ಪರಿಹಾರ ಘೋಷಿಸಬೇಕಿದೆ.