ಮೇ 1 ಕಾರ್ಮಿಕರ ದಿನಾಚರಣೆ, ಒಂದು ಚಿಂತನೆ
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿರುತ್ತದೆ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.
ಪ್ರತಿಯೊಂದು
ದೇಶದಲ್ಲಿ
ದೈಹಿಕ
ಇಲ್ಲವೇ
ಬೌದ್ಧಿಕ
ಶಕ್ತಿಯನ್ನು
ಪ್ರದರ್ಶಿಸಿ
ಕಾರ್ಮಿಕ
ಆದಾಯವನ್ನು
ಗಳಿಸಿ
ತಮ್ಮ
ಬದುಕಿನ
ಬಂಡಿಯನ್ನು
ಸಾಗಿಸುತ್ತಿರುತ್ತಾರೆ.
ಈ
ರೀತಿ
ಆದಾಯ
ಗಳಿಸುವ
ವರ್ಗಕ್ಕೆ
ಕಾರ್ಮಿಕ
ವರ್ಗವೆಂದು
ಕರೆಯುತ್ತಿದ್ದು
ಪ್ರತಿಯೊಂದು
ದೇಶದಲ್ಲಿ
ಶೇ
60
ರಿಂದ
65
ರಷ್ಟು
ಜನರು
ಕಾರ್ಮಿಕ
ವರ್ಗದಲ್ಲಿ
ಕಂಡು
ಬರುತ್ತಾರೆ.
[ಗಾರ್ಮೆಂಟ್ಸ್
ನೌಕರರ
ನಿಜವಾದ
ಸಮಸ್ಯೆ
ಯಾರೂ
ಕೇಳಲಿಲ್ಲ]
ಕೈಗಾರಿಕಾ ಕ್ರಾಂತಿಯ ನಂತರ ಅದರ ಫಲವಾಗಿ ಸಮಾಜದಲ್ಲಿ ಎರಡು ವರ್ಗಗಳು ಉದಯವಾದವು. ಒಂದು ಬಂಡವಾಳಶಾಹಿ (ಶ್ರೀಮಂತರು) ವರ್ಗ ಹಾಗೂ ಇನ್ನೊಂದು ಕಾರ್ಮಿಕ (ಬಡವರು) ವರ್ಗ. ಬಂಡವಾಳಶಾಹಿಗಳು ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದು, ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ.
ಕಾರ್ಮಿಕ
ದಿನ
ಆಚರಣೆ
ಏಕೆ?
:
ಬಂಡವಾಳ
ಶಾಹಿಗಳು
ಅನಿರ್ದಿಷ್ಟ
ಅವಧಿ
ತನಕ
ದುಡಿಸಿ
ಕೊಳ್ಳುತ್ತಿದ್ದರು.
ಇದನ್ನು
ವಿರೋಧಿಸಿದ
ಕಾರ್ಮಿಕರು
ದಿನದ
8
ಗಂಟೆ
ದುಡಿವ
ಅವಧಿ
ಎಂಬ
ಬೇಡಿಕೆ
ಮುಂದಿಟ್ಟರು.
ದಿನದ
24
ಗಂಟೆಗಳಲ್ಲಿ
8
ಗಂಟೆ
ದೈನಂದಿನ
ಚಟುವಟಿಕೆಗಳನ್ನು
ಪೂರೈಸುವ
8
ಗಂಟೆ
ದುಡಿವ
ಅವಧಿ
ಹಾಗೂ
ಇನ್ನುಳಿದ
8
ಗಂಟೆ
ವಿಶ್ರಾಂತಿಗಾಗಿ
ಮೀಸಲು
ಎಂಬ
ಲೆಕ್ಕಾಚಾರ
ಮುಂದಿಡಲಾಯಿತು.
[ನೌಕರರು
ಬೀದಿಗಿಳಿದಿದ್ದು
ಇದೇ
ಮೊದಲಲ್ಲ]
8 ಗಂಟೆ ದುಡಿವ ಅವಧಿ ಎಂದು ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿದ್ದರು. ಹೋರಾಟವು ತೀವ್ರ ಸ್ವರೂಪ ಪಡಿದಿದ್ದರಿಂದ ಇದನ್ನು ಹತ್ತಿಕ್ಕುವದಕ್ಕಾಗಿ ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. [ಖಾಸಗಿ ಸಂಸ್ಥೆಗಳಲ್ಲಿ ಹೆರಿಗೆ ರಜೆ ವಿಸ್ತರಣೆ : ಮೇನಕಾ ಗಾಂಧಿ]
ಇದರಲ್ಲಿ
ನೂರಾರು
ಕಾರ್ಮಿಕರು
ಸಾವನ್ನಪ್ಪಿದ್ದರು.
