ಎಸ್ಸೆಸ್ಸೆಲ್ಸಿ ಪರೀಕ್ಷೆ, ಜಾಗೃತದಳದವರಿಗೂ ಮೊಬೈಲ್ ಫೋನ್ ನಿಷೇಧ
ಕೊಪ್ಪಳ, ಮಾರ್ಚ್ 22: ಜಿಲ್ಲೆಯಲ್ಲಿ ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆಗಳ ಭದ್ರತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಪರೀಕ್ಷಾ ಕಾರ್ಯದಲ್ಲಿ ಬೇಜವಾಬ್ದಾರಿತನ ತೋರುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಎಚ್ಚರಿಕೆ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಬಗ್ಗೆ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಈ ಬಾರಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಜಿಲ್ಲೆಯ 05 ಪರೀಕ್ಷಾ ಕೇಂದ್ರಗಳು ಇದುವರೆಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸದಿರುವುದು ಗಮನಕ್ಕೆ ಬಂದಿದೆ ಎಂದರು.[ಎಸ್ಸೆಸ್ಸೆಲ್ಸಿಯಲ್ಲಿ ಶೇ 90 ಅಂಕ ಗಳಿಸಿದರೆ ವಿಮಾನ ಯಾನ ಬಹುಮಾನ]
ಮಾರ್ಚ್ 30ರ ಒಳಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಈ ಬಾರಿ ಒಟ್ಟು 19,289 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು 59 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಮಾಧ್ಯಮದವರಿಗೆ
ಪ್ರವೇಶವಿಲ್ಲ
ರಾಜ್ಯದ
ವಿವಿಧೆಡೆ
ಪರೀಕ್ಷಾ
ಅಕ್ರಮಗಳು
ಬಗ್ಗೆ
ವರದಿಗಳು
ಕೇಳಿಬರುತ್ತಿದ್ದು,
ಪ್ರಶ್ನೆಪತ್ರಿಕೆಗಳ
ಸುರಕ್ಷತೆ
ಬಗ್ಗೆ
ಅಧಿಕಾರಿಗಳು
ಇಲಾಖೆ
ನಿರ್ದೇಶನಗಳನ್ನು
ಕಟ್ಟುನಿಟ್ಟಾಗಿ
ಪಾಲಿಸಬೇಕು.
ಪರೀಕ್ಷೆ
ಪ್ರಾರಂಭವಾದ
ಬಳಿಕ
ಕೊಠಡಿಯೊಳಗೆ
ಮಾಧ್ಯಮದವರಿಗೆ
ಪ್ರವೇಶ
ನೀಡುವಂತಿಲ್ಲ.
ಆದರೆ
ಪರೀಕ್ಷಾ
ಕೇಂದ್ರದ
ಹೊರಗಿನ
ಫೋಟೋ
ಅಥವಾ
ಚಿತ್ರೀಕರಣ
ನಡೆಸಬಹುದು
ಎಂದು
ಶಿಕ್ಷಣ
ಇಲಾಖೆ
ಸೂಚನೆ
ನೀಡಿದ್ದು,
ಅದರಂತೆ
ಕಾರ್ಯ
ನಿರ್ವಹಿಸಬೇಕು
ಎಂದು
ವೆಂಕಟರಾಜಾ
ಹೇಳಿದ್ದಾರೆ.[ಪ್ರತಿಯೊಬ್ಬ
ವಿದ್ಯಾರ್ಥಿ
ಓದಲೇಬೇಕಾದ
ಲೇಖನವಿದು]
ಮೊಬೈಲ್
ಫೋನ್
ಗೆ
ನಿಷೇಧ
ಸೂಕ್ತ
ಪೊಲೀಸ್
ಬಿಗಿ
ಬಂದೋಬಸ್ತ್
ಗೆ
ಕ್ರಮ
ಕೈಗೊಳ್ಳಬೇಕು.
ಪರೀಕ್ಷಾ
ಕೊಠಡಿಗೆ
ಯಾರೂ
ಮೊಬೈಲ್
ನೊಂದಿಗೆ
ಪ್ರವೇಶಿಸುವಂತಿಲ್ಲ.
ಪರೀಕ್ಷಾ
ಕೇಂದ್ರದ
ಮುಖ್ಯಸ್ಥರೂ
ತಮ್ಮ
ಕಚೇರಿಯಲ್ಲಿ
ಮಾತ್ರ
ಮೊಬೈಲ್
ಬಳಸಬಹುದೇ
ಹೊರತು,
ಪರೀಕ್ಷಾ
ಕೊಠಡಿಗೆ
ಒಯ್ಯುವಂತಿಲ್ಲ.
ಜಾಗೃತ
ದಳದವರೂ
ಪರೀಕ್ಷಾ
ಕೊಠಡಿಯೊಳಗೆ
ಮೊಬೈಲ್
ನೊಂದಿಗೆ
ಪ್ರವೇಶಿಸುವಂತಿಲ್ಲ.
ಈ
ನಿರ್ದೇಶನವನ್ನು
ಎಲ್ಲರೂ
ಕಟ್ಟುನಿಟ್ಟಾಗಿ
ಪಾಲಿಸಲೇಬೇಕು
ಎಂದಿದ್ದಾರೆ.
ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸಭೆಯಲ್ಲಿ ಸರ್ವಶಿಕ್ಷಣ ಅಭಿಯಾನ ಉಪಸಮನ್ವಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಖಜಾನೆ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು.