ಕೋಲಾರ: ಸೋನಿಯಾ ಗಾಂಧಿ ಭಾಷಣ ಮುಖ್ಯಾಂಶ
ಕೋಲಾರ, ಏ.9: ಚಿನ್ನದ ನಾಡು ಕೋಲಾರದಲ್ಲಿ ಚುನಾವಣಾ ಪ್ರಚಾರ ಕಾವೇರುತ್ತಿದ್ದಂತೆ ಸ್ಟಾರ್ ಪ್ರಚಾಕರಿಗೆ ಅಭ್ಯರ್ಥಿಗಳು ಮೊರೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ಪ್ರಚಾರ ಭಾಷಣ ನಡೆಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಅವರ ಪರ ಅಂತರ ಗಂಗೆ ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಂಡಿದ್ದಾರೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ,
ಕೆಪಿಸಿಸಿ
ಅಧ್ಯಕ್ಷ
ಜಿ.
ಪರಮೇಶ್ವರ್,
ಅಭ್ಯರ್ಥಿ
ಕೆ.ಎಚ್
ಮುನಿಯಪ್ಪ
ಸೇರಿದಂತೆ
ಕೋಲಾರ
ಲೋಕಸಭಾ
ಕ್ಷೇತ್ರಕ್ಕೆ
ಸೇರಿದ
ಎಂಟು
ಅಸೆಂಬ್ಲಿ
ಕ್ಷೇತ್ರದ
ಕಾಂಗ್ರೆಸ್
ನಾಯಕರು
ಸಮಾವೇಶದಲ್ಲಿ
ಪಾಲ್ಗೊಂಡಿದ್ದಾರೆ.
ಇಲ್ಲಿಂದ
ಸೋನಿಯಾ
ಗಾಂಧಿ
ಅವರು
ಮೈಸೂರಿಗೆ
ತೆರಳಿ
ಕಾಂಗ್ರೆಸ್
ಅಭ್ಯರ್ಥಿ
ಎಚ್.
ವಿಶ್ವನಾಥ್
ಪರ
ಬಹಿರಂಗ
ಸಭೆಯಲ್ಲಿ
ಪಾಲ್ಗೊಳ್ಳಲ್ಲಿದ್ದಾರೆ.
ಸೋನಿಯಾ
ಗಾಂಧಿ
ಭಾಷಣದ
ಮುಖ್ಯಾಂಶ
ಇಂತಿದೆ:
*
ಕಾಂಗ್ರೆಸ್
ಪಕ್ಷ
ಜಾತ್ಯಾತೀತ
ಪಕ್ಷವಾಗಿದೆ.
ಗುಜರಾತಿನಲ್ಲಿ
ಮಹಿಳೆಯರಿಗೆ
ರಕ್ಷಣೆ
ಇಲ್ಲ.
ಅತ್ಯಾಚಾರಗಳು
ನಡೆದಿವೆ.
*
ಬಿಜೆಪಿಗೆ
ವಿವಿಧತೆಯಲ್ಲಿ
ಏಕತೆ
ಬಗ್ಗೆ
ನಂಬಿಕೆ
ಇಲ್ಲ.
*
ಶೇ
50ರಷ್ಟು
ಮಹಿಳೆಯರಿಗೆ
ಉದ್ಯೋಗ,
ಎಲ್ಲೆಡೆ
ಮೀಸಲಾತಿ
ಕಲ್ಪಿಸಿದ್ದೇವೆ.
*
14ವರ್ಷದೊಳಗಿನ
ಮಕ್ಕಳಿಗೆ
ಉಚಿತ
ಶಿಕ್ಷಣ.
*
ಪ್ರತಿ
ಗ್ರಾಮಗಳಿಗೂ
ಇಂಟರ್ನೆಟ್
ವ್ಯವಸ್ಥೆ
ಕಲ್ಪಿಸಿದ್ದು
ಕಾಂಗ್ರೆಸ್
ಪಕ್ಷ.
*
ಕರ್ನಾಟಕಕ್ಕೆ
ಗುಜರಾತ್
ಮಾದರಿಯಲ್ಲ.
ಸಿದ್ದರಾಮಯ್ಯ
ಹಾಗೂ
ಪರಮೇಶ್ವರ್
ಅವರು
ಅಭಿವೃದ್ಧಿ
ಪಥಕ್ಕೆ
ರಾಜ್ಯವನ್ನು
ತಂದಿದ್ದಾರೆ.
*
ಇಲ್ಲಿ
ಈ
ಹಿಂದೆ
ಇದ್ದ
ಬಿಜೆಪಿ
ಸರ್ಕಾರ
ಭ್ರಷ್ಟಾಚಾರದಲ್ಲಿ
ಮುಳುಗಿತ್ತು.
ಯಡಿಯೂರಪ್ಪ
ಜೈಲು
ಸೇರಿದ್ದರು.
*
ಗುಜರಾತ್
ಅಭಿವೃದ್ಧಿ
ಬಗ್ಗೆ
ಮೋದಿ
ಎಲ್ಲೆಡೆ
ಸುಳ್ಳು
ಹೇಳುತ್ತಾ
ಬರುತ್ತಿದ್ದಾರೆ.
ಸತ್ಯ
ಜನರಿಗೆ
ಅರಿವಾಗಲಿದೆ.
*
ನಿಮ್ಮ
ಅಭ್ಯರ್ಥಿ
ಕೆ.ಎಚ್
ಮುನಿಯಪ್ಪ
ಅವರು
ಅನೇಕ
ಯೋಜನೆಗಳನ್ನು
ಕೊಟ್ಟಿದ್ದಾರೆ.
ಅವರಿಗೆ
ನಿಮ್ಮ
ಮತ
ನೀಡಿ
ಎಂದು
ಸೋನಿಯಾ
ಗಾಂಧಿ
ಕರೆ
ನೀಡಿದರು.
ಸೋನಿಯಾಜೀಗೆ
ಕೋಲಾರದಲ್ಲಿ
ಸಿಹಿ
ಮುತ್ತು
“@digvijaya_28:
Soniaji
in
Kolar
Karnataka
pic.twitter.com/CEj58k8uP3”
how
sweet!
—
Divya
Spandana/Ramya
(@divyaspandana)
April
9,
2014