ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ತನಿಖೆಗೆ ಬಿಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ರಚನೆ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 6: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿದೆ. ಗುಪ್ತಚರ ವಿಭಾಗದ ಐಜಿಪಿ ಬಿಕೆ ಸಿಂಗ್ ಎಸ್ಐಟಿಯ ನೇತೃತ್ವ ವಹಿಸಲಿದ್ದಾರೆ.

ದಾಬೋಲ್ಕರ್, ಕಲಬುರಗಿ, ಗೌರಿ ಹತ್ಯೆ: ಮೂರು ಕೊಲೆ, ನಾಲ್ಕು ಸಾಮ್ಯತೆದಾಬೋಲ್ಕರ್, ಕಲಬುರಗಿ, ಗೌರಿ ಹತ್ಯೆ: ಮೂರು ಕೊಲೆ, ನಾಲ್ಕು ಸಾಮ್ಯತೆ

ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್ ಅನುಚೇತ್ ಎಸ್ಐಟಿಯ ಮುಖ್ಯ ತನಿಖಾ ಅಧಿಕಾರಿಯಾಗಿದ್ದಾರೆ. ಒಟ್ಟು 19 ಪೊಲೀಸ್ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ.

Special Investigation Team headed by BK Singh to probe Gauri Lankesh murder case

ಡಿಸಿಪಿ ಜಿತೇಂದ್ರ ಕಣಗಾವಿ, ಡೆಪ್ಯುಟಿ ಡೈರೆಕ್ಟರ್ ಹರೀಶ್ ಪಾಂಡೆ, ಎಸಿಪಿ ಕೆಪಿ ರವಿಕುಮಾರ್, ಡಿವೈಎಸ್ಪಿಗಳಾದ ಎನ್.ಬಿ ಸಕ್ರಿ, ಜಗನ್ನಾಥ್ ರೈ, ಕೆ.ಎಸ್.ನಾಗರಾಜ್ ಹಾಗೂ 13 ಜನ ಪೊಲೀಸ್ ಇನ್ಸ್ ಪೆಕ್ಟರ್ ಗಳು ತಂಡದಲ್ಲಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.

English summary
The Karnataka Government has formed a Special Investigation Team (SIT) to probe into the assassination of journalist Gauri Lankesh. Intelligence Division IGP BK Singh will lead the SIT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X