ಕುಮಾರಸ್ವಾಮಿ ಜತೆ ಪ್ರಮಾಣವಚನ ಸ್ವೀಕರಿಸುವವರು ಯಾರು?
Recommended Video
ಬೆಂಗಳೂರು, ಮೇ 22: ಬುಧವಾರ ನಡೆಯುವ ಸಮಾರಂಭದಲ್ಲಿ ತಾವು ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಉಳಿದ ಶಾಸಕರು ಮತ್ತು ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದ ನಿಯೋಜಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಾತು ಬದಲಿಸಿದ್ದಾರೆ.
ಬುಧವಾರ ನಡೆಯಲಿರುವ ಸಮಾರಂಭದಲ್ಲಿ ನಮ್ಮ ಜತೆ ಇನ್ನೂ ಕೆಲವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸ್ಪೀಕರ್ ಸ್ಥಾನ ಕಾಂಗ್ರೆಸ್ಗೆ ಬಿಟ್ಟುಕೊಡಲು ಒಪ್ಪಿಕೊಂಡ ಜೆಡಿಎಸ್
ಮಂಗಳವಾರ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಜತೆ ಯಾರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬ ವಿವರ ನೀಡಲಿಲ್ಲ.
ಸಂಜೆ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ, ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಇಬ್ಬರು ಉಪಮುಖ್ಯಮಂತ್ರಿ ನೇಮಕ ಎಚ್ ಡಿಕೆ ಗೆ ಸುತಾರಾಂ ಇಷ್ಟವಿಲ್ಲ!
ಪತ್ನಿ ಅನಿತಾ ಜತೆ ಎಚ್ಎಎಲ್ನಿಂದ ವಿಶೇಷ ಹೆಲಿಕಾಪ್ಟರ್ನಲ್ಲಿ ಧರ್ಮಸ್ಥಳಕ್ಕೆ ತೆರಳಿದ ಕುಮಾರಸ್ವಾಮಿ, ಅಲ್ಲಿ ಪೂಜೆ ಸಲ್ಲಿಸಿ ಬಳಿಕ ಶೃಂಗೇರಿಗೆ ತೆರಳಲಿದ್ದಾರೆ. ಅಲ್ಲಿ ಭಾರತೀತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದು ಬೆಂಗಳೂರಿಗೆ ಮರಳಲಿದ್ದಾರೆ.
ಶೃಂಗೇರಿ ಶಾರದಾಂಬೆಯ ಚರಣಕ್ಕೆ 'ಬಿಫಾರಂ' ಅರ್ಪಿಸಿದ ದೇವೇಗೌಡ್ರು
ಅದಕ್ಕೂ ಮುನ್ನ ಸಾಧ್ಯವಾದರೆ ತುಮಕೂರಿಗೆ ತೆರಳಿ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದರು.
ಸಂಜೆ ನಾಲ್ಕು ಗಂಟೆ ಬಳಿಕ ಕುಮಾರಸ್ವಾಮಿ ಅವರು ಬೆಂಗಳೂರಿಗೆ ವಾಪಸಾಗುವ ನಿರೀಕ್ಷೆಯಿದ್ದು, ಬಳಿಕ ಕಾಂಗ್ರೆಸ್ ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಭಾರೀ ಸಂಚಲನ ಮೂಡಿಸಿದ ಶೃಂಗೇರಿಯಲ್ಲಿ ಗೌಡರ 'ಅತಿರುದ್ರ ಮಹಾಯಾಗ
ಅದ್ಧೂರಿ
ಸಮಾರಂಭದಲ್ಲಿ
ಪ್ರಮಾಣವಚನ
ಎಚ್ಡಿ
ಕುಮಾರಸ್ವಾಮಿ
ಅವರು
ಮುಖ್ಯಮಂತ್ರಿಯಾಗಿ
ಪ್ರಮಾಣವಚನ
ಸ್ವೀಕರಿಸುವ
ಸಮಾರಂಭಕ್ಕೆ
ದೇಶದ
ವಿವಿಧ
ಭಾಗಗಳ
ಅನೇಕ
ರಾಜಕೀಯ
ಮುಖಂಡರು,
ಗಣ್ಯರು
ಆಗಮಿಸಲಿದ್ದು,
ಸುಮಾರು
ಒಂದು
ಲಕ್ಷ
ಜನ
ಸೇರುವ
ನಿರೀಕ್ಷೆಯಿದೆ.
