ಶನಿವಾರ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ
ಬೆಂಗಳೂರು, ಫೆಬ್ರವರಿ 12 : ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ. ಶನಿವಾರ ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ.
ಫೆ.13ರ
ಶನಿವಾರ
ಬೆಳಗ್ಗೆ
7
ಗಂಟೆಯಿಂದ
ಸಂಜೆ
5
ಗಂಟೆಯ
ತನಕ
ಮತದಾನ
ಮಾಡಲು
ಅವಕಾಶವಿದೆ.
ಈಗಾಗಲೇ
ಬಹಿರಂಗ
ಪ್ರಚಾರ
ಅಂತ್ಯಗೊಂಡಿದ್ದು,
ಅಭ್ಯರ್ಥಿಗಳು
ಮನೆ-ಮನೆ
ಪ್ರಚಾರದಲ್ಲಿ
ತೊಡಗಿದ್ದಾರೆ.
15
ಜಿಲ್ಲೆಗಳಲ್ಲಿ
ತಾಲೂಕು
ಮತ್ತು
ಜಿಲ್ಲಾ
ಪಂಚಾಯಿತಿ
ಚುನಾವಣೆಗೆ
ಮತದಾನವೂ
ಶನಿವಾರ
ನಡೆಯಲಿದೆ.
[ಉಪ
ಚುನಾವಣೆ
ವೇಳಾಪಟ್ಟಿ]
ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗದ ಶಾಸಕರಾಗಿದ್ದ ವೆಂಕಟೇಶ್ ನಾಯಕ್ ಅವರ ಅಕಾಲಿಕ ಮರಣದಿಂದಾಗಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿದೆ. [3 ಕ್ಷೇತ್ರಗಳ ಉಪ ಚುನಾವಣೆ : ಪಕ್ಷಗಳ ಅಭ್ಯರ್ಥಿಗಳ ಪಟ್ಟಿ]
ಹೆಬ್ಬಾಳ ಕ್ಷೇತ್ರ : ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ಭಾರೀ ಕುತೂಹಲ ಕೆರೆಳಿಸಿದೆ. 1.26 ಲಕ್ಷ ಮತದಾರರನ್ನು ಕ್ಷೇತ್ರಹೊಂದಿದೆ. ಕಾಂಗ್ರೆಸ್ನಿಂದ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್, ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್ನ ಇಸ್ಮಾಯಿಲ್ ಷರೀಫ್ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ದೇವದುರ್ಗ ಕ್ಷೇತ್ರ : ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ನ ಎ.ರಾಜಶೇಖರ ನಾಯಕ್, ಬಿಜೆಪಿಯ ಶಿವನಗೌಡ ನಾಯಕ್ ಹಾಗೂ ಜೆಡಿಎಸ್ನಿಂದ ಕರಿಯಮ್ಮ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.
ಬೀದರ್ ಕ್ಷೇತ್ರ : ಬೀದರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ರಹೀಂಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ, ಜೆಡಿಎಸ್ನ ಎಂ.ಡಿ.ಅಯಾಜ್ ಖಾನ್ ಅವರು ಪ್ರಮುಖ ಅಭ್ಯರ್ಥಿಗಳು.