ದಾರ್ಶನಿಕ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ! ಸಾಧನೆ, ಕೊಡುಗೆಗಳು
ಬೆಂಗಳೂರು, ಸೆಪ್ಟೆಂಬರ್ 15: ಆಧುನಿಕ ಭಾರತ ನಿರ್ಮಾತೃಗಳಲ್ಲಿ ಅಗ್ರಗಣ್ಯ ಮಹಾನುಭಾವರಲ್ಲಿ ನಿಲ್ಲುವ ಕರ್ನಾಟಕದ ಪುತ್ರ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು ದೇಶದ ನೀರಾವರಿ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಲ್ಲದೆ, ದಖನ್ ಪ್ರಸ್ಥಭೂಮಿಯಲ್ಲಿ ನೀರಾವರಿ ಕ್ರಾಂತಿಗೆ ಕಾರಣೀಕರ್ತರಾಗಿ ಅಣೆಕಟ್ಟು ನಿರ್ಮಾಣದ ವಿನ್ಯಾಸದ ಆವಿಷ್ಕಾರ ಮಾಡಿದ ದೇಶಕಂಡ ಅಪರೂಪದ ಎಂಜಿನಿಯರ್.
ಇಂತಹ ಅಪ್ರತಿಮ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯನವರಿಗೆ ಇಂದು 158ನೇ ಜನ್ಮ ದಿನ, ಭಾರತ ಮಾತ್ರವಲ್ಲದೆ ವಿಶ್ವದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್ ಎಂ.ವಿಯವರ ಜೀವನವೇ ಒಂದು ಸ್ಫೂರ್ತಿದಾಯಕ.
ಭಾರತರತ್ನ ಸರ್ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ
ಸೆಪ್ಟೆಂಬರ್ 15, 1861ರಂದು ಜನಿಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು. 1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮುಂದಿನ ಅವಧಿಯಲ್ಲಿ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆಯಿಂದ ಹಾಗೂ ಕಾರ್ಯಗಳಿಂದ ಪ್ರಸಿದ್ಧರಾದವರು.
ಮುಂಬೈ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರ ಸೇವೆ ಅಸಾಧಾರಣ. ಪುಣೆ, ಕೊಲ್ಹಾಪುರ, ಸೋಲಾಪುರ, ವಿಜಾಪುರ, ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ಮಿಲಾನ್ ಮತ್ತು ಈಡನ್ ನಗರಗಳಿಗೆ ಭೇಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು.
ವಿಶ್ವೇಶ್ವರಯ್ಯ ಅವರ ಕೃತಿಗಳ ಪರಿಚಯ
Memoirs of my working life (ನನ್ನ ವೃತ್ತಿ ಜೀವನದ ನೆನಪುಗಳು - ಕನ್ನಡಕ್ಕೆ ಡಾ. ಗಜಾನನ ಶರ್ಮ), Reconstructing India ಹಾಗೂ 1902 ರಲ್ಲಿ ವಿಶ್ವೇಶ್ವರಯ್ಯ ನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ "Present State of Education in Mysore" ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು. ಮುಂಬೈ ರಾಜ್ಯದಲ್ಲಿ ಅವರು ಸೇವೆಯಲ್ಲಿದ್ದಾಗ, ಪುಣೆ ನಗರದಲ್ಲಿ ಆಗಿನ ಮಹಾನ್ ನಾಯಕರಾಗಿದ್ದ ಲೋಕಮಾನ್ಯ ತಿಲಕ್, ರಾನಡೆಯವರು ಮತ್ತು ಗೋಪಾಲಕೃಷ್ಣ ಗೋಖಲೆಯವರಿಂದ ದೇಶಪ್ರೇಮವನ್ನು ಬೆಳೆಸಿಕೊಂಡವರು. ಈ ನಾಯಕರುಗಳ ಸಂಪರ್ಕದಿಂದಾಗಿ ರಾಷ್ಟ್ರಕ್ಕಾಗಿ ಯಾವ ರೀತಿಯಿಂದ ಸೇವೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು.
ಇಂಜಿನಿಯರ್ ದಿನ : ವಿಶ್ವೇಶ್ವರಯ್ಯನವರ ಸಾಧನೆಗಳು
ಸರ್ ಎಂ ವಿಶ್ವೇಶ್ವರಯ್ಯ ಸಾಧನೆಗಳೇನು?
ಮುಂಬೈ ರಾಜ್ಯದಲ್ಲಿ ಇವರು ನಿವೃತ್ತಿ ಪಡೆದುಕೊಂಡ ನಂತರ ಹೈದ್ರಾಬಾದ್ ಸಂಸ್ಥಾನದ ನಿಜಾಮರ ಕರೆ ಮೇರೆಗೆ 1908ರಲ್ಲಿ ಹೈದ್ರಾಬಾದ್ ನಗರದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದರು. ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ್ ಸಂಸ್ಥಾನದ ನಿಜಾಮರು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಹೈದ್ರಾಬಾದ್ ನಗರವನ್ನು ನವೀಕರಿಸಿ ಅಧುನೀಕರಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಹಿರಿದಾಗಿತ್ತು.
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿದಾಗ ವಿಶ್ವೇಶ್ವರಯ್ಯನವರು, ಮೈಸೂರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ಮೀಸಲಿರುವುದಾಗಿ ತಿಳಿಸಿ, ಇದಕ್ಕೆ ಒಪ್ಪುವುದಾದರೆ ನನ್ನ ಸೇವೆ ಮೈಸೂರು ರಾಜ್ಯಕ್ಕೆ ಲಭ್ಯವೆಂದು ತಿಳಿಸಿದರು. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಸಂಸ್ಥಾನದ ಅಭಿವೃದ್ಧಿ ಕುರಿತು ದೂರದೃಷ್ಟಿ ಹೊಂದಿದ್ದರಿಂದ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿದರು.
ಅಭಿಜಾತ ಅಭಿಯಂತ ಸರ್ ಎಮ್ ವಿಶ್ವೇಶ್ವರಯ್ಯ
ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಸೇವೆ
ದಿವಾನರಾದ
ನಂತರ
ಸಂಪದಭಿವೃದ್ಧಿ
ಸಮ್ಮೇಳನದಲ್ಲಿ
ಚರ್ಚಿಸಿದ
ವಿಷಯಗಳನ್ನು
ಆಧರಿಸಿ
ಆಯವ್ಯಯ
ಮಂಡಿಸುತ್ತಿದ್ದರು.
ಇವರು
ಮಂಡಿಸಿದ
ಆಯವ್ಯಯವನ್ನು
ಸಂಪತ್ತಿನ
ಆಯವ್ಯಯವೆಂದು
ಮಹಾರಾಜರು
ವರ್ಣಿಸಿದ್ದರು.
1911
ರಲ್ಲಿ
ಮೈಸೂರು
ಸಂಸ್ಥಾನದಲ್ಲಿ
ವಿಶ್ವೇಶ್ವರಯ್ಯನವರು
ಸಂಪದಭಿವೃದ್ಧಿ
ಸಮ್ಮೇಳನ
ಪ್ರಾರಂಭಿಸಿ
ಅದನ್ನು
ಮುಂದುವರಿಸಿಕೊಂಡು
ಹೋಗಿದ್ದರಿಂದ,
ಮೈಸೂರು
ಸಂಸ್ಥಾನವು
ವ್ಯವಸ್ಥಿತ
ರೀತಿಯಲ್ಲಿ
ಆರ್ಥಿಕ
ಯೋಜನೆಗಳನ್ನು
ಜಾರಿಗೆ
ತರಲು
ಸಾಧ್ಯವಾಯಿತು.