ಬುಧವಾರ
ಸಂಜೆ
4.30ರ
ಸುಮಾರಿಗೆ
ಕುಮಾರಸ್ವಾಮಿ
ಪ್ರಮಾಣವಚನ
ಸ್ವೀಕರಿಸಲಿದ್ದಾರೆ.
ಸ್ಪೀಕರ್ ಸ್ಥಾನ ಕಾಂಗ್ರೆಸ್ಗೆ ಬಿಟ್ಟುಕೊಡಲು ಒಪ್ಪಿಕೊಂಡ ಜೆಡಿಎಸ್
80*30 ಅಳತೆಯ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಸ್ಥಳದ ಸುತ್ತಲೂ 20 ಎಲ್ಇಡಿ ಪರದೆಗಳನ್ನು ಅಳವಡಿಸಲಾಗುತ್ತದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಸುಮಾರು 30 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
ಸಂಪುಟ ರಚನೆಯಲ್ಲಿ ನನ್ನ ಪಾತ್ರವಿಲ್ಲ: ಎಚ್.ಡಿ. ದೇವೇಗೌಡ ಸ್ಪಷ್ಟನೆ
ಅರಮನೆ ಮೈದಾನ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಸಮಾರಂಭ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ರಾಷ್ಟ್ರದ ಗಣ್ಯರು ಬರಲಿರುವುದರಿಂದ ವಿಧಾನಸೌಧದಲ್ಲಿಯೇ ಆಯೋಜನೆ ಮಾಡುವುದು ಸೂಕ್ತ ಎಂದು ಜೆಡಿಎಸ್ನ ಅನೇಕ ಮುಖಂಡರು ಸಲಹೆ ನೀಡಿದ್ದರು.
ಸಮಾರಂಭಕ್ಕೆ
ಬರಲಿರುವ
ಗಣ್ಯರು
ಕಾಂಗ್ರೆಸ್
ಅಧ್ಯಕ್ಷ
ರಾಹುಲ್
ಗಾಂಧಿ,
ಸೋನಿಯಾ
ಗಾಂಧಿ,
ದೆಹಲಿ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್,
ನ್ಯಾಷನಲ್
ಕಾನ್ಫರೆನ್ಸ್
ಮುಖಂಡ
ಫಾರೂಕ್
ಅಬ್ದುಲ್ಲಾ,
ತೆಲಂಗಾಣ
ಮುಖ್ಯಮಂತ್ರಿ
ಕೆ.
ಚಂದ್ರಶೇಖರ
ರಾವ್,
ಆಂಧ್ರಪ್ರದೇಶ
ಮುಖ್ಯಮಂತ್ರಿ
ಎನ್.
ಚಂದ್ರಬಾಬು
ನಾಯ್ಡು,
ಪಶ್ಚಿಮ
ಬಂಗಾಳ
ಮುಖ್ಯಮಂತ್ರಿ
ಮಮತಾ
ಬ್ಯಾನರ್ಜಿ,
ಒರಿಸ್ಸಾ
ಮುಖ್ಯಮಂತ್ರಿ
ನವೀನ್
ಪಟ್ನಾಯಕ್,
ಡಿಎಂಕೆ
ಮುಖಂಡ
ಎಂ.ಕೆ.
ಸ್ಟಾಲಿನ್,
ಕೇರಳ
ಮಾಜಿ
ಮುಖ್ಯಮಂತ್ರಿ
ಉಮ್ಮನ್
ಚಾಂಡಿ,
ಅಸ್ಸಾಂ
ಮಾಜಿ
ಮುಖ್ಯಮಂತ್ರಿ
ಪ್ರಫುಲ್ಲ
ಕುಮಾರ್
ಮಹಾಂತ,
ಸಿಪಿಎಂ
ಮುಖಂಡ
ಸೀತಾರಾಂ
ಯೆಚೂರಿ,
ಸಿಪಿಐ
ಮುಖಂಡ
ಡಿ.
ರಾಜಾ,
ಎನ್ಸಿಪಿ
ಮುಖಂಡ
ಶರದ್
ಪವಾರ್
ಕಾರ್ಯಕ್ರಮಕ್ಕೆ
ಆಹ್ವಾನ
ಪಡೆದಿರುವ
ಪ್ರಮುಖರಾಗಿದ್ದಾರೆ.