ಇದನ್ನು
ಲೆಕ್ಕಿಸದೇ
ಕಾರ್ಮಿಕರು
ಹೋರಾಟವನ್ನು
ಮುಂದುವರಿಸಿದ್ದರಿಂದ
ಕೊನೆಗೆ
ನ್ಯಾಯಯುತವಾದ
ದಿನದ
8
ಗಂಟೆ
ಕಾರ್ಮಿಕರ
ಕೆಲಸದ
ಅವಧಿಯನ್ನು
ಚಾಲನೆ
ತಂದರು.
ಇದರ
ಸವಿ
ನೆನಪಿಗೆ
ಮೇ
1
ರಂದು
ಕಾರ್ಮಿಕರ
ದಿನಾಚರಣೆಯನ್ನು
ಅಂತರರಾಷ್ಟೀಯ
ಮಟ್ಟದಲ್ಲಿ
ಆಚರಿಸುತ್ತಾ
ಬರಲಾಗುತ್ತಿದೆ.
[ಅಸಂಘಟಿತ
ಕಾರ್ಮಿಕರಿಗೂ
ವೈದ್ಯಕೀಯ
ವಿಮೆ]
ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದ ಅಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ದೇಶದಲ್ಲಿ ಕೇವಲ ಪ್ರತಿಶತ 12 ರಿಂದ 15 ರವರೆಗೆ ಮಾತ್ರ ಕಂಡು ಬಂದಿದ್ದು ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕ ಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದರೆ.
ಇನ್ನೂಳಿದ
ಶೇ
85
ರಷ್ಟು
ಕಾರ್ಮಿಕರು,
ಗ್ರಾಮೀಣ
ಪ್ರದೇಶದಲ್ಲಿ
ದುಡಿಯುವ
ಭೂ
ರಹಿತ
ಮಹಿಳೆ
ಹಾಗೂ
ಪುರುಷ
ಕಾರ್ಮಿಕರು
ನಗರಗಳಲ್ಲಿ
ಹೋಟೆಲ್ಗಳಲ್ಲಿ
ದುಡಿಯುವ
ಕಾರ್ಮಿಕರು,
ಸಣ್ಣ
ಉದ್ದಿಮೆಗಳಲ್ಲಿ
ದುಡಿಯುವವರು,
ಈ
ಮುಂತಾದ
ಕ್ಷೇತ್ರಗಳಲ್ಲಿ
ದುಡಿವ
ಕೆಲಸಗಾರರು
ಅಸಂಘಟಿತ
ಕಾರ್ಮಿಕರು.
ಇವರಿಗೆ
ಮೂಲತಃ
ನಿರ್ದಿಷ್ಟ
ಕೂಲಿ
ಎಂಬದೇ
ಗಗನ
ಕುಸುಮವಾಗಿದ್ದು
ತೀವ್ರತರ
ಶೋಷಣೆಗೆ
ಒಳಪಟ್ಟಿದ್ದಾರೆ.
ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ ನಂತರ ಕೇಂದ್ರ ಸರ್ಕಾರ 1949ರಲ್ಲಿ ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಆ ಕಾಯ್ದೆಯು ಬಹುತೇಕವಾಗಿ ಹಲ್ಲಿಲ್ಲದ ಕಾಯ್ದೆಯಾಗಿದ್ದು ಪರಿಪೂರ್ಣವಾಗಿ ಜಾರಿಯಲ್ಲಿ ತರಲು ಸಾಧ್ಯವಾಗಿಲ್ಲ.
ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತ್ತಿದ್ದು ಶ್ರಿಮಂತರು ಶ್ರೀಮಂತರಾಗಿಯೇ ಮಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಶೋಷಣೆಯ ವಿರುದ್ದ ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯೆತೆಯನ್ನು ಕಾಪಾಡಿಕೊಂಡು ಹೋರಾಟ ಮಾಡಲು ಸದಕಾಲ ಶ್ರಮಿಸುತ್ತಿರಬೇಕು. ಆಗ ಶೋಷಣೆ ನಿಲ್ಲುತ್ತದೆ. ಇದು ಕೇವಲ ಕಾರ್ಮಿಕರ ಐಕ್ಯೆತೆಯಿಂದ ಮಾತ್ರ ಸಾಧ್ಯ.
ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯೆತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳಲಿ ಎಂದು ಹಾರೈಸುತ್ತಾ ಪ್ರಪಂಚದ ಕಾರ್ಮಿಕರೆಲ್ಲರಿಗೂ ಕಾರ್ಮಿಕ ದಿನಾಚರಣೆ ಶುಭಾಶಯಗಳನ್ನು ಹಾರೈಸುತ್ತಿದ್ದೇವೆ. [ಪಿಟಿಐ ಚಿತ್ರಗಳು]