ಸಿದ್ದರಾಮೋತ್ಸವ: ಕಾಂಗ್ರೆಸ್ಸಿಗೆ 6 ಪ್ರಶ್ನೆ ಕೇಳಿದ ಬಿಜೆಪಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ಸಂಬಂಧ ಆಯೋಜಿಸಲಾಗಿದ್ದ ಸಿದ್ದರಾಮೋತ್ಸವ ಮತ್ತದರ ಭರ್ಜರಿ ಯಶಸ್ಸಿನಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆಯೇ?. ಕಾಂಗ್ರೆಸ್ ನಾಯಕರ ಪ್ರಕಾರ ಹೌದು.
ಕಾಂಗ್ರೆಸ್ಸಿನ ಹಲವು ನಾಯಕರು ಹೇಳುವ ಪ್ರಕಾರ, ಈ ರೀತಿಯ ಯಶಸ್ಸನ್ನು ಖುದ್ದು ಪಕ್ಷವೇ ನಿರೀಕ್ಷಿಸಿರಲಿಲ್ಲ. ಸಿದ್ದರಾಮಯ್ಯನವರು ಹೇಳುವ ಪ್ರಕಾರ, ಅವರನ್ನು ಕಂಡರೆ ಬಿಜೆಪಿಯವರಿಗೆ ಭಯವಂತೆ. ಕೋಲಾರ ಜಿಲ್ಲಾ ಪ್ರವಾಸದ ವೇಳೆ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ.
ರಮೇಶ್ ಕುಮಾರ್ ವಿರುದ್ದ ಅಕ್ಷರಶಃ ಬೆಂಕಿ ಉಗುಳಿದ ಕುಮಾರಸ್ವಾಮಿ
ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಕಾಂಗ್ರೆಸ್ಸಿಗೆ ಆರು ಪ್ರಶ್ನೆಗಳು ಕೇಳಿದೆ ಮತ್ತು ಉತ್ತರ ನೀಡಬೇಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದೆ.
ಪ್ರಶ್ನೆ - 1: ಸಿದ್ದರಾಮೋತ್ಸವ ಸಂಬಂಧಿತ ಪ್ರಶ್ನೆಗಳು. ದೇಶದ ಆರ್ಥಿಕತೆ ಮತ್ತು ರಾಜಕೀಯ ಪಕ್ಷದ ಅರ್ಥಶಾಸ್ತ್ರದ ನಡುವೆ ಯಾವುದೇ ಸಂಬಂಧವಿಲ್ಲವೇ? ಒಂದುಕಡೆ ಬೆಲೆ ಏರಿಕೆ, ಬಡತನದ ವಿರುದ್ಧ ಪ್ರತಿಭಟನೆ ನಡೆಸುವ ಕಾಂಗ್ರೆಸ್ ಇನ್ನೊಂದು ಕಡೆ ಕೋಟಿಗಟ್ಟಲೆ ವ್ಯಯಿಸಿ ಜನ್ಮದಿನ ಆಚರಿಸಿಕೊಳ್ಳುವುದು ಎಷ್ಟು ಸರಿ? - ಇದು ಬಿಜೆಪಿ ಕೇಳಿದ ಮೊದಲ ಪ್ರಶ್ನೆ.
ಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರದ್ದು ದೇಶದ್ರೋಹ; ಮಹದೇವಪ್ಪ
ಕಾಂಗ್ರೆಸ್ಸಿಗೆ ಬಿಜೆಪಿ ಕೇಳಿದ ಪ್ರಶ್ನೆಗಳು
ಪ್ರಶ್ನೆ - 2: ಕಾಂಗ್ರೆಸ್ ಪಕ್ಷದ ಸುಪ್ರೀಂಕೋರ್ಟ್ ನಾಯಕರು ಭ್ರಷ್ಟಾಚಾರ ಸಂಬಂಧಿತವಾಗಿ ಕಾನೂನು ಕ್ರಮ ಎದುರಿಸುತ್ತಿರುವಾಗ ಕರ್ನಾಟಕ ಕಾಂಗ್ರೆಸ್ಸಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ಮೂಲಕ ಗಾಂಧಿ ಕುಟುಂಬವನ್ನು ಧಿಕ್ಕರಿಸಲಾಗುತ್ತಿದೆಯೇ? #ಉತ್ತರಿಸಿಕಾಂಗ್ರೆಸ್
ಪ್ರಶ್ನೆ
-3:
ಸಿದ್ದರಾಮಯ್ಯ
ಅವರ
ಜನ್ಮದಿನದ
ಅಮೃತ
ಮಹೋತ್ಸವ
ಆಚರಿಸಿಕೊಳ್ಳುವ
ಕಾಂಗ್ರೆಸ್
ನಾಯಕರು
ಸೋನಿಯಾ
ಗಾಂಧಿಗೂ
75
ತುಂಬಿರುವುದನ್ನು
ಮರೆತದ್ದೇಕೆ?
ಸೋನಿಯಾ
ಗಾಂಧಿ
ಅವರನ್ನು
ಕಡೆಗಣಿಸಲಾಗುತ್ತಿದೆಯೇ?
