ಒಂದಂಕಿ ಲಾಟರಿ ಹಗರಣಕ್ಕೆ ಸಿಬಿಐ ದೊಡ್ಡ ನಮಸ್ಕಾರ!
ಬೆಂಗಳೂರು, ಜುಲೈ 14 : ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಬಹುಕೋಟಿ ರೂಪಾಯಿ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವುದಿಲ್ಲ. ಈ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೂ ಸೂಕ್ತವಾದ ಸಾಕ್ಷ್ಯಗಳು ಪ್ರಾಥಮಿಕ ತನಿಖೆಯಲ್ಲಿ ಸಿಬಿಐಗೆ ಲಭ್ಯವಾಗಿಲ್ಲ.
ಜನರ
ಮತ್ತು
ಪ್ರತಿಪಕ್ಷಗಳ
ಒತ್ತಾಯಕ್ಕೆ
ಮಣಿದಿದ್ದ
ಕರ್ನಾಟಕ
ಸರ್ಕಾರ
ಒಂದಂಕಿ
ಲಾಟರಿ
ಹಗರಣದ
ತನಿಖೆಯನ್ನು
ಸಿಬಿಐಗೆ
ವಹಿಸಿತ್ತು.
ಆದರೆ,
ಪ್ರಕರಣದ
ತನಿಖೆ
ಆರಂಭಿಸುವ
ಮೊದಲು
ಸಿಬಿಐ
ಪ್ರಾಥಮಿಕ
ಮಾಹಿತಿ
ಸಂಗ್ರಹಣೆ
ಮಾಡಿದೆ.
ಅದರ
ಅನ್ವಯ
ಈ
ಹಗರಣದ
ತನಿಖೆಯನ್ನು
ಕೈಗೆತ್ತಿಕೊಳ್ಳದಿರಲು
ನಿರ್ಧರಿಸಿದೆ.
[ಲಾಟರಿ
ಹಗರಣ
ಸಿಬಿಐ
ತನಿಖೆ
ಎಲ್ಲಿಗೆ
ಬಂತು?]
ಲಾಟರಿ ಹಗರಣದ ತನಿಖೆಯನ್ನು ಮೊದಲು ರಾಜ್ಯದ ಪೊಲೀಸರು ನಡೆಸುತ್ತಿದ್ದರು. ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ತಕ್ಷಣ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದವು. ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ?]
ಈ ಪ್ರಕರಣ ತಾನು ತನಿಖೆ ನಡೆಸಲು ಸೂಕ್ತವಾದದ್ದೇ? ಎಂಬುದನ್ನು ಅಧ್ಯಯನ ಮಾಡಿದ ಬಳಿಕ ಸಿಬಿಐ ತನಿಖೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಹಲವಾರು ಬಾರಿ ರಾಜ್ಯ ಸರ್ಕಾರಗಳು ತನಿಖೆಗೆ ನೀಡಿದ ಪ್ರಸ್ತಾವನೆಗಳನ್ನು ಸಿಬಿಐ ತಿರಸ್ಕಾರ ಮಾಡಿದ ಉದಾಹರಣೆಗಳಿವೆ. [ಸಿಬಿಐ, ಸಿಐಡಿ ತನಿಖೆಗೆ ವ್ಯತ್ಯಾಸವೇನು?]
ಅಲೋಕ್ ಕುಮಾರ್ ಭಾಗಿಯಾಗಿಲ್ಲ : ಒಂದಂಕಿ ಲಾಟರಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಭಾಗಿಯಾಗಿರುವ ಕುರಿತು ಸೂಕ್ತವಾದ ಸಾಕ್ಷ್ಯಗಳು ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ಅಲೋಕ್ ಕುಮಾರ್ ಹೆಸರು ಕೇಳಿಬಂದ ತಕ್ಷಣ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. [ಲಾಟರಿ ಸಾಮ್ರಾಜ್ಯಕ್ಕೆ ಈತನೇ ಕಿಂಗ್]
ಲಾಟರಿ ಹಗರಣ ಕಿಂಗ್ ಪಿನ್ ಪಾರಿರಾಜನ್ ಗೊತ್ತು. ಆದರೆ, ಆತನ ಜೊತೆ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ತಮ್ಮ ಮೇಲೆ ಆರೋಪ ಕೇಳಿಬಂದಾಗಲೇ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದರು. ಈಗ ಸಿಬಿಐ ಸಹ ತನ್ನ ಪ್ರಾಥಮಿಕ ತನಿಖೆಯಲ್ಲಿ ಇದೇ ಮಾಹಿತಿಯನ್ನು ಸಂಗ್ರಹ ಮಾಡಿದೆ.
ಅಂದಹಾಗೆ 2015ರ ಮೇ 26ರಂದು ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತ್ತು. ಕರ್ನಾಟಕದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆಯನ್ನು ಈಗಾಗಲೇ ಸಿಬಿಐ ನಡೆಸುತ್ತಿದೆ.