ಮೈಸೂರು
ಸಂಸ್ಥಾನದ
ಮುಖ್ಯ
ಇಂಜಿನಿಯರ್
ಆದಾಗ
ನಾಡಿನ
ರಸ್ತೆಗಳು,
ರೈಲ್ವೆ
ಮಾರ್ಗ
ವಿಸ್ತರಣೆ,
ನೀರಾವರಿ,
ಕೆರೆಕಟ್ಟೆಗಳನ್ನು
ಯಾವ
ರೀತಿಯಲ್ಲಿ
ನಿರ್ಮಿಸಿ
ನಿರ್ವಹಿಸಬಹುದು
ಎನ್ನುವ
ಬಗ್ಗೆ
ಯೋಜನೆಯನ್ನು
ರೂಪಿಸಿ
ಅನುಷ್ಠಾನ
ಮಾಡುವ
ಬಗ್ಗೆ
ತಮ್ಮ
ಪ್ರಯತ್ನವನ್ನು
ಮುಂದುವರಿಸಿದ್ದರು.
ಮೈಸೂರು
ದಿವಾನರಾಗಿದ್ದ
ವರ್ಷಗಳಲ್ಲಿ
ವಿಶ್ವೇಶ್ವರಯ್ಯನವರು
ಮೈಸೂರು
ಮಹಾರಾಜರು
ಮತ್ತು
ಬ್ರಿಟಿಷ್
ಸರ್ಕಾರದೊಂದಿಗೆ
ಅಧಿಕಾರ
ಹಸ್ತಾಂತರ
ಕುರಿತು
ಇದ್ದ
ಒಪ್ಪಂದವನ್ನು
ತಮ್ಮ
ರಾಜ
ನೀತಿಜ್ಞ
ನಡವಳಿಯಿಂದಾಗಿ
ಗೌರವಯುತವಾಗಿ
ಜಾರಿಗೊಳಿಸಲು
ನೆರವಾದರು.
ಸರ್ ವಿಶ್ವೇಶ್ವರಯ್ಯ ಅವರ ಕೊಡುಗೆಗಳು
*
ಕೃಷ್ಣರಾಜಸಾಗರದ
ನಿರ್ಮಾಣ.
*
ಭದ್ರಾವತಿ
ಕಬ್ಬಿಣ
ಮತ್ತು
ಉಕ್ಕು
ಕಾರ್ಖಾನೆಯ
ಚೇರಮನ್ನರಾಗಿ
ಅದರ
ಅಭಿವೃದ್ಧಿಗೆ
ಕೊಡುಗೆ.
*
ಮೈಸೂರು
ಸಾಬೂನು
ಕಾರ್ಖಾನೆಯ
ಸ್ಥಾಪನೆ.
*
ಮೈಸೂರು
ವಿಶ್ವವಿದ್ಯಾಲಯದ
ಸ್ಥಾಪನೆ.
*
ಮೈಸೂರು
ಬ್ಯಾಂಕ್
ಸ್ಥಾಪನೆ.
*
ಮೈಸೂರು
ಮತ್ತು
ಬೆಂಗಳೂರಿನಲ್ಲಿ
ಸಾರ್ವಜನಿಕ
ಗ್ರಂಥಾಲಯಗಳ
ಸ್ಥಾಪನೆ.
*
ಮೈಸೂರು
ಚೇಂಬರ್
ಆಫ್
ಕಾಮರ್ಸ್
ಸ್ಥಾಪನೆ.
*
ಕನ್ನಡ
ಸಾಹಿತ್ಯ
ಪರಿಷತ್
ಸ್ಥಾಪನೆ.
*
ಶ್ರೀ
ಜಯಚಾಮರಾಜೇಂದ್ರ
ವೃತ್ತಿಶಿಕ್ಷಣ
ತರಬೇತಿ
ಸಂಸ್ಥೆಯ
ಸ್ಥಾಪನೆ.