#ಉತ್ತರಿಸಿಕಾಂಗ್ರೆಸ್
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು
ಪ್ರಶ್ನೆ - 4: ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ನಮ್ಮ ಜನರು ಅನುಭವಿಸುತ್ತಿರುವ ನೋವುಗಳು ವಿರೋಧ ಪಕ್ಷದ ನಾಯಕರ ಆತ್ಮಸಾಕ್ಷಿಯನ್ನು ಚುಚ್ಚಿದಂತೆ ತೋರುತ್ತಿಲ್ಲ. ಸೂತಕದ ವಾತಾವರಣದಲ್ಲೂ ಸಂಭ್ರಮಿಸಿದ್ದೇಕೆ? #ಉತ್ತರಿಸಿಕಾಂಗ್ರೆಸ್
ಪ್ರಶ್ನೆ - 5: ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿರುವಾಗ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಕೋಟಿ ಕೋಟಿ ಖರ್ಚು ಮಾಡಲಾಯಿತು. ಈ ದುಂದುವೆಚ್ಚದ ಲೆಕ್ಕವನ್ನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದರೂ ಕೇಳುವ ಸಮಯ ಬಂದಿದೆ. ಕಾಂಗ್ರೆಸ್ ಬಳಿ ಉತ್ತರವಿದೆಯೇ? #ಉತ್ತರಿಸಿಕಾಂಗ್ರೆಸ್
ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡ ಸಿದ್ದರಾಮಯ್ಯ
ಪ್ರಶ್ನೆ - 6: ತಮ್ಮ ಹುಟ್ಟಿದ ದಿನಾಂಕದ ಬಗ್ಗೆ ಗೊಂದಲ ಇಟ್ಟುಕೊಂಡು ಸಿದ್ದರಾಮಯ್ಯ ಅವರು 75 ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದು ರಾಜಕೀಯ ತೆವಲಿಗಾಗಿ ಅಲ್ಲವೇ ? ಚುನಾವಣಾ ಹೊಸ್ತಿಲಲ್ಲಿಯೇ ಜನ್ಮದಿನ ಆಚರಿಸಿಕೊಂಡಿದ್ದು ಡಿಕೆಶಿ ವಿರುದ್ಧದ ರಾಜಕೀಯ ದಾಳವೇ? #ಉತ್ತರಿಸಿಕಾಂಗ್ರೆಸ್
ಬಿಜೆಪಿಯ ಟ್ವೀಟಿಗೆ ಹಲವು ಕಾಮೆಂಟುಗಳು
ಬಿಜೆಪಿಯ
ಟ್ವೀಟಿಗೆ
ಹಲವು
ಕಾಮೆಂಟುಗಳು
ಬಂದಿದ್ದು,
ಕೆಲವೊಂದು
ಕಾಮೆಂಟುಗಳು
ಹೀಗಿವೆ:
'ನಿಮ್ಮದೇ
ಎರಡು
ಸರಕಾರ
ಆದರೂ
ಇನ್ನೂ
ಮಂತ್ರಿಗಳು
ಹಾನಿಗೊಳಗಾದ
ಪ್ರದೇಶಗಳಿಗೆ
ಭೇಟಿ
ನೀಡದೆ
ನಿದ್ದೆ
ಮಾಡುತ್ತಿರುವುದು
ವಿಪರ್ಯಾಸ..
ಬೆಲೆ
ಏರಿಕೆ
ಮಧ್ಯೆ
ಅಕ್ಕಿ
ಗೋಧಿ
gst
ತಂದಿದ್ದು
ನೀವೇ
ಅಲ್ಲವೇ
.
ಇದನ್ನು
ಪ್ರಶ್ನೆ
ಮಾಡುವ
ತಾಕತ್ತು
ಇಲ್ವಾ...
ಬಿಜೆಪಿ
ಇಂದ
ರಾಜ್ಯಕ್ಕೆ
ಶೂನ್ಯ
ಲಾಭ..'
'ಲೋ
ಅಡ್ಮಿನ್
ಯಾವ
ಊರ್ಲಾ
ನಿಂದು
,
ಜನಾನೆ
ಬಂದಿರಲಿಲ್ಲ
ಕೇವಲ
1
ಲಕ್ಷ
ಬಂದಿರಬಹುದು
ಅಂತಾರೆ.
ನಿಮ್ಮ
ಪಕ್ಷದ
ಮುಖಂಡರು
ಆ
ಎಳಸು
ಕಾರ್ಯಕರ್ತರು
&
Social
media
ಶೂರರು.
ಇನ್ನು
ಕೋಟಿ
ಎಂಗಲ
ಖರ್ಚಾಯ್ತದೆ
ದಡ್ಡ
ಮುಂಡೆದೆ,
ಅಷ್ಟಕ್ಕೂ
ಅದೇನೂ
ಸರ್ಕಾರದ
ದುಡ್ಡಲ್ವಲ್ಲ.
ನಿಮ್ಮ
ವಿಶ್ವಗುರು
ಥರ
ಯೋಗಾಸನ
ಮಾಡೋಕೆಲ್ಲ
ದುಂದು
ವೆಚ್ಚ
ಮಾಡಿಲ್ಲವಲ್ಲ'.