ಒಕ್ಕಲಿಗರ ಸಂಘಕ್ಕೆ ಭಾನುವಾರ ಚುನಾವಣೆ
ಬೆಂಗಳೂರು. ಜ.3 : ಭಾನುವಾರ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕಣ ರಂಗೇರಿದೆ. ಒಟ್ಟು 140 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 3,70 ಲಕ್ಷ ಮತದಾರರು ಆಡಳಿತ ಮಂಡಳಿಯ 35 ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದ್ದು, ಪ್ರಚಾರದ ಭರಾಟೆ ಜೋರಾಗಿದೆ.
ಕಳೆದ
ಬಾರಿಯ
ಚುನಾವಣೆಗೆ
ಹೋಲಿಸಿದರೆ,
ಈ
ಬಾರಿ
ಸಂಘದ
ಸದಸ್ಯರ
ಸಂಖ್ಯೆ
ಹಾಗೂ
ಮತದಾರರ
ಸಂಖ್ಯೆ
ಹನ್ನೊಂದು
ಪಟ್ಟು
ಹೆಚ್ಚಾಗಿದೆ.
ಹಿಂದಿನ
ಚುನಾವಣೆಯಲ್ಲಿ
ಕೇವಲ
23
ಸಾವಿರವಿದ್ದ
ಸದಸ್ಯರ
ಸಂಖ್ಯೆ
ಬಾರಿ
3
ಲಕ್ಷಕ್ಕೆ
ಏರಿಕೆಯಾಗಿದೆ.
ಭಾನುವಾರ
ಬೆಳಗ್ಗೆ
8
ಗಂಟೆಯಿಂದ
ಸಂಜೆ
4
ಗಂಟೆಯವರೆಗೆ
ಚುನಾವಣೆ
ನಡೆಯಲಿದೆ.
ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದೆ. ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರದಿಂದ 15 ನಿರ್ದೇಶಕರು ಆಯ್ಕೆಯಾಗಲಿದ್ದಾರೆ.
ಉಳಿದಂತೆ ಮಂಡ್ಯದಿಂದ 4, ಮೈಸೂರು, ಕೋಲಾರ, ಹಾಸನ, ತುಮಕೂರು ಕ್ಷೇತ್ರಗಳಿಂದ ತಲಾ 3, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಕ್ಷೇತ್ರಗಳಿಂದ ತಲಾ 1 ಸ್ಥಾನಗಳಿಗೆ ಚುನಾವಣೆ ಭಾನುವಾರ ಚುನಾವಣೆ ನಡೆಯಲಿದೆ.
ಒಕ್ಕಲಿಗರ ಸಂಘದ ಹಾಲಿ ಅಧ್ಯಕ್ಷ ಕೆಂಚಪ್ಪಗೌಡ, ಪ್ರೊ.ನಾಗರಾಜು, ಪ್ರೊ.ಕೆ.ಮಲ್ಲಯ್ಯ, ಅಪ್ಪಾಜಿಗೌಡ, ಕೆ.ವಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ರಚಿಸಿಕೊಂಡಿರುವ ಐದು ಸಿಂಡಿಕೇಟ್ಗಳು ಸ್ಪರ್ಧಾ ಕಣದಲ್ಲಿವೆ. ನೂರಕ್ಕೂ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ.