ಜೆಡಿಎಸ್ ಮಹಿಳೆಯಂತೆ ಕಂಡಿರಬೇಕು: ಸಿದ್ದರಾಮಯ್ಯಗೆ ಗೌಡರ ಲೇವಡಿ
Recommended Video
ಬೆಂಗಳೂರು, ಜನವರಿ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಮಹಿಳೆಯೊಂದಿಗೆ ವರ್ತಿಸಿದ ರೀತಿ ವಿರೋಧಪಕ್ಷಗಳ ವಾಗ್ದಾಳಿಗೆ ಪ್ರಮುಖ ಅಸ್ತ್ರವಾಗಿ ದೊರಕಿದೆ.
ಕುಮಾರಸ್ವಾಮಿ ಅವರ ಸರ್ಕಾರ ಕೌರವರದ್ದು, ಸಿದ್ದರಾಮಯ್ಯ ಅವರು ದುಶ್ಯಾಸನ ಎಂದು ಬಿಜೆಪಿ ಲೇವಡಿ ಮಾಡಿತ್ತು.
ಎಳೆದದ್ದು ಮೈಕ್, ಜಾರಿದ್ದು ದುಪ್ಪಟ್ಟಾ: ಅದು ಸಿದ್ರಾಮಣ್ಣನ ದುರಾದೃಷ್ಟ
ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಸದಾನಂದಗೌಡ, ತಮ್ಮನ್ನು ಪ್ರಶ್ನಿಸಿದ ಮಹಿಳೆ ಜೆಡಿಎಸ್ ಚುನಾವಣಾ ಚಿಹ್ನೆಯ ರೀತಿ ಕಾನಿಸಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಮಾನ್ಯ ಸಿದ್ದರಾಮೈಯ್ಯ @siddaramaiah ನವರಿಗೆ ವರುಣಾ ಕ್ಷೇತ್ರದಲ್ಲಿ ತಮ್ಮನ್ನು ಪ್ರಶ್ನೆ ಮಾಡಿದ ಹಸಿರು ಬಣ್ಣದ ಸೀರೆ ತೊಟ್ಟಿರುವ ಮಹಿಳೆ ಜೆಡಿಎಸ್ ಚುನಾವಣಾ ಚಿನ್ಹೆ ತರಹ ಕಂಡಿರಬೇಕು . ತಾವು ಅಧಿಕಾರ ಕಳಕೊಂಡು ಜೆಡಿಎಸ್ ನವರು ಮುಖ್ಯಮಂತ್ರಿಯಾದ ಮೇಲೆ ಹಸಿರು ಬಣ್ಣ ಕಂಡಾಕ್ಷಣ ಸಿಟ್ಟು ನೆತ್ತಿಗೆ ಏರುವುದು ಜಾಸ್ತಿ ಆದಂತಿದೆ . pic.twitter.com/m2bDEviMxO
— Sadananda Gowda (@DVSBJP) 29 January 2019
ಮಾನ್ಯ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಲ್ಲಿ ತಮ್ಮನ್ನು ಪ್ರಶ್ನೆ ಮಾಡಿದ ಹಸಿರು ಬಣ್ಣದ ಸೀರೆ ತೊಟ್ಟಿರುವ ಮಹಿಳೆ ಜೆಡಿಎಸ್ ಚುನಾವಣಾ ಚಿನ್ಹೆ ತರಹ ಕಂಡಿರಬೇಕು. ತಾವು ಅಧಿಕಾರ ಕಳಕೊಂಡು ಜೆಡಿಎಸ್ ನವರು ಮುಖ್ಯಮಂತ್ರಿಯಾದ ಮೇಲೆ ಹಸಿರು ಬಣ್ಣ ಕಂಡಾಕ್ಷಣ ಸಿಟ್ಟು ನೆತ್ತಿಗೆ ಏರುವುದು ಜಾಸ್ತಿ ಆದಂತಿದೆ.
ಸಿದ್ದು ಸಿಟ್ಟು, ಜಮಲಾರ್ ಆವೇಶ, ನಡೆದಿದ್ದೇನು? ತನಿಖೆಗೆ ಆಯೋಗ ಸೂಚನೆ
ಘಟನೆ ನಡೆದ ಸಂದರ್ಭದಿಂದಲೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾಪ್ರಹಾರ ಮುಂದುವರಿಸಿದೆ.
Abusing women cop
— BJP Karnataka (@BJP4Karnataka) 29 January 2019
Passing cheap comments on farmer women
Pulling women’s dupatta & abusing her
Getting into resort & trying to kill MLA’s
No farmer loan waiver
If this is not lafanga politics Mr Maryada Purushothama @siddaramaiah, avare then what is it. Aren’t you ashamed ?
ಮಹಿಳಾ ಪೊಲೀಸರನ್ನು ನಿಂದಿಸುವುದು, ರೈತ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡುವುದು, ಮಹಿಳೆಯ ದುಪ್ಪಟ್ಟಾ ಸೆಳೆಯುವುದು ಮತ್ತು ಆಕೆಯನ್ನು ನಿಂದಿಸುವುದು, ರೆಸಾರ್ಟ್ಗೆ ತೆರಳುವುದು ಮತ್ತು ಶಾಸಕರನ್ನು ಕೊಲ್ಲಲು ಪ್ರಯತ್ನಿಸುವುದು, ರೈತರ ಸಾಲ ಮನ್ನಾ ಮಾಡದೆ ಇರುವುದು.
ಟೇಬಲ್ ಕುಟ್ಟಿ ಮಗನ ವಿರುದ್ಧ ದೂರು:ಮಹಿಳೆ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲ
ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ ಅವರೇ ಇದು ಲಫಂಗ ರಾಜಕಾರಣ ಅಲ್ಲದೆ ಇದ್ದರೆ ಇನ್ನೇನು? ನಿಮಗೆ ನಾಚಿಕೆಯಾಗುತ್ತಿಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.