14 ಕ್ಷೇತ್ರದ ಚುನಾವಣೆಗೆ ವೇದಿಕೆ ಸಿದ್ಧ, ತಪ್ಪದೇ ಮತ ಹಾಕಿ
ಬೆಂಗಳೂರು, ಏಪ್ರಿಲ್ 17 : ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. 14 ಕ್ಷೇತ್ರಗಳಲ್ಲಿ 2,67,51,893 ಜನರು ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮತದಾನದ ಸಿದ್ಧತೆ ಕುರಿತು ಮಾಹಿತಿ ನೀಡಿದರು. ಜನರು ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ?
'14 ಲೋಕಸಭಾ ಕ್ಷೇತ್ರಗಳಲ್ಲಿ 2,67,51,893 ಜನರು ಮತದಾನ ಮಾಡಲು ಅರ್ಹತೆ ಪಡೆದಿದ್ದಾರೆ. 30,164 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ' ಎಂದು ಸಂಜೀವ್ ಕುಮಾರ್ ಹೇಳಿದರು.
ಮತದಾನಕ್ಕೆ ಮುನ್ನಾ ಮತಗಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಗಳೇನು?
'ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಂಗವಿಕಲರು ಬಂದು ಮತದಾನ ಮಾಡಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ' ಎಂದು ಸಂಜೀವ್ ಕುಮಾರ್ ವಿವರಣೆ ನೀಡಿದರು.
ಮತದಾನ ನಡೆಯುವ ಕ್ಷೇತ್ರಗಳು : ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಉಡುಪಿ-ಚಿಕ್ಕಮಗಳೂರು, ಮೈಸೂರು-ಕೊಡಗು, ಚಿತ್ರದುರ್ಗ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ
ಪ್ರಮುಖ ಅಂಶಗಳು
*
14
ಲೋಕಸಭಾ
ಕ್ಷೇತ್ರಗಳು
*
2,67,51,893
ಒಟ್ಟು
ಮತದಾರರು
*
1,35,45,818
ಪುರುಷರು
*
1.32,03,258
ಮಹಿಳೆಯರು
*
2,817
ಇತರ
ಮತದಾರರು
*
241
ಒಟ್ಟು
ಅಭ್ಯರ್ಥಿಗಳು
(226
ಪುರುಷ,
15
ಮಹಿಳೆ)
*
ಹೆಚ್ಚು
ಅಭ್ಯರ್ಥಿಗಳು
ಬೆಂಗಳೂರು
ಉತ್ತರ
(31)
*
ಕಡಿಮೆ
ಅಭ್ಯರ್ಥಿಗಳು
ಹಾಸನ
(6)
ಚುನಾವಣಾ
ಕಣದಲ್ಲಿರುವ
ಪ್ರಮುಖ
ನಾಯಕರು
*
ಎಚ್.ಡಿ.ದೇವೇಗೌಡ
(ತುಮಕೂರು)
*
ಡಿ.ವಿ.ಸದಾನಂದ
ಗೌಡ
(ಬೆಂಗಳೂರು
ಉತ್ತರ)
*
ಕೃಷ್ಣ
ಬೈರೇಗೌಡ
(ಬೆಂಗಳೂರು
ಉತ್ತರ)
*
ನಿಖಿಲ್
ಕುಮಾರಸ್ವಾಮಿ
(ಮಂಡ್ಯ)
*
ಸುಮಲತಾ
(ಮಂಡ್ಯ)
*
ಪ್ರಜ್ವಲ್
ರೇವಣ್ಣ
(
ಹಾಸನ)